ಬೆಳಗಾವಿ: ಕೃಷ್ಣಾ ನದಿಯಲ್ಲಿ ಮೀನುಗಾರರ ಬಲೆಗೆ ಬಿದ್ದವು 22 ಮೊಸಳೆ ಮರಿಗಳು!

Public TV
1 Min Read
MOSALE

ಬೆಳಗಾವಿ: ಕೃಷ್ಣಾ ನದಿ ದಡದಲ್ಲಿ 22 ಮೊಸಳೆ ಮರಿಗಳು ಸೇರಿದಂತೆ 6 ಮೊಟ್ಟೆಗಳು ಪತ್ತೆಯಾಗಿ ನದಿ ತೀರದ ಜನರಲ್ಲಿ ಆತಂಕ ಮೂಡಿಸಿದ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ನಡೆದಿದೆ.

vlcsnap 2017 06 10 16h31m15s30

ಇಂದು ಬೆಳಗ್ಗೆ ಎಂದಿನಂತೆ ಮೀನುಗಾರರು ಮೀನು ಹಿಡಿಯಲು ಕೃಷ್ಣಾ ನದಿ ತೀರದಲ್ಲಿ ಬಲೆಯನ್ನು ಹಾಕಿದ್ದರು. ಆದರೆ ಆ ಬಲೆಗೆ ಮೀನುಗಳ ಬದಲಾಗಿ ಮೊಸಳೆ ಮರಿಗಳು ಬಿದ್ದಿವೆ. ಇದರಿಂದ ಆತಂಕಗೊಂಡ ಮೀನುಗಾರರು ಕೆಲ ಹೊತ್ತು ಆ ಮರಿಗಳನ್ನು ಏನು ಮಾಡಬೇಕು ಎಂದು ತೊಚದಂತಾಗಿದ್ದರು.

ನಂತರ ಹಿರಿಯರ ಸಲಹೆ ಮೇರೆಗೆ ಅವುಗಳನ್ನ ಸುರಕ್ಷಿತವಾಗಿ ಹೊರಗಡೆ ತಂದು ಅರಣ್ಯ ಇಲಾಖೆಯವರಿಗೆ ಕರೆ ಮಾಡಿ, ಮೊಸಳೆಗಳನ್ನ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ.

vlcsnap 2017 06 10 16h33m37s225

vlcsnap 2017 06 10 16h33m12s228

vlcsnap 2017 06 10 16h32m42s197

Share This Article
Leave a Comment

Leave a Reply

Your email address will not be published. Required fields are marked *