ಮನೆ ಬೀಗ ಮುರಿದು ಕಳ್ಳತನ – ಚಿನ್ನಾಭರಣದ ಜೊತೆ ದವಸ ಧಾನ್ಯ ದೋಚಿದ್ರು!

Public TV
1 Min Read
ROBBERY 1

ರಾಯಚೂರು: ಮನೆಬೀಗ ಮುರಿದು ಚಿನ್ನಾಭರಣದ ಜೊತೆಗೆ ದವಸ ಧಾನ್ಯವನ್ನು ದೋಚಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ದಾಮ್ಲನಾಯ್ಕ ತಾಂಡದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ROBBERY 2 medium

ಬೂದೆಮ್ಮ ಎಂಬವರಿಗೆ ಸೇರಿದ ಮನೆಯಲ್ಲಿ 30 ಗ್ರಾಂ ಚಿನ್ನ, 10 ಗ್ರಾಂ ಬೆಳ್ಳಿ, 50 ಸಾವಿರ ರೂಪಾಯಿ ನಗದು ಸೇರಿ ಸುಮಾರು 3 ಲಕ್ಷ ರೂಪಾಯಿ ಬೆಲೆಬಾಳುವ ವಸ್ತುಗಳ ಜೊತೆಗೆ ದವಸ ಧಾನ್ಯವನ್ನು ಖದೀಮರು ದೋಚಿದ್ದಾರೆ. ಇದನ್ನು ಓದಿ:ಮನೆಯಲ್ಲಿ ನೀರಿಲ್ಲ, ನೀರು ತರಲು ಬಿಡ್ತಿಲ್ಲ – ಯುವಕನ ಅಳಲು

ROBBERY 3 medium

ರಾತ್ರಿ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ನಿನ್ನೆ ರಾತ್ರಿ ಘಟನೆ ಮನೆ ಯಜಮಾನಿಗೆ ಇಂದು ಮಧ್ಯಾಹ್ನ ಮನೆಗೆ ಮರಳಿ ಬಂದಾಗ ಕಳ್ಳತನ ನಡೆದಿರುವುದರ ಬಗ್ಗೆ ತಿಳಿದುಬಂದಿದೆ. ಇದನ್ನು ಓದಿ: ವೈದ್ಯರ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮಕ್ಕೆ ಚಾಲನೆ: ಎಸ್.ಟಿ.ಸೋಮಶೇಖರ್

ಚಿನ್ನಾಭರಣ ಜೊತೆಗೆ 50 ಕೆ.ಜಿ ಸಜ್ಜೆ ಸೇರಿದಂತೆ ಮನೆಯಲ್ಲಿನ ದವಸ ಧಾನ್ಯಗಳನ್ನು ಸಹ ಕಳ್ಳರು ದೋಚಿಕೊಂಡು ಹೋಗಿದ್ದಾರೆ. ಈ ಘಟನೆ ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *