ಚೆನ್ನೈ: ಕ್ರಿಕೆಟಿಗರು ಜೆರ್ಸಿ ಮತ್ತು ತಮ್ಮ ಬ್ಯಾಟ್ಗಳಲ್ಲಿ ಹಲವು ಕಂಪನಿಗಳ ಪ್ರಾಯೋಕತ್ವದ ಹೆಸರನ್ನು ಬಳಸುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಐಪಿಎಲ್ನ 14ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಘೇಂಡಾಮೃಗಳನ್ನು ಉಳಿಸಿ ಎಂಬ ಸಂದೇಶ ಸಾರಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ರೋಹಿತ್ ತಾವು ಧರಿಸಿದ್ದ ಶೂ ನಲ್ಲಿ ಭಾರತದಲ್ಲಿ ಅಳಿವಿನಂಚಿನಲ್ಲಿರುವ ಘೇಂಡಾಮೃಗದ ಉಳಿವಿಗಾಗಿ ವಿಶೇಷ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ‘ಘೇಂಡಾಮೃಗಳನ್ನು ಉಳಿಸಿ” ಎಂದು ಸಂದೇಶ ಬರೆದುಕೊಂಡಿದ್ದ ಶೂ ಧರಿಸಿ ಪ್ರಾಣಿಗಳ ಮೇಲಿನ ಪ್ರೀತಿಯನ್ನು ಹೊರಹಾಕಿದ್ದಾರೆ.
Yesterday when I walked on to the field it was more than just a game for me. Playing cricket is my dream and helping make this world a better place is a cause we all need to work towards. (1/2) pic.twitter.com/fM22VolbYq
— Rohit Sharma (@ImRo45) April 10, 2021
ಒಂದು ಕೊಂಬಿನ ಘೇಂಡಾಮೃಗಗಳು ಈಗಾಗಲೇ ಭಾರತದಲ್ಲಿ ಅಳಿವಿನಂಚಿನಲ್ಲಿದೆ ಹಾಗಾಗಿ ಇದನ್ನು ಉಳಿಸುವ ನಿಟ್ಟಿನಲ್ಲಿ ರೋಹಿತ್ ವಲ್ಡ್ ವೈಡ್ ಫಂಡ್ ಫಾರ್ ನೇಚರ್ ಎಂಬ ಸಂಸ್ಥೆಯೊಂದಿಗೆ ಕೈ ಜೋಡಿಸಿದ್ದಾರೆ. ಈ ಮೂಲಕ ಘೇಂಡಾಮೃಗಗಳ ಬಗ್ಗೆ ಜನರಿಗೆ ಅರಿವನ್ನು ಮೂಡಿಸುವ ಕಾರ್ಯದಲ್ಲಿ ತೊಡಗಿದ್ದು, ಇದರ ಭಾಗವಾಗಿ ತಮ್ಮ ಶೂ ನಲ್ಲಿ ಈ ವಿಶೇಷ ಸಂದೇಶಗಳನ್ನು ಬರೆಸಿಕೊಂಡು ಅಭಿಯಾನ ಆರಂಭಿಸಿದ್ದಾರೆ.
https://twitter.com/KP24/status/1380777612897873920
ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿಕೊಂಡಿರುವ ರೋಹಿತ್, ಕ್ರಿಕೆಟ್ ಆಡುವುದರೊಂದಿಗೆ ಈ ಜಗತ್ತನ್ನು ಮತ್ತಷ್ಟು ಉತ್ತಮವಾಗಿಸುವುದು ನನ್ನ ಕನಸಾಗಿದೆ. ಈಗಾಗಲೇ ಭಾರತದಲ್ಲಿ ಒಂದು ಕೊಂಬಿನ ಘೇಂಡಾಮೃಗ ಅಳಿವಿನಂಚಿನಲ್ಲಿದೆ ಇದನ್ನು ನಾವು ಈಗ ರಕ್ಷಣೆ ಮಾಡದಿದ್ದರೆ ಮುಂದೆ ಕಣ್ಮರೆಯಾಗುವುದಂತು ಸತ್ಯ. ಹಾಗಾಗಿ ನಾವು ಎಲ್ಲರು ಸೇರಿ ಇದರ ಉಳಿವಿಗಾಗಿ ಶ್ರಮಿಸೋಣ ಎಂದಿದ್ದಾರೆ.
ರೋಹಿತ್ ಟ್ವೀಟ್ ನೋಡಿ ಹಲವು ಮಾಜಿ ಆಟಗಾರರು, ಸಿನಿಮಾ ನಟ-ನಟಿಯರು ಮತ್ತು ಅವರ ಅಭಿಮಾನಿಗಳು ರೋಹಿತ್ ನಡೆಗೆ ಮೆಚ್ಚುಗೆ ಸೂಚಿಸಿದ್ದಾರೆ.