Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಕೋಮು ಗಲಭೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ 25 ಲಕ್ಷ ಪರಿಹಾರ – ಶೀಘ್ರದಲ್ಲೇ ಸರ್ಕಾರಿ ಉದ್ಯೋಗ

Public TV
Last updated: June 19, 2023 1:42 pm
Public TV
Share
3 Min Read
Siddaramaiah 4 1
SHARE

* ಬಿಜೆಪಿಯವ್ರು ಹಿಂದೂಗಳಿಗೆ ಮಾತ್ರ ಪರಿಹಾರ ಕೊಟ್ರು
* ಸಿಎಂ ಸಿದ್ದರಾಮಯ್ಯ ಕಿಡಿ

ಬೆಂಗಳೂರು: ರಾಜ್ಯದಲ್ಲಿ ಈ ಹಿಂದೆ ಕೋಮು ಗಲಭೆಯಿಂದ (Communal Riots) ಮೃತಪಟ್ಟವರ ಕುಟುಂಬಕ್ಕೆ ಸೋಮವಾರ ಸಿಎಂ ಸಿದ್ದರಾಮಯ್ಯ (Siddaramaiah) ತಲಾ 25 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ ಮಾಡಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕೋಮು ಗಲಭೆಯಲ್ಲಿ ಹತ್ಯೆಯಾದ ಮಸೂದ್, ಫಾಝಿಲ್, ಜಲೀಲ್, ಸಮೀರ್ ಹಾಗೂ ದೀಪಕ್ ರಾವ್ ಕುಟುಂಗಳಿಗೆ ತಲಾ 25 ಲಕ್ಷ ರೂ. ಪರಿಹಾರ ಚೆಕ್ ವಿತರಣೆ ಮಾಡಿದರು. ಜೊತೆಗೆ ಕುಟುಂಬದ ತಲಾ ಒಬ್ಬರು ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿಯೂ ಭರವಸೆ ನೀಡಿದರು.

Siddaramaiah 2 4

ಬಳಿಕ ಮಾತನಾಡಿದ ಸಿಎಂ, ಬಿಜೆಪಿ ಸರ್ಕಾರ (BJP Government) ಇದ್ದಾಗ ಕೋಮುಗಲಭೆಗಳಲ್ಲಿ ಮೃತಪಟ್ಟವರಿಗೆ 25 ಲಕ್ಷ ಪರಿಹಾರ ಕೊಟ್ಟಿದಾರೆ. ಆದ್ರೆ ಬಿಜೆಪಿಯವರು ಎಲ್ಲರಿಗೂ ಪರಿಹಾರ ಕೊಟ್ಟಿಲ್ಲ, ಹಿಂದೂಗಳಿಗೆ (Hindus) ಮಾತ್ರ ಪರಿಹಾರ ಕೊಟ್ಟಿದ್ದಾರೆ. ಮುಸ್ಲಿಮರೂ ಕೋಮು ಗಲಭೆಗಳಲ್ಲಿ ಮೃತಪಟ್ಟಿದ್ದಾರೆ. ಸರ್ಕಾರ ಎಲ್ಲ ಧರ್ಮದವರನ್ನ ಸಮಾನವಾಗಿ ಕಾಣಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಬೆಂಗ್ಳೂರಲ್ಲಿ ಮತ್ತೆ ಬುಲ್ಡೋಜರ್ ಸದ್ದು – ರಾಜಕಾಲುವೆ ಒತ್ತುವರಿ ತೆರವು ವೇಳೆ ಭಾರೀ ಹೈಡ್ರಾಮಾ

ಕೋಮುಗಲಭೆಯಲ್ಲಿ ಮುಸಲ್ಮಾನರೂ (Muslims) ಸತ್ತಿದ್ದಾರೆ ಪರಿಹಾರ ಕೊಡಿ ಅಂತಾ ನಾನು ಸದನದಲ್ಲಿ ಪ್ರಸ್ತಾಪ ಮಾಡಿದ್ದೆ, ಬಿಜೆಪಿಯವರು ನೋಡ್ತೀವಿ, ಕೊಡ್ತೀವಿ ಅಂತಾ ಹೇಳಿ ಕೊಡಲೇ ಇಲ್ಲ. ಈಗ ನಮ್ಮ ಸರ್ಕಾರ ಪರಿಹಾರ ಕೊಡ್ತಿದೆ ಎಂದು ತಿಳಿಸಿದರು.

Siddaramaiah 6 1

ಬಿಜೆಪಿಯವರು ಹರ್ಷ ಮತ್ತು ಪ್ರವೀಣ್ ನೆಟ್ಟಾರು ಕುಟುಂಬದವರಿಗೆ ಮಾತ್ರ ತಲಾ 25 ಲಕ್ಷ ಪರಿಹಾರ ಕೊಟ್ಟಿದ್ದಾರೆ. ಕುಟುಂಬದವರಿಗೆ ಒಂದೊಂದು ಕೆಲಸವನ್ನೂ ಕೊಟ್ಟಿದ್ದಾರೆ. ಅದು ಸರಿಯಿದೆ, ಆದ್ರೆ ಬೇರೆಯವರಿಗೂ ಕೊಡಬೇಕಲ್ಲ, ಆ ಕೆಲಸ ಬಿಜೆಪಿ ಮಾಡಲಿಲ್ಲ. ಮಸೂದ್, ಫಾಜೀಲ್, ಅಬ್ದುಲ್ ಜಲೀಲ್, ಇದ್ರಿಸ್ ಪಾಷ, ಸಮೀರ್, ದೀಪಕ್ ರಾವ್ ಈ 6 ಜನರ ಕುಟುಂಬಗಳಿಗೆ ಪರಿಹಾರ ಕೊಡಲಿಲ್ಲ. ಇವರ ಕುಟುಂಬಗಳಿಗೆ ಭೇಟಿ ಕೊಟ್ಟು ಸಾಂತ್ವನ ಹೇಳುವ ಕೆಲಸವನ್ನೂ ಬೊಮ್ಮಾಯಿ ಮಾಡಲಿಲ್ಲ. ನಾವು ಈಗ ಈ 6 ಜನರ ಕುಟುಂಬಗಳಿಗೆ ಪರಿಹಾರ ಕೊಟ್ಟಿದ್ದೇವೆ. ಮುಂದೆ ಕುಟುಂಬದ ತಲಾ ಒಬ್ಬ ಸದಸ್ಯರಿಗೆ ಸರ್ಕಾರಿ ಕೆಲಸವನ್ನೂ ಕೊಡ್ತೀವಿ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಅಪಘಾತಕ್ಕೀಡಾಗಿ ಮೆದಳು ನಿಷ್ಕ್ರಿಯ- ಮಗನ ಶವಕ್ಕೆ ಮುತ್ತಿಟ್ಟು ಅಂಗಾಂಗ ದಾನಕ್ಕೆ ತಾಯಿ ಒಪ್ಪಿಗೆ

Siddaramaiah 3 1

ಬಿಜೆಪಿ ಮಾಡಿರುವ ತಾರತಮ್ಯವನ್ನ ನಾವು ಸರಿಪಡಿಸುವ ಕೆಲಸ ಮಾಡ್ತೇವೆ. ಹತ್ಯೆಯಾದವರ ಕುರಿತು ತನಿಖೆಯನ್ನು ಪಾರದರ್ಶಕವಾಗಿ, ಕಾನೂನಾತ್ಮಕವಾಗಿ ಮಾಡ್ತೀವಿ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸ್ತೀವಿ. ಇನ್ಮುಂದೆ ಕೋಮು ಗಲಭೆಗಳಿಗೆ, ನೈತಿಕ ಪೊಲೀಸ್ ಗಿರಿಗೆ ಕಡಿವಾಣ ಹಾಕುತ್ತೇವೆ. ಯಾರಿಗೂ ಕಾನೂನು ಕೈಗೆ ತೆಗೆದುಕೊಳ್ಳೋದಕ್ಕೆ ಬಿಡಲ್ಲ. ನಮ್ಮ ಸರ್ಕಾರ ಎಲ್ಲರ ರಕ್ಷಣೆ ಮಾಡಲಿದೆ. ಎಲ್ಲ ಧರ್ಮದವರ ರಕ್ಷಣೆ ಮಾಡ್ತೇವೆ, ಅದು ನಮ್ಮ ಜವಾಬ್ದಾರಿ. ಧರ್ಮಗಳ ನಡುವೆ ನಾವು ತಾರತಮ್ಯ ಮಾಡಲ್ಲ. ನಮಗೆ ಹಿಂದೂ ಮುಸ್ಲಿಂ, ಜೈನ, ಬೌದ್ಧ, ಕ್ರೈಸ್ತರು ಎಲ್ಲರೂ ಒಂದೇ. ಯಾರದ್ದೇ ಹತ್ಯೆ ಇರಲಿ ಕಾನೂನು ರೀತಿ ತನಿಖೆ ಮಾಡ್ತೀವಿ ಎಂದು ಗುಡುಗಿದರು.

Siddaramaiah 1 6

ಅಕ್ಕಿ ಕೊಟ್ಟೇ ಕೊಡ್ತೀವಿ:
ಅಕ್ಕಿ ವಿತರಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಆಂಧ್ರ, ತೆಲಂಗಾಣ, ಪಂಜಾಬ್ ರಾಜ್ಯಗಳಿಂದ ಅಕ್ಕಿ ಸಿಕ್ತಿಲ್ಲ. ಛತ್ತೀಸ್‌ಗಡದಿಂದ 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಮಾತ್ರ ಸಿಗುತ್ತೆ. ಬಡವರಿಗೆ ಅಕ್ಕಿ ಕೊಡುವ ವಿಚಾರದಲ್ಲೂ ಬಿಜೆಪಿಯವರು ರಾಜಕೀಯ ಮಾಡ್ತಿದ್ದಾರೆ. ಅವರು ಏನೇ ರಾಜಕೀಯ ಮಾಡಿದ್ರು ನಾವು ರಾಜ್ಯದ ಜನರಿಗೆ ಅಕ್ಕಿ ಕೊಟ್ಟೇ ಕೊಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಗಿ ಎರಡು ಕೆಜಿ 6 ತಿಂಗಳವರೆಗೆ ಮಾತ್ರ ಕೊಡಬಹುದು. 5 ಕೆಜಿ ರಾಗಿ ಕೊಡಕ್ಕಾಗಲ್ಲ, ಅಷ್ಟು ಸ್ಟಾಕ್ ಇಲ್ಲ. ಹಳೇ ಮೈಸೂರು ಕಡೆ ಎರಡು ಕೆಜಿ ರಾಗಿ, ಉತ್ತರ ಕರ್ನಾಟಕ ಕಡೆ ಎರಡು ಕೆಜಿ ಗೋಧಿ ಕೊಡಬಹುದು. ಆದ್ರೆ ಉಳಿದ ಮೂರು ಕೆಜಿ ಅಕ್ಕಿ ಎಲ್ಲಿಂದ ತರೋಣ? ಈಗ ನಾವು ನಾಫೆಡ್, ಎನ್‌ಸಿಸಿಎಫ್ ಮತ್ತು ಕೇಂದ್ರಿಯ ಭಂಡಾರ್ ಗಳಿಂದ ಅಕ್ಕಿ ಖರೀದಿಗೆ ಮುಂದಾಗಿದ್ದೇವೆ. ಈ ಮೂರೂ ಕೇಂದ್ರದ ಸಂಸ್ಥೆಗಳಿಂದ ಕೊಟೇಷನ್ ಕೇಳಿದ್ದೇವೆ. ಅವರು ಎಷ್ಟು ಅಕ್ಕಿ ಕೊಡ್ತಾರೆ ಅನ್ನೋದನ್ನ ನೋಡಿಕೊಂಡು ಮುಂದಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸಚಿವರಾದ ಜಮೀರ್ ಅಹ್ಮದ್ ಖಾನ್, ಚೆಲುವರಾಯಸ್ವಾಮಿ, ಶಾಸಕ ತನ್ವೀರ್ ಸೇಟ್, ಸಲೀಂ ಅಹಮದ್, ನಜೀರ್ ಅಹಮದ್ ಮತ್ತಿತರರು ಭಾಗಿಯಾಗಿದ್ದರು.

TAGGED:Basavaraj BommaibjpBS Yediyurappacommunal riotscongressDK Shivakumargovernment jobPraveen Nettarusiddaramaiahಕಾಂಗ್ರೆಸ್ಕೋಮು ಗಲಭೆಬಿಜೆಪಿಸರ್ಕಾರಿ ಕೆಲಸಸಿದ್ದರಾಮಯ್ಯ
Share This Article
Facebook Whatsapp Whatsapp Telegram

Cinema Updates

Vajreshwari Combines
ಪಾರ್ವತಮ್ಮ ರಾಜ್‌ಕುಮಾರ್ ಕನಸಿನ ಕೂಸಿಗೆ 50 ವರ್ಷ
Cinema Latest Sandalwood Top Stories
Darshan in Thailand 1
ದರ್ಶನ್‌ಗೆ ನೋ ಟೆನ್ಷನ್ – ಜಾಲಿ ಮೂಡಲ್ಲಿ ಥಾಯ್ಲೆಂಡ್‌ನಲ್ಲಿ ಬಿಂದಾಸ್‌ ಪಾರ್ಟಿ
Cinema Latest Sandalwood Top Stories
ram charan sukumar
ಹೊಸ ವರ್ಷಕ್ಕೆ ಪುಷ್ಪಾ ಡೈರೆಕ್ಟರ್ ಜೊತೆ ರಾಮ್‌ಚರಣ್ ಸಿನಿಮಾ..!?
Cinema Latest South cinema Top Stories
vijay deverakonda 4
ದಿಢೀರ್‌ ಆಸ್ಪತ್ರೆಗೆ ದಾಖಲಾದ ನಟ ವಿಜಯ್‌ ದೇವರಕೊಂಡ
Cinema Latest National South cinema Top Stories
vishnuvardhan karnataka ratna
ನಟ ವಿಷ್ಣುವರ್ಧನ್‌ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ಮನವಿ
Cinema Latest Main Post Sandalwood

You Might Also Like

Koppal Yoga Teacher Dies by HeartAttack
Districts

ಕೊಪ್ಪಳ | ಹೃದಯಾಘಾತಕ್ಕೆ ಯೋಗ ಶಿಕ್ಷಕ ಬಲಿ – ಎರಡೇ ದಿನದಲ್ಲಿ ಮೂರು ಸಾವು

Public TV
By Public TV
6 minutes ago
Pahalgam Terror Attack 2 1
Latest

ಪಹಲ್ಗಾಮ್‌ ದಾಳಿಯ ಹೊಣೆ ಹೊತ್ತಿದ್ದ ಟಿಆರ್‌ಎಫ್‌ನ್ನು ಉಗ್ರ ಸಂಘಟನೆ ಪಟ್ಟಿಗೆ ಸೇರಿಸಿದ ಅಮೆರಿಕ

Public TV
By Public TV
10 minutes ago
Praveen
Bagalkot

ಚಿಕ್ಕಮಗಳೂರು | ವಿದ್ಯುತ್ ಶಾಕ್‍ಗೆ ನವವಿವಾಹಿತ ಲೈನ್‍ಮೆನ್ ಬಲಿ

Public TV
By Public TV
11 minutes ago
Arvind Kejriwal Rahul Gandhi
Latest

ಇಂಡಿಯಾ ಒಕ್ಕೂಟದಿಂದ ಹೊರಬಂದ ಆಪ್‌ – ಎಎಪಿ ನಾಯಕ ಸಂಜಯ್‌ ಸಿಂಗ್‌ ಹೇಳಿಕೆ

Public TV
By Public TV
14 minutes ago
Pralhad Joshi
Karnataka

NLCILಗೆ ಹೂಡಿಕೆ ವಿನಾಯಿತಿಗೆ ಕೇಂದ್ರ ಸಂಪುಟ ಅಸ್ತು – 7,000 ಕೋಟಿ ಹೂಡಿಕೆ, ಜಂಟಿ ಉದ್ಯಮಕ್ಕೆ ಅವಕಾಶ

Public TV
By Public TV
17 minutes ago
Siddaramaiah 4
Districts

ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ ಮಾಡಿಸಿದ್ದು ನಾನು, ಮಹದೇವಪ್ಪ: ಸಿದ್ದರಾಮಯ್ಯ

Public TV
By Public TV
21 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?