ಬೆಂಗಳೂರು: ನಗರದ ನಾಡ ಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಹಂಚಿಕೆ ಮಾಡಿರುವ ಬಿಡಿಎ ಸೈಟಿನ ನಿರ್ವಹಣಾ ಶುಲ್ಕವನ್ನು ಬಿಡಿಎ ಹೆಚ್ಚಳ ಮಾಡಿದ್ದು, ಬಿಡಿಎ ನಿರ್ಧಾರದ ವಿರುದ್ಧ ಕೆಂಪೇಗೌಡ ಬಡಾವಣೆಯ ಸೈಟಿನ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಐದು ವರ್ಷದ ಹಿಂದೆ ಬೆಂಗಳೂರು ನಗಾರಭಿವೃದ್ದಿ ಪ್ರಾಧಿಕಾರ ಆರ್ಹ ಫಲಾನುಭಾವಿಗಳಿಗೆ ಸೈಟುಗಳ ಹಂಚಿಕೆ ಮಾಡಿತ್ತು. ಜೊತೆಗೆ ಸೈಟು ಹಂಚಿಕೆಯಾಗಿ ಐದು ವರ್ಷ ಕಳೆದೆರು ಮೂಲ ಭೂತ ಸೌಕರ್ಯ ಒದಗಿಸಿಲ್ಲ. ಮೂಲ ಭೂತ ಸೌಕರ್ಯ ಒದಗಿಸದೇ ನಿರ್ವಾಹಣೆ ಶುಲ್ಕ ಹೆಚ್ಚಳ ಮಾಡಿರುವುದು ಮಾಲೀಕರ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನೂ ಓದಿ: 10 ದಿನದಲ್ಲಿ ಎಲ್ಲ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೂ ಲಸಿಕೆ
ಈ ಬಗ್ಗೆ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದು, ನಿರ್ವಾಹಣ ಶುಲ್ಕ ಹೆಸರಲ್ಲಿ ಹೆಚ್ಚಿನ ಹೊರೆಯನ್ನು ಮಾಲೀಕರ ಮೇಲೆ ಹೇರುತ್ತಿದ್ದಾರೆ. 1200 ರಿಂದ 3600 ರೂ ತನಕ ವಾರ್ಷಿಕವಾಗಿ ಹೆಚ್ಚಿನ ಶುಲ್ಕ ವಿಧಿಸುತ್ತಿದ್ದಾರೆ. ಇದರಿಂದ ಟ್ಯಾಕ್ಸ್ ನಮಗೆ ಕಳೆದ ವರ್ಷಕ್ಕಿಂತ ಮೂರು ಪಟ್ಟು ಹೆಚ್ಚಾಗಲಿದೆ. ಅಭಿವೃದ್ಧಿಯನ್ನೆ ಮಾಡದೇ ಟ್ಯಾಕ್ಸ್ ಗಳನ್ನು ಹಾಕುತ್ತಿರುವುದು ಸರಿಯಲ್ಲ. ಕೊರೊನಾ ಸಂಕಷ್ಟದ ಸಮಯದಲ್ಲಿ ಶುಲ್ಕ ಹೆಚ್ಚಳ ನಮ್ಮ ಮೇಲೆ ಮತ್ತಷ್ಟು ಹೊರೆಯಾಗಲಿದೆ. ಜೊತೆಗೆ ಅಭಿವೃದ್ಧಿ ಮಾಡದೇ ಕೇವಲ ಶುಲ್ಕ ಹೆಚ್ಚಳ ಮಾಡುವುದು ಎಷ್ಟರಮಟ್ಟಿಗೆ ಸರಿ. ತಕ್ಷಣ ಬಿಡಿಎ ತಮ್ಮ ನಿರ್ಧಾರವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.