– ಕುಳಿತ ಬಳಿಕ ಉಭಯ ಕುಶಲೋಪರಿ ನಡೆಸಿದ ನಾಯಕರು
ಮೈಸೂರು: ಪರಸ್ಪರ ಟೀಕೆ, ಪ್ರತಿ ಟೀಕೆಯಲ್ಲಿ ಮುಳುಗಿರುವ ಕೆ.ಆರ್.ನಗರ ಶಾಸಕ ಸಾರಾ ಮಹೇಶ್ ಮತ್ತು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅಕ್ಕ ಪಕ್ಕದಲ್ಲಿ ಕೂರುವ ಪ್ರಸಂಗ ಬಂದಾಗ ಆದಷ್ಟು ಅವರನ್ನು ಬೇರೆ ಕಡೆ ಕೂರಿಸುವ ಪ್ರಯತ್ನವನ್ನು ಸಾರಾ ಮಹೇಶ್ ಮಾಡಿದ್ದು ಕ್ಯಾಮಾರ ಕಣ್ಣಲ್ಲಿ ಸೆರೆಯಾಯಿತು.
ಜಿಲ್ಲಾ ಪಂಚಾಯತ್ ನಲ್ಲಿ ನಡೆದ ಸಭೆಯಲ್ಲಿ ಸಾರಾ ಮಹೇಶ್ ಅವರ ಪಕ್ಕದ ಕುರ್ಚಿಯಲ್ಲಿ ಶಾಸಕ ಅನಿಲ್ ಚಿಕ್ಕಮಾದು ಕುಳಿತಿದ್ದರು. ಸಭೆಗೆ ಎಚ್.ವಿಶ್ವನಾಥ್ ತಡವಾಗಿ ಬಂದರು.ವಿಶ್ವನಾಥ್ ಸಭೆಯ ವೇದಿಕೆಗೆ ಬಂದ ತಕ್ಷಣ ಶಾಸಕ ಅನಿಲ್ ಚಿಕ್ಕಮಾದು ಕುರ್ಚಿ ಬಿಟ್ಟುಕೊಡಲು ಮುಂದಾದರು. ಆಗ ಕುರ್ಚಿ ಬಿಟ್ಟು ಕೊಡದಂತೆ ಸಾರಾ ಮಹೇಶ್, ಅನಿಲ್ ಚಿಕ್ಕಮಾದು ಕೈ ಹಿಡಿದುಕೊಂಡರು.
ಸಾರಾ ಮಹೇಶ್ ಕೈ ಎಳೆದರೂ ಪಕ್ಕಕ್ಕೆ ಸರಿದ ಅನಿಲ್ ಚಿಕ್ಕಮಾದು, ವಿಶ್ವನಾಥ್ ಅವರಿಗೆ ತಮ್ಮ ಕುರ್ಚಿ ಬಿಟ್ಟು ಕೊಟ್ಟರು. ಆಗ ವಿಧಿ ಇಲ್ಲದೆ ವಿಶ್ವನಾಥ್ ಪಕ್ಕದಲ್ಲೇ ಸಾರಾ ಮಹೇಶ್ ಕುಳಿತುಕೊಳ್ಳಬೇಕಾಯಿತು. ಪಕ್ಕ ಕುಳಿತ ವಿಶ್ವನಾಥ್ ಜೊತೆ ಸಾರಾ ಮಹೇಶ್ ಉಭಯ ಕುಶಲೋಪರಿ ನಡೆಸಿದರು.