ಮಾವಿನ ತೋಟಕ್ಕೆ ಅಳವಡಿಸಿದ್ದ ಮುಳ್ಳು ತಂತಿಗೆ ಸಿಲುಕಿ ಚಿರತೆ ಸಾವು

Public TV
0 Min Read
klr leopard

ಕೋಲಾರ: ಮಾವಿನ ತೋಟಕ್ಕೆ ಅಳವಡಿಸಿದ್ದ ಮುಳ್ಳು ತಂತಿ ಬೇಲಿಗೆ ಸಿಲುಕಿ ಚಿರತೆ ಸಾವನ್ನಪ್ಪಿರುವ ಘಟನೆ ತಾಲೂಕಿನ ತಲಗುಂದ ಪುರಹಳ್ಳಿ ಬಳಿ ನಡೆದಿದೆ.

ತಲಗುಂದ ಗ್ರಾಮದ ರಮೇಶ್ ಅವರಿಗೆ ಸೇರಿದ ಮಾವಿನ ತೋಪಿನಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಕಳೆದ ರಾತ್ರಿ ವೇಳೆ ಆಹಾರ ಅರಿಸಿ ಬಂದು ಮುಳ್ಳು ತಂತಿ ಬೇಲಿಗೆ ಸಿಲುಕಿ ಸಾವನ್ನಪ್ಪಿರುವ ಶಂಕೆ ಇದೆ.

ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಲ್ಲದೆ ಚಿರತೆ ಕಂಡು ಜನ ಸಹ ಭಯಭೀತರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *