ಅನ್ನ ರಸಂ, ಲಡ್ಡು ಸೇವಿಸಿ ಮೂವರು ಸಾವು, 11 ಮಕ್ಕಳು ಅಸ್ವಸ್ಥ

Public TV
1 Min Read
Food Poisoning Tamil Nadu

ಚೆನ್ನೈ: ಮನೆಯಲ್ಲಿದ್ದ ವಿಷಪೂರಿತ ಆಹಾರ (Food) ಸೇವಿಸಿ ಮೂವರು ಮಕ್ಕಳು (Children) ಸಾವನ್ನಪ್ಪಿದ್ದು, 11 ಮಂದಿ ಮಕ್ಕಳು ಅಸ್ವಸ್ಥರಾದ ಘಟನೆ ತಮಿಳುನಾಡಿನ (Tamil Nadu) ತಿರುಪ್ಪೂರಿನಲ್ಲಿ ನಡೆದಿದೆ.

ಮಕ್ಕಳೆಲ್ಲರೂ ರಾತ್ರಿ ಊಟಕ್ಕೆ ಅನ್ನ, ರಸಂ ಹಾಗೂ ಲಡ್ಡುವನ್ನು ಸೇವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವರಿಗೆ ವಾಂತಿ ಹಾಗೂ ಭೇದಿ ಕಾಣಿಸಿಕೊಂಡಿದೆ.

crime

ಗುರುವಾರ ಬೆಳಿಗ್ಗೆ ಅವರೆಲ್ಲರೂ ಉಪಹಾರ ಸೇವಿಸಿದ್ದರು. ಇದಾದ ಬಳಿಕ ಅವರ ಸ್ಥಿತಿ ಹದಗೆಟ್ಟಿದೆ. ಅವರಲ್ಲಿದ್ದ ಕೆಲವರು ಪ್ರಜ್ಞಾಹೀನರಾದರು. ಕೂಡಲೇ ಅವರೆಲ್ಲರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೂ ಚಿಕಿತ್ಸೆ ಫಲಕಾರಿಯಾಗದೇ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ನಾಳೆ ಇಡಿ ಕೇಳುವ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡ್ತೀವಿ – ಡಿಕೆಶಿ

POLICE JEEP

ಆಸ್ಪತ್ರೆಗೆ ಭೇಟಿ ನೀಡಿದ್ದ ತಿರುಪುರ್ ಜಿಲ್ಲಾಧಿಕಾರಿ ಎಸ್. ವಿನೀತ್ ಅವರು, ಆಹಾರದಲ್ಲಿ ವಿಷ ಹೇಗೆ ಬಂತು ಎನ್ನುವುದರ ಕುರಿತು ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕೇರಳ ದುರಂತಕ್ಕೆ ಮೋದಿ ಸಂತಾಪ – ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *