ನವದೆಹಲಿ: ಮನೆಯ ಮೇಲ್ಛಾವಣಿಯ ಒಂದು ಭಾಗ ಕುಸಿದು ವ್ಯಕ್ತಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ದೇಹಲಿಯ ಪೂರ್ವ ಭಾಗ ಸರಿಟಾ ವಿಹಾರ್ ಪ್ರದೇಶದಲ್ಲಿ ನಡೆದಿದೆ.
ಮೂರು ಅಂತಸ್ತಿನ ಮನೆ ಕಟ್ಟಡದ ಮೇಲಿನ ಮೂರನೇ ಮಹಡಿಯ ಟೆರೇಸ್ನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ವೇಳೆ ಈ ಮೇಲ್ಛಾಣಿ ಕುಸಿದಿದೆ. ಘಟನೆಯಲ್ಲಿ ಧರ್ಮ್ ಭೀರ್ ಎಂಬಾತ ಸಿಲುಕಿಕೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ಅಲ್ಲದೆ ಘಟನಾಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ದಳವನ್ನು ಕರೆಸಲಾಗಿತ್ತು ಎಂದು ಅಗ್ನಿ ಶಾಮಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಕುರಿತಂತೆ ತನಿಖೆ ನಡೆಸಿದಾಗ ಮಧ್ಯಾಹ್ನ 12.05ಕ್ಕೆ ಮನೆಯ ಮೇಲ್ಛಾವಣಿಯ ಒಂದು ಭಾಗ ಕುಸಿದಿದೆ. ಕಟ್ಟಡದ ಟೇರಸ್ನಲ್ಲಿ ವೆಲ್ಡಿಂಗ್ ಕೆಲಸಗಳಿಗೆ ಸಂಬಂಧಿಸಿದ ವಸ್ತುಗಳು ಬಿದ್ದಿದ್ದವು ಎಂದು ತಿಳಿದು ಬಂದಿದೆ.
ಮದನ್ಪುರ್ ಖಾದರ್ ನಿವಾಸಿಯಾದ ಧರ್ಮ್ಬೀರ್ ಮೇಲ್ಛಾಣಿ ಕುಸಿದ ಸ್ಥಳದಲ್ಲಿಯೇ ಸಿಲುಕಿಕೊಂಡು ಪ್ರಾಣಬಿಟ್ಟಿದ್ದಾರೆ ಮತ್ತು ಹರೀಶ್ ರೊಟೆಲ್ಲಾ(ಮಾಲೀಕ), ಖಲೀಲ್ ಮತ್ತು ಶಿವಂ ಅವರನ್ನು ಹತ್ತಿರದ ಏಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸ್ ಅಧಿಕಾರಿ ಆರ್.ಪಿ ಮೀನಾ ಹೇಳಿದರು.