ಸಂಸದ ಹೆಗಡೆಗೆ ಜೀವಬೆದರಿಕೆ ಕರೆ – ದೂರು ದಾಖಲು

Public TV
1 Min Read
ananthkumar hegde

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ್ ಕುಮಾರ್ ಹೆಗಡೆ ಅವರಿಗೆ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ಜೀವ ಬೆದರಿಕೆ ಹಾಕಿರುವ ಘಟನೆ ಇಂದು ವರದಿಯಾಗಿದೆ.

hegde

ಇಂದು ಮುಂಜಾನೆ ಉರ್ದು ಮಿಶ್ರಿತ ಭಾಷೆಯಲ್ಲಿ ಕರೆ ಮಾಡಿ ಮಾತನಾಡಿದ ಅನಾಮಧೇಯ ವ್ಯಕ್ತಿಯೊಬ್ಬ, ಹಿಂದಿನ ಬಾರಿ ಕರೆ ಮಾಡಿದಾಗ ದೂರು ನೀಡಿದ್ದೀಯ, ಪತ್ರಿಕೆಯಲ್ಲೂ ಸುದ್ದಿಯಾಗಿತ್ತು. ನಿನ್ನನ್ನು ಏನು ಮಾಡುತ್ತೇನೆ ನೋಡು, ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಕರೆ ಕಟ್ ಮಾಡಿದ್ದಾನೆ ಎಂದು ಅನಂತಕುಮಾರ್ ಹೆಗಡೆಯವರ ಆಪ್ತ ಕಾರ್ಯದರ್ಶಿಯವರು ದೂರಿನಲ್ಲಿ ತಿಳಿಸಿದ್ದಾರೆ.

ANTHKUMAR HEGADE

2019ರ ಫೆಬ್ರವರಿ 2 ಮತ್ತು 2019ರ ಏಪ್ರಿಲ್ 20 ರಂದು ಇದೇ ಮಾದರಿಯಲ್ಲಿ ಎರಡುಬಾರಿ ಕರೆ ಮಾಡಿ ಅನಂತಕುಮಾರ್ ಹೆಗಡೆಯವರಿಗೆ ಜೀವ ಬೆದರಿಕೆ ಹಾಕಲಾಗಿತ್ತು. ಅನಾಮಧೇಯ ಕರೆ ಹಿನ್ನೆಲೆ ಸಂಸದರ ಆಪ್ತ ಕಾರ್ಯದರ್ಶಿ ಸುರೇಶ್ ಶೆಟ್ಟಿ ಅವರಿಂದ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

Share This Article