ಧಾರವಾಡ: ರಾಜ್ಯದಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ನಿರ್ಬಂಧ ಖಂಡಿಸಿ ಕೆಲ ಸಂಘಟನೆಗಳು ವಿರೋಧ ಮಾಡಿದ್ದು, ಇದಕ್ಕೆ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಇದನ್ನು ಭಾವನಾತ್ಮಕ ವಿಷಯ ಮಾಡುವ ಅಗತ್ಯ ಇಲ್ಲ. ಹೆಚ್ಚು ಜನ ಸೇರುವ ಯಾವುದಕ್ಕೂ ಅವಕಾಶ ಕೊಟ್ಟಿಲ್ಲ ಎಂದು ಹೇಳಿದರು. ರಾಜ್ಯದಲ್ಲಿ ಕೊರೊನಾ ಪಿಡುಗು ಹೋಗಿಲ್ಲ. ಹೀಗಾಗಿ ಅವಾಕಾಶ ನೀಡಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ದೇಶನವೂ ಇದೆ. ಈಗಾಗಲೇ ಡಿಸಿಗಳಿಗೆ ಸುತ್ತೋಲೆಗಳು ಬಂದಿವೆ ಎಂದು ಹೇಳಿದರು.
ಇಷ್ಟೆಲ್ಲ ಇದ್ದಾಗ ಏನೂ ಮಾಡಿದರೂ ಸಾಮಾಜಿಕ ಅಂತರ ಪಾಲನೆ ಆಗುತ್ತಿಲ್ಲ. ಜನರು ಸಂತೆಯಲ್ಲೇ ಸಾಮಾಜಿಕ ಅಂತರ ಕಾಯುತ್ತಿಲ್ಲ. ಹೀಗಾಗಿ ಗಣೇಶೋತ್ಸವ ನಿರ್ಬಂಧ ಆಗಿದೆ ಎಂದರು. ಇದೇ ವೇಳೆ ಮಹದಾಯಿ ಕಾಮಗಾರಿ ಆರಂಭ ವಿಚಾರವಾಗಿ ಮಾತನಾಡಿದ ಅವರು, ಪರಿಸರ ಮತ್ತು ಅರಣ್ಯ ಇಲಾಖೆಯ ಕ್ಲಿಯರೆನ್ಸ್ ಬೇಕಾಗಿದೆ. ಆ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಮಹದಾಯಿ ವಿಚಾರದಲ್ಲಿ ಯಾವುದೂ ನಿಂತಿಲ್ಲ ಎಂದು ಹೇಳಿದರು.
ಟ್ರಿಬ್ಯುನಲ್ನಲ್ಲಿದ್ದಾಗ ಮೋದಿಯವರೇ ರಾಜಿ ಮಾಡಿಸಲಿ ಎಂದು ಬಹಳ ಜನ ಕೇಳುತ್ತಿದ್ದರು. ವಿವಾದ ಕೋರ್ಟ್ನಲ್ಲಿ ಇರುವಾಗ ರಾಜಿ ಮಾಡಿಸಲು ಬರುತ್ತಿರಲಿಲ್ಲ. ಹೀಗಾಗಿ ಕೊನೆಗೆ ಕೋರ್ಟ್ನಲ್ಲಿಯೇ ಇದು ನಿರ್ಧಾರ ಆಗಿದೆ. ಕೋರ್ಟ್ನಲ್ಲಿ ಬಗೆಹರಿದ ಬಳಿಕ ತಕ್ಷಣವೇ ಕೇಂದ್ರ ಸರ್ಕಾರ ಸ್ಪಂದಿಸಿದೆ. ಕಳಸಾ-ಬಂಡೂರಿ ಯೋಜನೆ ಅನುಷ್ಠಾನ ನಾವೇ ಮಾಡುತ್ತೇವೆ ಎಂದರು.