ಮುಂಬೈ ತಂಡಕ್ಕೆ 1 ರನ್‌ ನೀಡಿಲ್ಲ ಯಾಕೆ – ಬಿಸಿ ಬಿಸಿ ಚರ್ಚೆ

Public TV
3 Min Read
polard pandya

– ವಿಶ್ವಕಪ್‌ ಫೈನಲ್‌ನಲ್ಲಿ ಸಮಸ್ಯೆಯಾದ್ರೆ ತಂಡಕ್ಕೆ ನಷ್ಟ
– ಕೂಡಲೇ ಐಸಿಸಿ ನಿಯಮವನ್ನು ಬದಲಾಯಿಸಬೇಕು

ಅಬುದಾಬಿ: ಗುರುವಾರ ನಡೆದ ಪಂದ್ಯದಲ್ಲಿ ಕಿಂಗ್ಸ್‌ ಇಲೆವನ್‌ ಪಂಜಾಬ್‌ ವಿರುದ್ಧ ಮುಂಬೈ ತಂಡ 48 ರನ್‌ಗಳಿಂದ ಜಯಗಳಿಸಿದರೂ ಒಂದು ರನ್‌ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆಗುತ್ತಿದೆ.

17ನೇ ಓವರಿನ ಕೊನೆಯ ಎಸೆತವನ್ನು ಪೊಲಾರ್ಡ್‌ ಎದುಸಿದ್ದರು. ಶಮಿ ಎಸೆದ ಬಾಲ್‌ ಎಡಗಡೆಗೆ ಹೋಯಿತು. ಕೂಡಲೇ ಪಾಂಡ್ಯ ಮತ್ತು ಪೊಲಾರ್ಡ್‌ ಒಂದು ರನ್‌ ಓಡತೊಡಗಿದರು. ಶಮಿ ಎಲ್‌ಬಿ ಔಟ್‌ಗೆ ಮನವಿ ಮಾಡಿದ್ದ ಕಾರಣ ಅಂಪೈರ್‌ ಔಟ್‌ ಎಂದು ತೀರ್ಪು ನೀಡಿದರು.

polard pandya 2

ಪೊಲಾರ್ಡ್‌ ಕ್ರೀಸ್‌ ತಲುಪಿದ ಬಳಿಕ ತೀರ್ಪನ್ನು ಪುನರ್‌ ಪರಿಶೀಲನೆ ಮಾಡುವಂತೆ ಅಂಪೈರ್ ಮನವಿ ಮಾಡಿಕೊಂಡರು. ಅಲ್ಟ್ರಾ ಎಡ್ಜ್‌ ವೇಳೆ ಬಾಲ್‌ ಬ್ಯಾಟಿಗೆ ಬಡಿದು ಎಡಗಡೆಗೆ ಹೋಗಿರುವುದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಬಳಿಕ ಅಂಪೈರ್‌ ನಾಟೌಟ್‌ ತೀರ್ಪು ನೀಡಿದರು. ಇದನ್ನೂ ಓದಿ: ಸೂಪರ್ ಓವರ್‌ನಲ್ಲೂ ಟೈ ಆದ್ರೆ ಫಲಿತಾಂಶ ನಿರ್ಧಾರ ಹೇಗೆ?

ಪ್ರಶ್ನೆ ಯಾಕೆ?
ಅಂಪೈರ್‌ ನಾಟೌಟ್‌ ತೀರ್ಪು ನೀಡಿದ ಬೆನ್ನಲ್ಲೇ ಈಗ ಚರ್ಚೆ ಆರಂಭವಾಗಿದೆ. ಒಂದು ವೇಳೆ ಇಬ್ಬರು ಬ್ಯಾಟ್ಸ್‌ ಮನ್‌ಗಳು ಒಂದು ರನ್‌ ಓಡದೇ ಇದ್ದರೆ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಇಲ್ಲಿ ಒಂದು ರನ್‌ ಓಡಿದ್ದಾರೆ. ಅಷ್ಟೇ ಅಲ್ಲದೇ ಬ್ಯಾಟ್‌ ತುದಿಗೆ ಬಾಲ್‌ ಬಡಿದಿರುವುದು ರಿಪ್ಲೇಯಲ್ಲಿ ಸ್ಪಷ್ಟವಾಗಿ ಕಾಣಿಸಿದೆ. ಹೀಗಾಗಿ ಒಂದು ರನ್‌ ಮುಂಬೈಗೆ ಮತ್ತು ಪೊಲಾರ್ಡ್‌ಗೆ ನೀಡಬೇಕು. ನ್ಯಾಯಬದ್ಧವಾಗಿ 1 ರನ್‌ ಓಡಿದ್ದರೂ 1 ರನ್‌ ನೀಡಿಲ್ಲ ಯಾಕೆ ಎಂಬ ಪ್ರಶ್ನೆಯನ್ನು ಇಟ್ಟುಕೊಂಡು ಕ್ರಿಕೆಟ್‌ ಅಭಿಮಾನಿಗಳು ಬಿಸಿಸಿಐ ಮತ್ತು ಐಸಿಸಿಯನ್ನು ಪ್ರಶ್ನಿಸುತ್ತಿದ್ದಾರೆ.

polard pandya 5

 

ಮಾಜಿ ಕ್ರಿಕೆಟಿಗ, ಕ್ರಿಕೆಟ್‌ ವೀಕ್ಷಕ ವಿವರಣೆಗಾರ ಆಕಾಶ್‌ ಚೋಪ್ರಾ ಅವರು, ಪೊಲಾರ್ಡ್‌ ಮತ್ತು ಮುಂಬೈ ಇಂಡಿಯನ್ಸ್‌ ತಂಡಕ್ಕೆ 1 ರನ್‌ ಸಿಗಲಿಲ್ಲ. ಎಲ್‌ಬಿಡಬ್ಲ್ಯೂ ನೀಡಿದರು. ಮರುಪರಿಶೀಲನೆಯ ವೇಳೆ ಇನ್‌ಸೈಡ್‌ ಎಡ್ಜ್‌ ಆಗಿರುವುದು ದೃಢವಾಯಿತು. ಆದರೆ ಅವರು ಸುಲಭವಾಗಿ ಓಡಿದ ರನ್‌ ಕೌಂಟ್‌ ಆಗಲಿಲ್ಲ. ಪ್ರೀತಿಯ ಐಸಿಸಿ ಮುಂದೆ ಯಾವುದಾದರೂ ವಿಶ್ವಕಪ್‌ ವೇಳೆ ಈ ನಿಯಮದಿಂದ ಒಂದು ತಂಡಕ್ಕೆ ಸಮಸ್ಯೆಯಾಗಬಹುದು. ಈ ವಿಚಾರದ ಬಗ್ಗೆ ಮತ್ತೊಮ್ಮೆ ಆಲೋಚನೆ ಮಾಡಬೇಕಿದೆ ಎಂದು ಬರೆದುಕೊಂಡಿದ್ದಾರೆ.

polard pandya 4

ಆಕಾಶ್‌ ಚೋಪ್ರಾ ಅವರ ಈ ವಿಚಾರವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ವಿಶ್ವಕಪ್‌ ಫೈನಲ್‌ ವೇಳೆ ಒಂದು ತಂಡಕ್ಕೆ ಕೊನೆಯ ಎಸೆತದಲ್ಲಿ 2 ರನ್‌ ಬೇಕಿದ್ದಾಗ ಒಂದು ವೇಳೆ ಈ ರೀತಿಯಾದರೆ ಏನು ಕಥೆ? ಅಂಪೈರ್‌ ಔಟ್‌ ಎಂದು ಘೋಷಿಸಿ ನಂತರ ನಾಟೌಟ್‌ ಎಂದರೆ ಆ ತಂಡ ಸೋಲು ಕಾಣುತ್ತದೆ. 2019ರ ವಿಶ್ವಕಪ್ ಫೈನಲ್‌ ನಿರ್ಧಾರದಂತೆ ಈ ನಿಯಮ ಸಹ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬ್ಯಾಟಿಂಗ್‌ ತಂಡ ಔಟ್‌ ನಿರ್ಧಾರವನ್ನು ಪುನರ್‌ ಪರಿಶೀಲನೆ ಮಾಡುವಂತೆ ಕೇಳಿದ ಬಳಿಕ ಅಂಪೈರ್‌ ನಾಟೌಟ್‌ ತೀರ್ಪು ನೀಡಿದರೂ ಈ ಎಸೆತದಿಂದ ಪಡೆದ ರನ್‌ಗಳನ್ನು ಮಾನ್ಯ ಮಾಡಲಾಗುವುದಿಲ್ಲ. ಅಂಪೈರ್‌ ಎಲ್‌ಬಿ ಔಟ್‌ ತೀರ್ಪು ನೀಡುವ ಸಮಯದಲ್ಲ ಇಬ್ಬರು ಬ್ಯಾಟ್ಸ್‌ಮನ್‌ಗಳು ಓಡುತ್ತಿರುತ್ತಾರೆ.  ಈ ಕಾರಣಕ್ಕೆ ಈ ರನ್‌ ಸೇರ್ಪಡೆಯಾಗುವುದಿಲ್ಲ.

https://twitter.com/ProudBhupesh910/status/1311693961736540160

ಪಂಜಾಬ್‌ ವಿರುದ್ಧ 20 ಎಸೆತಗಳಲ್ಲಿ 47 ರನ್‌(3 ಬೌಂಡರಿ, 4 ಸಿಕ್ಸರ್)‌ ಸಿಡಿಸಿದ ಪೊಲಾರ್ಡ್‌ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನ ನೀಡಿ ಗೌರವಿಸಲಾಯಿತು.

ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಏನಾಗಿತ್ತು?
2019ರ ವಿಶ್ವಕಪ್ ನಲ್ಲಿ ಇಂಗ್ಲೆಂಡ್‌ ಮತ್ತು ನ್ಯೂಜಿಲೆಂಡ್ ನಡುವಿನ ಫೈನಲ್‌ ಪಂದ್ಯ ಸೂಪರ್ ಓವರ್‌ನಲ್ಲೂ ಟೈ ಆಗಿತ್ತು. ಆದರೆ ಅತಿ ಹೆಚ್ಚು ಬೌಂಡರಿ ಹೊಡೆದಿದ್ದ ಕಾರಣ ಇಂಗ್ಲೆಂಡ್ ವಿಶ್ವಕಪ್ ಜಯಿಸಿತ್ತು. ವಿಶ್ವಕಪ್‍ನಂತಹ ಮಹತ್ವದ ಪಂದ್ಯದಲ್ಲಿ ಬೌಂಡರಿ ಆಧಾರದ ಮೇಲೆ ಪಂದ್ಯ ನಿರ್ಧರಿಸುವುದಕ್ಕೆ ಘಟಾನುಘಟಿ ಆಟಗಾರರೇ ಭಾರೀ ವಿರೋಧ ವ್ಯಕ್ತಪಡಿಸಿದರು. ಟೀಕೆ ವ್ಯಕ್ತವಾದ ಬಳಿಕ ಐಸಿಸಿ 2020ರ ಫೆಬ್ರವರಿಯಲ್ಲಿ ಸೂಪರ್ ಓವರ್ ನಿಯಮಗಳನ್ನು ಬದಲಾವಣೆ ಮಾಡಿತು.

Share This Article
Leave a Comment

Leave a Reply

Your email address will not be published. Required fields are marked *