ಹುಬ್ಬಳ್ಳಿ: ರಾಜ್ಯ ಮುಖ್ಯಮಂತ್ರಿಗಳ ಬದಲಾವಣೆ ಮಾಡುತ್ತಾರೆ ಎಂದು ಯಾರು ಹೇಳಿದ್ದು? ನಾನೇ ನಿಮಗೆ ಪ್ರಶ್ನೆ ಕೇಳುವೆ, ಮಾಧ್ಯಮದವರೇ ಸಿಎಂ ಬದಲಾವಣೆ ಎಂದು ಹೇಳುತ್ತಿದ್ದೀರಿ. ಆದರೆ ಸಿಎಂ ಬದಲಾವಣೆ ವಿಚಾರ ಇಲ್ಲವೇ ಇಲ್ಲ. ಸಿಎಂ ಖುರ್ಚಿ ಖಾಲಿಯಿಲ್ಲವೆಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಸಿಎಂ ಬದಲಾವಣೆ ವಿಚಾರದ ಪ್ರಶ್ನೆಗೆ ಪತ್ರಕರ್ತರಿಗೆ ಮರು ಪ್ರಶ್ನಿಸಿದರು. ನೀವೇ ಏನೆನೋ ಸೃಷ್ಟಿ ಮಾಡುತ್ತೀರಾ. ಆದರೆ ಸಿಎಂ ಬದಲಾವಣೆ ಮಾಡುವ ವಿಚಾರ ಇಲ್ಲವೇ ಇಲ್ಲವೆಂದು ಸ್ಪಷ್ಟಪಡಿಸಿದರು.
ಸಿಎಂ ದೆಹಲಿಗೆ ಹೋಗುವ ಮುನ್ನವೇ ತಮ್ಮ ಭೇಟಿಯ ಬಗ್ಗೆ ಹೇಳಿ ಹೋಗಿದ್ದಾರೆ. ಪ್ರಧಾನಿ ಮೋದಿ ಸೇರಿದಂತೆ ಹಲವು ಸಚಿವರನ್ನು ಭೇಟಿ ಮಾಡಿ ಹಣಕಾಸು ವಿಚಾರ ಸೇರಿದಂತೆ ವಿವಿಧ ಇಲಾಖೆಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ. ಅಲ್ಲದೇ ಡ್ರಗ್ಸ್ ಪ್ರಕರಣ ಯಾರಾದರೂ ಉಳಿದಿದ್ದರೇ ಹೆಸರು ಹೇಳಿ ನಾನೇ ಗೃಹ ಸಚಿವರು ಹಾಗೂ ಸಿಎಂಗೆ ದೂರು ನೀಡುವೆ. ಡ್ರಗ್ಸ್ ಮಾರಾಟ ಜಾಲದಲ್ಲಿ ಯಾರಾದರು ಇದ್ದರೇ ಹೆಸರು ಹೇಳಿ. ತನಿಖೆ ಮಾಡಲು ನಾನೇ ಗೃಹ ಸಚಿವರಿಗೆ ದೂರು ನೀಡುವೆ ಎಂದರು.