ದಾಯಾದಿಗಳ ಕಲಹಕ್ಕೆ 200 ಅಡಿಕೆ ಮರಗಳು ಬಲಿ!

Public TV
1 Min Read
DVG copy

ದಾವಣಗೆರೆ: ದಾಯಾದಿಗಳ ದ್ವೇಷಕ್ಕೆ ನೂರಾರು ಅಡಿಕೆ ಮರಗಳು ಬಲಿಯಾದ ಅಮಾನವೀಯ ಘಟನೆಯೊಂದು ದಾವಣಗೆರೆಯಲ್ಲಿ ನಡೆದಿದೆ.

ಈ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನವಿಲೇಹಾಳ್ ಗ್ರಾಮದಲ್ಲಿ ನಡೆದಿದೆ. ಚಿಕ್ಕರಾಜು ಹಾಗೂ ಆತನ ತಮ್ಮನ ನಡುವೆ ಆಸ್ತಿ ವಿವಾದವಿತ್ತು. ಆಸ್ತಿ ವಿವಾದ ಕೋರ್ಟ್ ಮೆಟ್ಟಲೇರಿತ್ತು.

DVG ADIKE MARA NASHA AV 2

ಕೆಲ ದಿನಗಳ ಹಿಂದೆ ಚನ್ನಗಿರಿ ಕೋರ್ಟ್ ನಲ್ಲಿ ಚಿಕ್ಕರಾಜು ಸಹೋದರನಿಗೆ ಜಮೀನು ಉಳುಮೆ ಮಾಡುವಂತೆ ಆದೇಶವಾಗಿತ್ತು. ಇದರಿಂದ ಚಿಕ್ಕರಾಜು ಜಿಲ್ಲಾ ಕೋರ್ಟ್ ನಿಂದ ಇಂಜೆಕ್ಷನ್ ಆರ್ಡರ್ ತಂದಿದ್ದರು. ಅದನ್ನು ಲೆಕ್ಕಿಸದೆ ಚಿಕ್ಕರಾಜು ಸಹೋದರ 17 ವರ್ಷದ ಫಲಕ್ಕೆ ಬಂದಿರುವ 200 ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಜೆಸಿಬಿಯಿಂದ ನಾಶ ಮಾಡಿದ್ದಾರೆ.

ದಾಯಾದಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

DVG ADIKE MARA NASHA AV 1

Share This Article
Leave a Comment

Leave a Reply

Your email address will not be published. Required fields are marked *