Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • Live TV
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Election News

2009: ಮತ್ತೆ ಯುಪಿಎ ‘ಕೈ’ ಹಿಡಿದ ಜನ – ಇನ್ನಷ್ಟು ಕುಸಿದ ಬಿಜೆಪಿ

Public TV
Last updated: May 17, 2024 3:24 pm
Public TV
Share
4 Min Read
Lok Sabha Elections 2009
SHARE

– 2ನೇ ಅವಧಿಗೆ ಪ್ರಧಾನಿಯಾದ ಮನಮೋಹನ್‌ ಸಿಂಗ್‌
– ದೇಶ ಗೆದ್ದರೂ ಕರ್ನಾಟಕದಲ್ಲಿ ಕುಸಿದ ಕಾಂಗ್ರೆಸ್‌

ಪಬ್ಲಿಕ್‌ ಟಿವಿ
2004 ರಲ್ಲಿ ಮನಮೋಹನ್ ಸಿಂಗ್ (Manmohan Singh) ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (UPA) ಸರ್ಕಾರ ಐದು ವರ್ಷಗಳ ಪೂರ್ಣ ಆಡಳಿತ ನಡೆಸಿತು. ಸ್ಥಿರ ಸರ್ಕಾರದ ಆಡಳಿತಕ್ಕೆ ತನ್ನ ಮೈತ್ರಿ ಪಾಲುದಾರರನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಯಿತು. ಅಚ್ಚರಿ ಎಂಬಂತೆ ಪ್ರಧಾನಿ ಸ್ಥಾನ ಅಲಂಕರಿಸಿದ್ದ ಮನಮೋಹನ್ ಸಿಂಗ್ ವಿವಾದಾತ್ಮಕವಲ್ಲದ ವ್ಯಕ್ತಿಯಾಗಿ ಸ್ಥಿರವಾದ ಮೈತ್ರಿ ಹಡಗನ್ನು ಮುನ್ನಡೆಸಿದರು. ಆದರೂ ಅವರು ಕೇವಲ ವಾಸ್ತವಿಕ ಪ್ರಧಾನ ಮಂತ್ರಿ, ಆಡಳಿತದ ಚುಕ್ಕಾಣಿ ಸೋನಿಯಾರ ಕೈಯಲ್ಲಿದೆ ಎಂಬ ಆರೋಪಗಳು ಕೇಳಿಬಂದಿದ್ದವು.

ಭಾರತದ ಜಿಡಿಪಿ ಹೆಚ್ಚಳ
ಯುಪಿಎ ಸರ್ಕಾರದ ಮೊದಲ ಐದು ವರ್ಷಗಳ ಆಡಳಿತದಲ್ಲಿ ಭಾರತವು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಎಲ್ಲಾ ಕ್ಷೇತ್ರಗಳಲ್ಲೂ ಸುಧಾರಣೆ ಕಂಡಿತು ಎಂದು ವಿಶ್ಲೇಷಿಸಲಾಗಿದೆ. ಭಾರತದ ಜಿಡಿಪಿ ಬೆಳವಣಿಗೆ ದರವು ವಾಜಪೇಯಿ ಅವರ ಅವಧಿಯಲ್ಲಿ ಶೇ.8 ರಷ್ಟು ಮುಟ್ಟಿತ್ತು. ಆದರೆ ಅದು ಮನಮೋಹನ್ ಸಿಂಗ್ ಅವರ ಆಡಳಿತದಲ್ಲಿ ಶೇ.9 ಕ್ಕೆ ಏರಿತು. 2008 ರ ಜಾಗತಿಕ ಆರ್ಥಿಕ ಬಿಕ್ಕಟ್ಟ ಎದುರಾಗಿತ್ತು. ಆಗ ಭಾರತದ ಜಿಡಿಪಿ (GDP) ಬೆಳವಣಿಗೆ ದರವು ಶೇ.6.7 ಆಗಿತ್ತು. ಇದನ್ನೂ ಓದಿ: 2004: ಎನ್‌ಡಿಎ ಔಟ್‌.. ಯುಪಿಎ ಇನ್‌ – ಗಾಂಧಿಯೇತರ ನಾಯಕನಿಗೆ ಪ್ರಧಾನಿ ಪಟ್ಟ

manmohan singh

ಇಂಡೋ-ಯುಎಸ್‌ ಪರಮಾಣು ಒಪ್ಪಂದಕ್ಕೆ ಮೈತ್ರಿಯಲ್ಲೇ ವಿರೋಧ
ಮನಮೋಹನ್ ಸರ್ಕಾರದ ಅಡಿಯಲ್ಲಿ ಭಾರತವು ತನ್ನ ರಫ್ತಿನ ಪಾಲನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಯಿತು. ಶಿಕ್ಷಣವನ್ನು ವಿಸ್ತರಿಸಲಾಯಿತು. NREGA ದಂತಹ ಉದ್ಯೋಗ ಯೋಜನೆಗಳನ್ನು ತರಲಾಯಿತು. ಮಾಹಿತಿ ಹಕ್ಕು ಕಾಯ್ದೆಯನ್ನು ಅಂಗೀಕರಿಸಲಾಯಿತು. ಸ್ಥಿರ ಆಡಳಿತದ ನಡುವೆಯೂ ಸರ್ಕಾರಕ್ಕೆ ಹಲವು ಸವಾಲುಗಳಿದ್ದವು. ಇಂಡೋ-ಯುಎಸ್ ಪರಮಾಣು ಒಪ್ಪಂದವು ಯುಪಿಎ ಮತ್ತು ವಿರೋಧ ಪಕ್ಷಗಳ ನಡುವೆ ಹಾಗೂ ಯುಪಿಎಯೊಳಗೆ ಘರ್ಷಣೆ ಉಂಟು ಮಾಡಿತ್ತು. ಎಡರಂಗವು ಈ ಒಪ್ಪಂದವನ್ನು ತೀವ್ರವಾಗಿ ವಿರೋಧಿಸಿತು. ಮನಮೋಹನ್ ಸಿಂಗ್ ಮತ್ತು ಯುಎಸ್ ಅಧ್ಯಕ್ಷ ಜಾರ್ಜ್ ಬುಷ್ ಅವರು ಒಪ್ಪಂದಕ್ಕೆ ಸಹಿ ಹಾಕಿದ್ದು, ಆಡಳಿತ ಮೈತ್ರಿಕೂಟದ ಅನೇಕ ನಾಯಕರು ಮತ್ತು ವಿಪಕ್ಷಗಳ ವಿರೋಧಕ್ಕೆ ಕಾರಣವಾಗಿತ್ತು. ಆದರೂ ಸಿಂಗ್ ಸರ್ಕಾರವು ಯಶಸ್ವಿಯಾಗಿ ಐದು ವರ್ಷ ಪೂರ್ಣ ಆಡಳಿತ ನಡೆಸಿತು.

35 ರಾಜ್ಯಗಳು, 28 ದಿನ ಚುನಾವಣೆ
15ನೇ ಸಾರ್ವತ್ರಿಕ ಚುನಾವಣೆಯು ಏಪ್ರಿಲ್ 16 ರಿಂದ ಮೇ 13 ರ ವರೆಗೆ ನಡೆಯಿತು. 35 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 28 ದಿನ ಮತದಾನ ನಡೆಯಿತು. ಇದನ್ನೂ ಓದಿ: 1999: ಮತ್ತೆ ಪ್ರಧಾನಿಯಾದ ‘ಅಜಾತಶತ್ರು’ – 5 ವರ್ಷ ಪೂರ್ಣ ಆಡಳಿತ ನಡೆಸಿದ ಮೊದಲ ಬಿಜೆಪಿ ನಾಯಕ

BJP Congress

ಚುನಾವಣೆಯಲ್ಲಿ 7 ರಾಷ್ಟ್ರೀಯ ಹಾಗೂ 34 ಪ್ರಾದೇಶಿಕ ಪಕ್ಷಗಳು ಸೇರಿ ಒಟ್ಟಾರೆ 363 ಪಕ್ಷಗಳು ಸ್ಪರ್ಧೆ ಮಾಡಿದ್ದರು.

ಒಟ್ಟು ಕ್ಷೇತ್ರಗಳು: 543

ಅಭ್ಯರ್ಥಿಗಳು: 8,070

ಮತದಾರರ ವಿವರ
ಒಟ್ಟು ಮತದಾರರು: 71,69,85,101
ಪುರುಷರು: 37,47,58,801
ಮಹಿಳೆಯರು: 34,22,26,300

ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ಕಾಂಗ್ರೆಸ್ – 206
ಬಿಜೆಪಿ – 116
ಬಿಎಸ್‌ಪಿ – 21
ಸಿಪಿಐ(ಎಂ) – 16
ಎನ್‌ಸಿಪಿ – 9
ಆರ್‌ಜೆಡಿ – 4
ಸಿಪಿಐ – 4

manmohan singh sonia gandhi rahul gandhi

ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ
2009 ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬೆಂಬಲಿಸಬಹುದು ಎಂಬ ಊಹಾಪೋಹ ಇತ್ತು. ಆದರೆ ಯುಪಿಎ ಮತ್ತೆ ಅಧಿಕಾರಕ್ಕೆ ಬಂದರೆ ಮನಮೋಹನ್ ಸಿಂಗ್ ಅವರನ್ನೇ ಪ್ರಧಾನಿಯಾಗಿ ಮುಂದುವರಿಸಲಾಗುವುದು ಎಂದು ಸೋನಿಯಾ ಗಾಂಧಿ ಘೋಷಿಸಿದ್ದರು. ಅದರಂತೆ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಿತು. ಯುಪಿಎ ಮೈತ್ರಿಕೂಟ ಮತ್ತೆ ಸರ್ಕಾರ ರಚಿಸಿತು. ಇದನ್ನೂ ಓದಿ: 1998: ಮತ್ತೆ ದಿಲ್ಲಿ ಗದ್ದುಗೆಯೇರಿದ ವಾಜಪೇಯಿ – ಕರ್ನಾಟಕದಲ್ಲಿ ಬಿಜೆಪಿ ಎರಡಂಕಿಗೆ ಜಿಗಿತ

ಕುಸಿತ ಕಂಡ ಬಿಜೆಪಿ
2004 ರ ಚುನಾವಣೆಯಲ್ಲಿ 138 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ 2009 ರ ಚುನಾವಣೆಗೆ 22 ಸ್ಥಾನಗಳ ಕುಸಿತ ಕಂಡಿತು. 116 ಸ್ಥಾನಗಳನ್ನು ಮಾತ್ರ ಗೆದ್ದಿತು. ಮತಗಳ ಪ್ರಮಾಣ 22.16% ಗೆ ಕುಸಿತ ಕಂಡಿತು. ಕಾಂಗ್ರೆಸ್ 2004 ರಲ್ಲಿ 145 ಸ್ಥಾನ ಇದ್ದಿದ್ದು, 2009 ಕ್ಕೆ 206 ಸ್ಥಾನಗಳಲ್ಲಿ ಗೆಲುವು ಸಾಧಿಸಿ, 61 ಸೀಟ್‌ಗಳನ್ನು ಹೆಚ್ಚಿಸಿಕೊಂಡಿತು. ಮತಗಳ ಪ್ರಮಾಣ 26.53% ಗೆ ಏರಿಕೆ ಕಂಡಿತು. ಬಹುಜನ ಸಮಾಜ ಪಕ್ಷ (21) ಮತ್ತು ಎಐಎಡಿಎಂಕೆ (9) ಚುನಾವಣೆಯಲ್ಲಿ ಉತ್ತಮ ಫಲಿತಾಂಶದೊಂದಿಗೆ ಗಮನ ಸೆಳೆದವು.

ಕರ್ನಾಟಕದಲ್ಲಿ ಏನಾಗಿತ್ತು?
ಬಿಜೆಪಿ – 19
ಕಾಂಗ್ರೆಸ್ – 6
ಜೆಡಿಎಸ್ – 3

ದಶಕದಿಂದ ಎರಡಂಕಿ ದಾಟದ ಕಾಂಗ್ರೆಸ್‌
1999 ರಲ್ಲಿ ಕಾಂಗ್ರೆಸ್ ಪಕ್ಷ 18 ಸ್ಥಾನಗಳನ್ನು ಗೆದ್ದಿತ್ತು. 2004 ರಲ್ಲಿ ಇದು 8 ಕ್ಕೆ ಇಳಿಯಿತು. 2009 ರಲ್ಲಿ 6 ಕ್ಕೆ ಸೀಮಿತವಾಯಿತು. ಆದರೆ ಬಿಜೆಪಿ ಎರಡಂಕಿಯೊಂದಿಗೆ ಏರುಗತಿಯಲ್ಲಿ ಸಾಗಿದೆ. ಇದನ್ನೂ ಓದಿ: 1996: ವಾಜಪೇಯಿ ಪ್ರಧಾನಿಯಾಗಿದ್ದು ಕೇವಲ 16 ದಿನ, ನಂತರ ಬಂದ್ರು ದೇವೇಗೌಡ್ರು!

TAGGED:2009 Lok Sabha Elections2009 ಲೋಕಸಭಾ ಚುನಾವಣೆLok Sabha elections 2024Manmohan Singhndaupaಎನ್‍ಡಿಎಮನಮೋಹನ್ ಸಿಂಗ್ಯುಪಿಎಲೋಕಸಭಾ ಚುನಾವಣೆ 2024
Share This Article
Facebook Whatsapp Whatsapp Telegram

Cinema Updates

Kantara
ಕಾಂತಾರ ಚಾಪ್ಟರ್-1 | ದೈವದ ನೇಮೋತ್ಸವ ಚಿತ್ರೀಕರಣಕ್ಕೂ ಮುನ್ನವೇ ಸಹ ಕಲಾವಿದ ಸಾವು
18 hours ago
Kantara 3
ʻಕಾಂತಾರ ಚಾಪ್ಟರ್-1ʼಗೆ ಸಾಲು ಸಾಲು ವಿಘ್ನ – ಒಂದೇ ತಿಂಗಳಲ್ಲಿ ಮೂರು ಸಾವು!
18 hours ago
Kantara Death copy
ಕಾಂತಾರ ಚಾಪ್ಟರ್-1 ಚಿತ್ರದ ಸಹ ಕಲಾವಿದ ವಿಜು ಹೃದಯಾಘಾತದಿಂದ ಸಾವು
19 hours ago
India House Movie
`ದಿ ಇಂಡಿಯಾ ಹೌಸ್ʼ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ನೀರಿನ ಟ್ಯಾಂಕರ್‌ ಸ್ಫೋಟ – ಹಲವರಿಗೆ ಗಾಯ
20 hours ago

You Might Also Like

pat cummins
Cricket

ಕಮ್ಮಿನ್ಸ್‌ ಬೆಂಕಿ ಬೌಲಿಂಗ್‌ – 218 ರನ್‌ ಮುನ್ನಡೆಯಲ್ಲಿ ಆಸ್ಟ್ರೇಲಿಯಾ

Public TV
By Public TV
8 hours ago
HM Revannas wife has passed away
Bengaluru City

ಕಾಂಗ್ರೆಸ್‌ ನಾಯಕ ಹೆಚ್‌.ಎಂ ರೇವಣ್ಣ ಪತ್ನಿ ನಿಧನ

Public TV
By Public TV
8 hours ago
friday 13
Latest

ಏನಿದು Unlucky Day – 13ನೇ ತಾರೀಖು, ಶುಕ್ರವಾರ ಒಟ್ಟಿಗೆ ಬಂದರೆ ಏನಾಗುತ್ತೆ?

Public TV
By Public TV
8 hours ago
pilot Pooja
Bengaluru City

Mayday ಅಂದ್ರೆ ವಿಮಾನ ತುಂಬಾ ಡೆಂಜರ್‌ನಲ್ಲಿದ್ದಂತೆ – ದುರಂತದ ಬಗ್ಗೆ ಯುವ ಮಹಿಳಾ ಪೈಲಟ್ ಹೇಳಿದ್ದೇನು?

Public TV
By Public TV
8 hours ago
PAYAL
Latest

ಕನಸಿನ ಕೋರ್ಸ್‌ಗಾಗಿ ಲಂಡನ್‌ಗೆ ಹೊರಟಿದ್ದ ಯುವತಿಯ ದುರಂತ ಅಂತ್ಯ!

Public TV
By Public TV
8 hours ago
Nganthoi Sharma
Latest

ವಿಮಾನ ಪತನ – ಗಗನಸಖಿಯ ಫೋಟೋ ಹಿಡಿದು ಕಣ್ಣೀರಿಟ್ಟ ಕುಟುಂಬಸ್ಥರು

Public TV
By Public TV
9 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?