ಬೆಂಗಳೂರು: 2020 ಸತ್ವ ಪರೀಕ್ಷೆಯ ವರ್ಷವಾಗಿದ್ದು, ಈ ಶುಭದಿನ ಎಲ್ಲರ ಜೀವನವನ್ನು ಮೊದಲಿನಂತಾಗಲಿ ಎಂದು ಹಾರೈಸಿ ಅಭಿನಯ ಚಕ್ರವರ್ತಿ ಸುದೀಪ್ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಟ್ವೀಟ್ ಮೂಲಕ ಕನ್ನಡಿಗರಿಗೆ ಸುದೀಪ್ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಸ್ವಲ್ಪ ಖುಷಿ, ಜಾಸ್ತಿ ಕಷ್ಟಗಳನ್ನು ಕಂಡಿದ್ದೇವೆ. ದುಃಖದಲ್ಲಿ ಒಬ್ಬರಿಗೊಬ್ಬರು ಆಸರೆಯಾಗಿ ನಿಂತಿದ್ದೇವೆ. ಇದೇ ಪ್ರೀತಿ, ನಂಬಿಕೆ ಮತ್ತು ಒಗ್ಗಟ್ಟಿನಿಂದ ಈ ವರ್ಷ ಕಳೆಯಬೇಕು ಮತ್ತು ಉಳಿಯಬೇಕು. ಈ ಶುಭದಿನ ಎಲ್ಲರ ಜೀವನವನ್ನು ಮೊದಲಿನಂತಾಗಿಸಲಿ. ಕನ್ನಡಿಗರೆಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
2020 ಸತ್ವಪರೀಕ್ಷೆಯ ವರ್ಷ!
ಸ್ವಲ್ಪ ಖುಷಿ, ಜಾಸ್ತಿ ಕಷ್ಟಗಳನ್ನು ಕಂಡಿದ್ದೇವೆ. ದುಃಖದಲ್ಲಿ ಒಬ್ಬರಿಗೊಬ್ಬರು ಆಸರೆಯಾಗಿ ನಿಂತಿದ್ದೇವೆ. ಇದೇ ಪ್ರೀತಿ, ನಂಬಿಕೆ ಮತ್ತು ಒಗ್ಗಟ್ಟಿನಿಂದ ಈ ವರ್ಷ ಕಳೆಯಬೇಕು ಮತ್ತು ಉಳಿಯಬೇಕು. ಈ ಶುಭದಿನ ಎಲ್ಲರ ಜೀವನವನ್ನು ಮೊದಲಿನಂತಾಗಿಸಲಿ.
ಕನ್ನಡಿಗರೆಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು pic.twitter.com/n2J8uYiaRp
— Kichcha Sudeepa (@KicchaSudeep) July 31, 2020
ಇಂದು ನಾಡಿನಾದ್ಯಂತ ಕೊರೊನಾ ಆತಂಕದ ನಡುವೆಯೂ ಜನರು ವರಮಹಾಲಕ್ಷ್ಮಿ ಹಬ್ಬ ಆಚರಿಸುತ್ತಿದ್ದಾರೆ. ಸದ್ಯ ಫ್ಯಾಂಟಮ್ ಸಿನಿಮಾದ ಚಿತ್ರೀಕರಣದಲ್ಲಿ ಸುದೀಪ್ ತೊಡಗಿಕೊಂಡಿದ್ದಾರೆ. ದಟ್ಟಾರಣ್ಯದಲ್ಲಿ ವಿಕ್ರಾಂತ್ ರೋಣನ ಹುಡುಕಾಟದ ಸಣ್ಣ ಝಲಕ್ ರಿವೀಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿತ್ತು.