Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮಸ್ಕಿ ಎಂಟ್ರಿ ಮೊದಲ ದಿನವೇ ಬಿ.ವೈ.ವಿಜಯೇಂದ್ರ ರಣತಂತ್ರ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಮಸ್ಕಿ ಎಂಟ್ರಿ ಮೊದಲ ದಿನವೇ ಬಿ.ವೈ.ವಿಜಯೇಂದ್ರ ರಣತಂತ್ರ

Districts

ಮಸ್ಕಿ ಎಂಟ್ರಿ ಮೊದಲ ದಿನವೇ ಬಿ.ವೈ.ವಿಜಯೇಂದ್ರ ರಣತಂತ್ರ

Public TV
Last updated: March 21, 2021 3:43 pm
Public TV
Share
2 Min Read
Vijayenrda Maski 4
SHARE

– ವಿಜಯೇಂದ್ರ ಪೊಲಿಟಿಕಲ್ ಗೇಮ್ ಇನ್‍ಸೈಡ್ ಸ್ಟೋರಿ

ರಾಯಚೂರು: ಉಪಚುನಾಣೆ ಘೋಷಣೆ ಬಳಿಕ ಮಸ್ಕಿ ಅಖಾಡಕ್ಕೆ ಎಂಟ್ರಿ ನೀಡಿದ ಮೊದಲ ದಿನವೇ ಬಿಜೆಪಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ಎಸ್.ವಿಜಯೇಂದ್ರ ಪೊಲಿಟಿಕಲ್ ಸ್ಟ್ಯಾಟರ್ಜಿಯನ್ನು ನಡೆಸಿದರು.

ಮಸ್ಕಿಯ ಪೊಲೀಸ್ ಠಾಣೆ ಪಕ್ಕದ ಖಾಲಿ ಜಾಗದಲ್ಲಿ ಬಿಜೆಪಿ ಬೃಹತ್ ಶಕ್ತಿ ಪ್ರದರ್ಶನ ನಿರ್ಮಾಣ ಮಾಡಲಾಗಿತ್ತು. ಕೆ.ವಿರೂಪಾಕ್ಷಪ್ಪ ಬಿಜೆಪಿ ಸೇರ್ಪಡೆ ಕಾರ್ಯಕ್ರಮಕ್ಕಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ, ಇಬ್ಬರು ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಸಚಿವ ಬಿ.ಶ್ರೀರಾಮುಲು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಬಹುತೇಕ ರಾಜಕೀಯ ಮುಖಂಡರೆಲ್ಲರೂ ನೇರವಾಗಿ ಸಿಂಧನೂರು ಮೂಲಕ ಮಸ್ಕಿ ಕಾರ್ಯಕ್ರಮಕ್ಕೆ ಅಗಮಿಸಿದರು. ಆದ್ರೆ ವಿಜಯೇಂದ್ರ ಮಾತ್ರ ಭಿನ್ನ ಹಾದಿ ಮೂಲಕ ಮಸ್ಕಿ ಪ್ರವೇಶಿಸಿ ಹಳ್ಳಿಯಲ್ಲಿ ಪ್ರಚಾರ ನಡೆಸಿದರು. ಈ ಮೂಲಕ ಮಸ್ಕಿಯಲ್ಲಿ ಬಿಜೆಪಿ ಪ್ರಚಾರದ ಸಂಚಲನ ಮೂಡಿಸಿದರು.

Vijayenrda Maski 2

ಏಲ್ಲೆಲ್ಲಿ ಪ್ರಚಾರ? ಗಂಗಾವತಿ, ಕನಕಗಿರಿ ಮೂಲಕ ಮಸ್ಕಿ ಕ್ಷೇತ್ರದ ಕಲ್ಮಂಗಿ, ಉಮಲೂಟಿ ಗ್ರಾಮ ಪ್ರವೇಶ ಮಾಡಿದ ಬಿ.ವೈ.ವಿಜಯೇಂದ್ರ ಮೊದಲ ದಿನವೇ ಮತಬೇಟೆ ನಡೆಸಿದರು. ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ತುರುವಿಹಾಳ ಅವರ ತವರೂರಾದ ತುರುವಿಹಾಳ, ತಿಡಿಗೋಳ ಭಾಗದಲ್ಲಿನ ಮತಗಳನ್ನು ಸೆಳೆಯುವ ಪ್ರಯತ್ನ ಮಾಡಿದರು. ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲರನ್ನು ಜತೆಗಿಟ್ಟುಕೊಂಡೇ ಮತ ಪ್ರಚಾರ ಆರಂಭಿಸಿದರು. ತುರುವಿಹಾಳ ಭಾಗದ ಪ್ರಮುಖ ಮುಖಂಡರ ಸಭೆ ನಡೆಸುವ ಮೂಲಕ ವಿಶೇಷವಾಗಿ ಲಿಂಗಾಯತ ಸಮುದಾಯದ ಮುಖಂಡರ ಮತಗಳನ್ನು ಸೆಳೆಯುವ ಕಸರತ್ತು ನಡೆಸಿದರು.

Vijayenrda Maski 1

ಮಸ್ಕಿಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ ಕಾರ್ಯಕ್ರಮ ಸಂಜೆ 5 ಗಂಟೆಗೆ ನಿಗದಿಯಾಗಿದ್ದರಿಂದ ಬಿ.ವೈ.ವಿಜಯೇಂದ್ರ ನೇರವಾಗಿ ಮಸ್ಕಿ ಕ್ಷೇತ್ರದ ಉಮಲೂಟಿ ಗ್ರಾಮಕ್ಕೆ ಮಧ್ಯಾಹ್ನ 1 ಗಂಟೆಗೆ ಆಗಮಿಸಿದರು. ಬೈಕ್ ರ‍್ಯಾಲಿಯ ಮೂಲಕ ಪ್ರಚಾರ ನಡೆಸಿ ಉಮಲೂಟಿ ಗ್ರಾಮದ ಶ್ರೀ ಮಹಿಮಾಂಬುಕಾ ದೇವಿಗೆ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಿದರು. ಬಳಿಕ ಗುಂಡಾ ಗ್ರಾಮಕ್ಕೆ ಭೇಟಿ ನೀಡಿದ ವಿಜಯೇಂದ್ರ, ಗುಂಡಾ ಗ್ರಾಮದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಭಾಗಿಯಾದರು. ನಂತರ ಗ್ರಾಮದ ಅಮರೇಶ್ವರ ಮಠದ ಚನ್ನಸಿದ್ದರಾಮೇಶ್ವರ ಸ್ವಾಮಿಗಳ ಆಶೀರ್ವಾದ ಪಡೆದು ಬಿಜೆಪಿ ಅಭ್ಯರ್ಥಿ ಪ್ರತಾಪಗೌಡರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

Maski BJP Campaign 1

ಅಲ್ಲಿಂದಲೇ ಚಿಕ್ಕಬೇರ್ಗಿ, ಹಿರೇಬೇರಗಿಯಲ್ಲಿ ಮತಯಾಚನೆ ಮಾಡಿ ತುರುವಿಹಾಳ ಗ್ರಾಮಕ್ಕೆ ಭೇಟಿ ನೀಡಿದರು. ಅಲ್ಲಿನ ಬಸವೇಶ್ವರ ಮೂರ್ತಿಗೆ ಮಾಲರ್ಪಣೆ ಮಾಡಿ ಹಲವು ಮುಖಂಡರ ಜತೆ ಮಾತುಕತೆ ನಡೆಸಿದರು.

Maski BJP Campaign 4

ಮುಖಂಡರ ಪಟ್ಟಿ: ತುರುವಿಹಾಳ, ತಿಡಿಗೋಳ ಜಿ.ಪಂ ಕ್ಷೇತ್ರದಲ್ಲಿ ಸಂಚಾರ ಮಾಡಿದ ಬಿ.ವೈ.ವಿಜಯೇಂದ್ರ ಈ ಭಾಗದ ಪ್ರಮುಖ ನಾಯರ ಪಟ್ಟಿ ಮಾಡಿ ಹೆಸರು ದೂರವಾಣಿ ಸಂಖ್ಯೆಗಳನ್ನು ಪಡೆದುಕೊಂಡರು ಎಂದು ತಿಳಿದು ಬಂದಿದೆ. ಯಾವುದೇ ಪಕ್ಷ ಎನ್ನದೇ ಎಲ್ಲ ಪಾರ್ಟಿಯಲ್ಲಿರುವ ಆಯಾ ಜಾತಿಯ ಮುಖಂಡರ ಪಟ್ಟಿ ಮಾಡಿಕೊಂಡರು. ಮುಂದಿನ ದಿನಗಳಲ್ಲಿ ಜಾತಿವಾರು ಪ್ರಬಲ ನಾಯಕರನ್ನು ಸೆಳೆಯುವ ಲೆಕ್ಕಾಚಾರ ಎಂದು ತಿಳಿದು ಬಂದಿದೆ.

Maski BJP Campaign 3

ಬಾಕ್ಸ್-01 ಹಿಂದೆ ಹಿನ್ನಡೆಯಾಗಿತ್ತು: 2018ರ ವಿಧಾನಸಭೆ ಸಾರ್ವತ್ರಿಕ ಚುನಾವಣೆ ವೇಳೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ರಿಗೆ ಲಿಂಗಾಯತ ಸಮುದಾಯದ ಮತಗಳು ಕೈ ತಪ್ಪಿದ್ದವು. ಹೀಗಾಗಿ ಈ ಬಾರಿ ಈ ಮತಗಳನ್ನು ಗಟ್ಟಿ ಮಾಡಿಕೊಳ್ಳುವ ಮೊದಲ ಭಾಗವಾಗಿಯೇ ಬಿ.ವೈ.ವಿಜಯೇಂದ್ರ ತುರುವಿಹಾಳ, ತಿಡಿಗೋಳ ಭಾಗದಲ್ಲಿ ಸಂಚಾರ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಒಟ್ಟಿನಲ್ಲಿ ಉಪಚುನಾವಣೆ ಘೋಷಣೆ ಮೊದಲ ದಿನವೇ ವಿಜಯೇಂದ್ರ ಕೇವಲ ವೇದಿಕೆ ಕಾರ್ಯಕ್ರಮಕ್ಕೆ ಸೀಮಿತವಾಗದೇ ನೇರವಾಗಿ ಪ್ರಚಾರಕ್ಕೆ ಇಳಿದಿದ್ದರು.

TAGGED:ಕಾಂಗ್ರೆಸ್ಪಬ್ಲಿಕ್ ಟಿವಿಪ್ರತಾಪಗೌಡ ಪಾಟೀಲ್ಬಿ.ವೈ.ವಿಜಯೇಂದ್ರಬಿಜೆಪಿಬೈ ಎಲೆಕ್ಷನ್ಮಸ್ಕಿರಾಯಚೂರು
Share This Article
Facebook Whatsapp Whatsapp Telegram

Cinema news

man removes beard mustache gilli nata bigg boss winner
ಗಿಲ್ಲಿ ಬಿಗ್‌ ಬಾಸ್‌ ವಿನ್ನರ್‌ ಆದ್ರೆ ಅರ್ಧ ಗಡ್ಡ, ಮೀಸೆ ತೆಗೆಯುತ್ತೇನೆ ಅಂತ ಚಾಲೆಂಜ್‌ – ನುಡಿದಂತೆ ನಡೆದ ವ್ಯಕ್ತಿ
Cinema Latest Top Stories TV Shows
Rakshita Shetty 1
ಟ್ರೋಫಿ ಸಿಕ್ಕಿಲ್ಲ ಅಷ್ಟೇ.. ನನಗೆ ಎಲ್ಲ ಸಿಕ್ಕಿದೆ, ನಾನೇ ವಿನ್ನರ್: ರಕ್ಷಿತಾ ಶೆಟ್ಟಿ
Cinema Latest Main Post Sandalwood Top Stories
gilli nata hd kumaraswamy
ಅಪ್ಪಟ ಗ್ರಾಮೀಣ ಪ್ರತಿಭೆ ಗಿಲ್ಲಿಗೆ ಅಭಿನಂದನೆ: ಬಿಗ್‌ ಬಾಸ್‌ ವಿನ್ನರ್‌ಗೆ ಕೇಂದ್ರ ಸಚಿವ ಹೆಚ್‌ಡಿಕೆ ವಿಶ್‌
Bengaluru City Cinema Latest Top Stories TV Shows
gilli nata 4
ಬಂದಿರೋ 50 ಲಕ್ಷದಲ್ಲಿ ಜಮೀನು ತಗೊಂಡು ವ್ಯವಸಾಯ ಮಾಡ್ತೀನಿ: ಬಿಗ್‌ ಬಾಸ್‌ ವಿನ್ನರ್‌ ಗಿಲ್ಲಿ ಫಸ್ಟ್ ರಿಯಾಕ್ಷನ್‌
Cinema Latest Main Post TV Shows

You Might Also Like

Mysuru 1
Districts

ಸಿಎಂ ಸ್ವಕ್ಷೇತ್ರದಲ್ಲಿ ಮಹಿಳಾ ಅಧಿಕಾರಿಗೆ ಧಮ್ಕಿ ಪ್ರಕರಣ – 20 ಎಕ್ರೆ ಒತ್ತುವರಿ ಜಾಗ ಸರ್ಕಾರದ ವಶಕ್ಕೆ

Public TV
By Public TV
3 minutes ago
hosur airport
Latest

ತ.ನಾಡು ಸರ್ಕಾರಕ್ಕೆ ಹಿನ್ನಡೆ; ಹೊಸೂರಿನಲ್ಲಿ ಏರ್‌ಪೋರ್ಟ್‌ ಸ್ಥಾಪಿಸುವ ಪ್ರಸ್ತಾವನೆ ತಿರಸ್ಕಾರ

Public TV
By Public TV
20 minutes ago
Hanumanth
Districts

ರಾಜಕಾರಣಿಗಳು ಕಾಲಿಗೆ ಬಿದ್ರೂ ಮತ ಹಾಕಲ್ಲ, ಕೋಟ್ಯಂತರ ಜನ ವೋಟ್ ಮಾಡಿ ಗಿಲ್ಲಿಯನ್ನು ಗೆಲ್ಲಿಸಿದ್ದಾರೆ: ಹನುಮಂತ

Public TV
By Public TV
48 minutes ago
Ashok Nagar Road Accident
Bengaluru City

ಶಾಲೆಗೆ ಬಿಡಲು ಹೋಗ್ತಿದ್ದಾಗ ಕಾಲೇಜು ಬಸ್ ಡಿಕ್ಕಿ – ತಾಯಿ, ಮಗ ಸಾವು

Public TV
By Public TV
2 hours ago
spain train accident
Latest

ಸ್ಪೇನ್‌ನಲ್ಲಿ 2 ಹೈಸ್ಪೀಡ್‌ ರೈಲುಗಳ ನಡುವೆ ಡಿಕ್ಕಿ; 21 ಮಂದಿ ಸಾವು, 70ಕ್ಕೂ ಹೆಚ್ಚು ಜನರಿಗೆ ಗಾಯ

Public TV
By Public TV
2 hours ago
Bigg Boss Gilli
Bengaluru City

`ದೊಡ್ಮನೆ’ ದೊರೆಯಾದ ದಡದಪುರದ ಹೈದ – ಗಿಲ್ಲಿ ಗೆಲುವಿಗೆ ಸಂಭ್ರಮಿಸಿದ ಕರುನಾಡು

Public TV
By Public TV
4 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?