ಧಾರವಾಡ: ಕೊರೊನಾ ಸಂಕಷ್ಟದ ಸಮಯದಲ್ಲಿ ಅನ್ನ, ಆಹಾರಕ್ಕಾಗಿ ಪರದಾಡುತ್ತಿರುವ ಜನರಿಗೆ ಯುವಕರ ತಂಡಗಳು ನೆರವಿನ ಹಸ್ತ ಚಾಚಿ ಮಾನವಿಯತೆ ಮೆರೆದಿವೆ.
ಧಾರವಾಡದ ನಗರದ ಈ ಯುವಕರ ತಂಡಗಳು, ಹಸಿವಿನಿಂದ ಬಳಲುತ್ತಿರುವ ಜನರಿಗೆ ಉಚಿತ ಊಟ ನೀಡುವ ಸಾಮಾಜಿಕ ಕೈಂಕರ್ಯದಲ್ಲಿ ತೊಡಗಿವೆ. ಒಂದು ಕಡೆ ಭಾರತೀಯ ಯುವ ಸಮೂಹದದಿಂದ ಕೊರೊನಾ ವಾರಿಯರ್ಸ್ ಗಳಿಗೆ ಊಟ ಹಾಗೂ ಮಜ್ಜಿಗೆ ನೀಡುವ ಕೆಲಸ ನಡೆದಿದೆ.
ಇದೇ ತಂಡ ನಿರ್ಗತಿಕರನ್ನು ಹುಡುಕಿ ಹೊಟ್ಟೆಗೆ ಅನ್ನ ಹಾಕುವ ಕೆಲಸ ಮಾಡುತಿದ್ದರೆ, ಮತ್ತೊಂದು ಕಡೆ ನಾಯಕವಾಡಿ ಪ್ಲಾಟ್ ಯುವಕರ ತಂಡವೊಂದು ಸ್ಲಂಗಳಲ್ಲಿ ಇರುವ ಬಡವರಿಗೆ ಊಟದ ಪ್ಯಾಕೆಟ್ ನೀಡುವ ಕೆಲಸ ಮಾಡುತ್ತಿದೆ.
ಕಳೆದ ಎರಡು ದಿನಗಳಿಂದ ಧಾರವಾಡದ ಲಕ್ಷ್ಮಿಸಿಂಗನಕೇರೆ, ಕಂಠಿಗಲ್ಲಿ ಝೋಡಿಗಳಿಗೆ ಹೋಗಿ ಊಟದ ಪ್ಯಾಕೆಟ್ ನೀಡುತ್ತಿವ ಈ ತಂಡ, ಊಟದ ಪ್ಯಾಕೆಟ್ ನೀಡಲು ಹಣ ಕಡಿಮೆ ಇದ್ದರೆ, ಜನರಿಂದ ಹಣ ಕೂಡಿಸಿ ಊಟದ ಪ್ಯಾಕೆಟ್ ನೀಡುವ ಕೆಲಸ ಮಾಡುತ್ತಿದೆ.