Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸುಶಾಂತ್ ಶವದ ಮುಂದೆ ಕಣ್ಣೀರಿಟ್ಟು ರಿಯಾ ಕ್ಷಮೆ ಕೇಳಿದ್ಯಾಕೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | Bollywood | ಸುಶಾಂತ್ ಶವದ ಮುಂದೆ ಕಣ್ಣೀರಿಟ್ಟು ರಿಯಾ ಕ್ಷಮೆ ಕೇಳಿದ್ಯಾಕೆ?

Bollywood

ಸುಶಾಂತ್ ಶವದ ಮುಂದೆ ಕಣ್ಣೀರಿಟ್ಟು ರಿಯಾ ಕ್ಷಮೆ ಕೇಳಿದ್ಯಾಕೆ?

Public TV
Last updated: August 22, 2020 10:42 am
Public TV
Share
2 Min Read
sushant rhea story 1595939343 e1598072762787
SHARE

-ಕಣ್ಣೀರಿಡುತ್ತಲೇ ರಿಯಾ ಹೇಳಿದ್ದು ಎರಡು ಮಾತು

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸುಶಾಂತ್ ಶವ ಇರಿಸಲಾಗಿದ್ದ ಕೂಪರ್ ಆಸ್ಪತ್ರೆಗೆ ಭೇಟಿ ನೀಡಿದ್ದ ನಟಿ ರಿಯಾ ಚಕ್ರವರ್ತಿ ಕಣ್ಣೀರಿಡುತ್ತಲೇ ‘ನನ್ನ ಕ್ಷಮಿಸು ಬಾಬು’ ಎಂದು ಹಲವು ಬಾರಿ ಹೇಳಿದ್ದರು ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಈ ವೇಳೆ ಅಲ್ಲಿದ್ದ ಸುರ್ಜಿತ್ ಸಿಂಗ್ ರಾಥೋಢ ಎಂಬವರ ಸಂದರ್ಶನವನ್ನು ಮಾಧ್ಯಮ ಮಾಡಿದೆ.

Rhea ED 1 medium

ಅಸಹಜ ಸಾವು ಪ್ರಕರಣದಿಂದ ಕೂಪರ್ ಆಸ್ಪತ್ರೆಗೆ ತರಲಾಗುವ ಶವಗಳನ್ನು ನೋಡಲು ಕುಟುಂಬಸ್ಥರಿಗೆ ಅನುಮತಿ ನೀಡಲಾಗುವುದಿಲ್ಲ. ಮರಣೋತ್ತರ ಶವ ಪರೀಕ್ಷೆಯ ಬಳಿಕವೇ ಪೊಲೀಸರ ಸಮ್ಮುಖದಲ್ಲಿ ಕುಟುಂಬಸ್ಥರಿಗೆ ಶವ ಹಸ್ತಾಂತರಿಸಲಾಗುತ್ತದೆ. ಆದ್ರೆ ರಿಯಾಗೆ ಮಾತ್ರ ಆಸ್ಪತ್ರೆಯಲ್ಲಿ ಅನುಮತಿ ಹೇಗೆ ನೀಡಲಾಯ್ತು ಎಂಬುದರ ಬಗ್ಗೆ ಪ್ರಶ್ನೆಗಳು ಸಹ ಹುಟ್ಟಿಕೊಂಡಿವೆ. ಇದನ್ನೂ ಓದಿ: ಸುಶಾಂತ್ ಕೇಸ್‌, ರಿಯಾಗೆ ಹಿನ್ನಡೆ – ಸಿಬಿಐ ತನಿಖೆಗೆ ಅಸ್ತು

Rhea ED 2 medium

ಕೂಪರ್ ಆಸ್ಪತ್ರೆಗೆ ಧೋನಿ ಸಿನಿಮಾದ ಸಹ ನಿರ್ಮಾಪಕ, ರಿಯಾ ಮತ್ತು ರಿಯಾ ಗೆಳೆಯ ಸೂರಜ್ ಸಿಂಗ್ ಬಂದು ಸುಶಾಂತ್ ಅಂತಿಮ ದರ್ಶನ ಪಡೆದುಕೊಂಡಿದ್ದರು. ಅಂತಿಮ ವಿಧಿವಿಧಾನದ ವೇಳೆ ಸುಶಾಂತ್ ಕುಟುಂಬಸ್ಥರು ರಿಯಾರಿಗೆ ದರ್ಶನ ಪಡೆಯಲು ಅವಕಾಶ ನೀಡಲ್ಲ. ಹಾಗಾಗಿ ಶವಗಾರಕ್ಕೆ ಬಂದಿದ್ದು, ಕೊನೆಯ ಬಾರಿ ಒಮ್ಮೆ ನೋಡಿ ಹೋಗುತ್ತಾರೆ ಎಂದು ನನಗೆ ಹೇಳಲಾಗಿತ್ತು. ಶವಾಗರದೊಳಗೆ ಬಂದ ರಿಯಾ ತಾವೇ ದೇಹದ ಮೇಲಿದ್ದ ಬಟ್ಟೆ ಸರಿಸಿ ಮುಖ ನೋಡಿದ್ದರು. ಸುಶಾಂತ್ ಮುಖ ನೋಡುತ್ತಲೇ ಭಾವುಕರಾದ ರಿಯಾ ಕಣ್ಣೀರಿಡುತ್ತ ಸಾರಿ ಬಾಬು ಎಂದು ಹೇಳತೊಡಗಿದರು. ಏನಾದ್ರೂ ತಪ್ಪು ಮಾಡಿದ್ದರಿಂದ ರಿಯಾ ಕ್ಷಮೆ ಕೇಳಿ ಅಳುತ್ತಿರಬೇಕೆಂದು ನನಗೆ ಅನ್ನಿಸ್ತು ಎಂದು ಸುರ್ಜಿತ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ದೇವರಿಗೆ ಧನ್ಯವಾದಗಳು, ಸತ್ಯದ ಕಡೆ ಮೊದಲ ಹೆಜ್ಜೆ – ಸುಶಾಂತ್ ಸಿಂಗ್ ಸೋದರಿ

RHEA 3

ಅಂದು ರಿಯಾ ಜೊತೆಗೆ ಓರ್ವ ವಯಸ್ಸಾದ ವ್ಯಕ್ತಿ, ಸೋದರ ಶೌವಿಕ್ ಆಸ್ಪತ್ರೆಗೆ ಬಂದಿದ್ದರು. ರಿಯಾ ಹೋದ ನಂತರ ಸುಶಾಂತ್ ಕುಟುಂಬಸ್ಥರು ಸಹ ಆಸ್ಪತ್ರೆಗೆ ಬಂದಿದ್ದರು. ಆದ್ರೆ ಸೆಕ್ಯೂರಿಟಿ ಗಾರ್ಡ್ ಕುಟುಂಬಸ್ಥರಿಗೆ ಶವಾಗರದೊಳಗೆ ಬಿಡಲಿಲ್ಲ ಎಂದರು. ಇದನ್ನೂ ಓದಿ: ತನಿಖೆ ಯಾರೇ ನಡೆಸಲಿ, ಸತ್ಯ ಬದಲಾಗಲ್ಲ: ರಿಯಾ ಚಕ್ರವರ್ತಿ ಪರ ವಕೀಲ

Rhea 1 medium

ಸುಶಾಂತ್ ಕತ್ತಿನ ಭಾಗದಲ್ಲಿ ಕಪ್ಪು ಗುರುತು ಇತ್ತು. ಕತ್ತು ಒಳಭಾಗದಲ್ಲಿ ಮುರಿದ ಪರಿಣಾಮ ಸಾವು ಆಗಿರಬಹುದು ಎಂದು ಮೇಲ್ನೋಟಕ್ಕೆ ಕಾಣಿಸುತ್ತಿತ್ತು. ಮೃತದೇಹ ಆತ್ಮಹತ್ಯೆಯಾದ ಶವದ ರೀತಿ ಇರಲಿಲ್ಲ. ಕಣ್ಣುಗಳು ಹೊರಗೆ ಬಂದಿರಲಿಲ್ಲ. ನಾಲಿಗೆ ಸಹ ಹೊರಗೆ ಬಂದಿರಲಿಲ್ಲ. ಮರಣದ ಸುಶಾಂತ್ ಮುಖ ಒಂದು ರೀತಿಯಲ್ಲಿ ಬದಲಾಗಿತ್ತು ಎಂದು ಸುರ್ಜಿತ್ ಹಲವು ಸ್ಫೋಟಕ ವಿಷಯಗಳನ್ನು ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ:  ಮಾನವೀಯತೆಯ ಗೆಲುವು, ನನ್ನ ಧ್ವನಿ ಅಡಗಿಸೋ ಪ್ರಯತ್ನ ನಡೆದಿತ್ತು-ಕಂಗನಾ ರಣಾವತ್ ಮೊದಲ ಪ್ರತಿಕ್ರಿಯೆ

Rhea medium

ಸುರ್ಜಿತ್ ಸಿಂಗ್ ತಾವು ರಾಜಪೂತ ಕರ್ಣಿ ಸೇನೆಯ ಸದಸ್ಯ ಎಂದು ಹೇಳಿಕೊಂಡಿದ್ದಾರೆ. ಸುಶಾಂತ್ ಸೋದರ ಸಂಬಂಧಿ ಬಿಜೆಪಿ ಶಾಸಕ ನೀರಜ್ ಬಬಲೂ ಜೊತೆ ಸಾವಿನ ಬಗ್ಗೆ ಮಾತನಾಡಿದ್ದರು. ದೆಹಲಿಯ ಕರ್ಣಿ ಸೇನೆಯ ಅಧ್ಯಕ್ಷ ಅವರ ಸೂಚನೆಯಂತೆ ತಾವು ಮುಂಬೈನ ಕೂಪರ್ ಆಸ್ಪತ್ರೆಯಲ್ಲಿದ್ದೆ ಎಂದು ಸುರ್ಜಿತ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಸುಶಾಂತ್ ಪ್ರಕರಣದ ತನಿಖೆ ಸಿಬಿಐಗೆ ವರ್ಗಾವಣೆ- ಅಂಕಿತಾ ಲೋಖಂಡೆ ಪ್ರತಿಕ್ರಿಯೆ

TAGGED:bollywoodcbiPublic TVRhea chakrabortSushant Singh Rajputಪಬ್ಲಿಕ್ ಟಿವಿಬಾಲಿವುಡ್ರಿಯಾ ಚಕ್ರವರ್ತಿಸಿಬಿಐಸುಶಾಂತ್ ಸಿಂಗ್ ರಜಪೂತ್
Share This Article
Facebook Whatsapp Whatsapp Telegram

Cinema news

Bigg Boss Rashika raghu
BBK 12 | ಫಿನಾಲೆ ವಾರಕ್ಕೆ ಕೊನೆಯ ಸ್ಪರ್ಧಿಯಾಗಿ ರಘು ಎಂಟ್ರಿ – ರಾಶಿಕಾ ಔಟ್
Cinema Districts Karnataka Latest Main Post TV Shows
Wild Life Safari
ದುಬೈನಲ್ಲಿ ಬಿಡುಗಡೆ ಆಯ್ತು ವೈಲ್ಡ್ ಟೈಗರ್ ಸಫಾರಿ ಟೀಸರ್
Cinema Latest Sandalwood Top Stories
kicchana chappale ashwini gowda dhruvanth
Bigg Boss ಸೀಸನ್‌ 12ರ ಕೊನೆಯ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡ ಅಶ್ವಿನಿ, ಧ್ರುವಂತ್‌
Cinema Latest Top Stories TV Shows
Monalisa Bhosle
ರೊಮ್ಯಾಂಟಿಕ್‌ ಸಾಂಗ್‌ನಲ್ಲಿ ಕುಂಭಮೇಳದ ನೀಲಿ ಕಂಗಳ ಚೆಲುವೆ – ದಿಲ್‌ ಕದ್ದ ಮೊನಾಲಿಸಾ!
Bollywood Cinema Latest National Top Stories

You Might Also Like

team india
Cricket

IND vs NZ 1st ODI: ನ್ಯೂಜಿಲೆಂಡ್‌ ವಿರುದ್ಧ ಭಾರತಕ್ಕೆ 4 ವಿಕೆಟ್‌ಗಳ ಜಯ; 1-0 ಅಂತರದಲ್ಲಿ ಮುನ್ನಡೆ

Public TV
By Public TV
22 minutes ago
Bengaluru Ramamurthy Nagar Techie Death case
Bengaluru City

ಉಸಿರುಗಟ್ಟಿ ಟೆಕ್ಕಿ ಸಾವು ಕೇಸ್‌ಗೆ ಟ್ವಿಸ್ಟ್ – ಪ್ರೀತಿ ನಿರಾಕರಿಸಿದ್ದಕ್ಕೆ 18ರ ಯುವಕನಿಂದ ಹತ್ಯೆಯಾದ ಶರ್ಮಿಳಾ

Public TV
By Public TV
2 hours ago
virat kohli
Cricket

28,000 ರನ್‌ ಗಳಿಸಿದ ವೇಗದ ಬ್ಯಾಟ್ಸ್‌ಮನ್ – ತೆಂಡೂಲ್ಕರ್‌ ದಾಖಲೆ ಮುರಿದ ಕೊಹ್ಲಿ

Public TV
By Public TV
3 hours ago
h.d.kumaraswamy
Bengaluru City

2ಎ ಪ್ರವರ್ಗಕ್ಕೆ ನಾಮಧಾರಿ ಒಕ್ಕಲಿಗರು: ಪ್ರಾಮಾಣಿಕ ಪ್ರಯತ್ನದ ಭರವಸೆ ಕೊಟ್ಟ ಹೆಚ್‌ಡಿಕೆ

Public TV
By Public TV
3 hours ago
R Ashok 3
Bengaluru City

ಗೆಜ್ಜಲಗೆರೆ ಗ್ರಾ.ಪಂ ಮದ್ದೂರು ನಗರಸಭೆಗೆ ಸೇರ್ಪಡೆ, ಆದೇಶವನ್ನು ಕೂಡಲೇ ರದ್ದು ಮಾಡಬೇಕು: ಆರ್.ಅಶೋಕ್

Public TV
By Public TV
3 hours ago
Shivalinge Gowda
Districts

ಸಿದ್ದರಾಮಯ್ಯ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ ರೇವಣ್ಣಗೆ ಸವಾಲೆಸೆದ ಶಿವಲಿಂಗೇಗೌಡ

Public TV
By Public TV
4 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?