ಮನೆಗೆ ಹೋದಾಗ ಮಗನೇ ಅಂತ ಕರೀತಿದ್ರು – ವಿಜಿ ತಾಯಿ ನಿಧನಕ್ಕೆ ನವೀನ್ ಸಜ್ಜು ಕಣ್ಣೀರು

Public TV
2 Min Read
naveen

– ಅಮ್ಮನ ಮುಂದೆ ಕೊನೆ ಬಾರಿ ಹಾಡಿದ ವೀಡಿಯೋ ಶೇರ್

ಬೆಂಗಳೂರು: ಸ್ಯಾಂಡಲ್‍ವುಡ್ ನಟ ದುನಿಯಾ ವಿಜಯ್‍ರವರ ತಾಯಿ ನಾರಾಯಣಮ್ಮರವರು ವಿಧಿವಶರಾಗಿದ್ದಾರೆ. ಈ ಹಿನ್ನೆಲೆ ಬಿಗ್‍ಬಾಸ್ ಸೀಸನ್-8 ಸ್ಪರ್ಧಿ ಗಾಯಕ ನವೀನ್ ಸಜ್ಜು, ನಾರಾಯಣಮ್ಮ ಅವರೊಂದಿಗೆ ಕಳೆದ ಕೆಲವು ನೆನಪುಗಳನ್ನು ಮೆಲುಕು ಹಾಕಿದ್ದಾರೆ.

duniya vijay 1 medium

ಈ ಕುರಿತಂತೆ ನವೀನ್ ಸಜ್ಜುರವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದು, ವೀಡಿಯೋದಲ್ಲಿ ನಾರಾಯಣಮ್ಮನವರು ಅನಾರೋಗ್ಯದಿಂದ ಬೆಡ್ ಮೇಲೆ ಮಲಗಿಕೊಂಡಿದ್ದು, ವೀಡಿಯೋ ಕಾಲ್ ಮೂಲಕ ನವೀನ್ ಸಜ್ಜುರವರು ‘ಒಳಿತು ಮಾಡು ಮನುಜ’ ಹಾಡನ್ನು ಹೇಳುತ್ತಿರುವುದನ್ನು ಕಾಣ ಬಹುದಾಗಿದೆ.

duniya vijay 1 1 medium

ವೀಡಿಯೋ ಜೊತೆಗೆ, ವಿಜಿಯಣ್ಣನ ಅಮ್ಮ ನಿನ್ನೆ ನಮ್ಮನ್ನೆಲ್ಲಾ ಬಿಟ್ಟು ಹೋಗಿದ್ದಾರೆ. ಮನೆಗೆ ಹೋದಾಗಲೆಲ್ಲಾ ಮಗನೆ ಎಂದು ಬಾಯಿ ತುಂಬಾ ಕರೆಯುತ್ತಿದ್ದ ಅಮ್ಮ, ನಮ್ಮನ್ನು ನೋಡಿಕೊಳ್ಳುತ್ತಿದ್ದ ಪ್ರೀತಿಗೆ ಸರಿಸಾಟಿಯೇ ಇಲ್ಲ. ಅವರಿಗೆ ನಾನು ಹಾಡುವ ‘ಒಳಿತು ಮಾಡು ಮನುಸ, ನೀ ಇರೋದು ಮೂರು ದಿವಸ..’ ಹಾಡೆಂದರೆ ಬಹಳ ಇಷ್ಟ. ಅವರಿಗೆ ಇಷ್ಟವಾದಾಗಲೆಲ್ಲ ಈ ಹಾಡು ಹೇಳಪ್ಪ ಎಂದು ಹೇಳಿ ಕೇಳುತ್ತಿದ್ದರು. ಇದನ್ನೂ ಓದಿ: ಒಂದು ರೀತಿ ನನ್ನ ಮಗುವನ್ನು ನಾನು ಕಳ್ಕೊಂಡಂತೆ ಭಾಸವಾಗ್ತಿದೆ: ಕಣ್ಣೀರಿಟ್ಟ ವಿಜಿ

duniya vijay 2 medium

ಹಾಡು ಕೇಳಿ ಮೌನವಾಗಿ ಕಣ್ಣಂಚಲ್ಲಿ ನೀರು ತಂದುಕೊಳ್ಳುತ್ತಿದ್ದರು. ನಂತರ ಸಮಾಧಾನ ಪಟ್ಟುಕೊಳ್ಳುತ್ತಿದ್ದರು. ಕಳೆದ ಕೆಲವು ದಿನಗಳ ಹಿಂದೆ ಕೋಮಾ ಸ್ಥಿತಿಗೆ ತೆರಳಿದ ಅಮ್ಮ ಯಾರನ್ನು ಗುರುತು ಹಿಡಿಯುವ, ಮಾತಾಡುವ ಶಕ್ತಿ ಕಳೆದುಕೊಂಡಿದ್ದರು. ಒಮ್ಮೆ ವಿಜಿಯಣ್ಣ ವೀಡಿಯೋ ಕಾಲ್ ಮಾಡಿ ಈ ಹಾಡನ್ನು ಹಾಡುವಂತೆ ಹೇಳಿದ್ದರು. ಬಹುಶಃ ಹಾಡನ್ನು, ನನ್ನನ್ನು ಗುರುತಿಸುತ್ತಾರಾ? ಎಂಬ ಆಸೆಯಿಂದ ಹೀಗೆ ಮಾಡಿದ್ದರು. ಅದರಂತೆ ಹಾಸಿಗೆ ಮೇಲೆ ಕೋಮಾ ಸ್ಥಿತಿಯಲ್ಲಿ ಮಲಗಿದ್ದ ಅಮ್ಮನ ಎದುರು ಫೋನ್ ನಲ್ಲಿ ಹಾಡನ್ನು ಹಾಡಿದೆ. ಹಾಡು ಮುಗಿದ ಕೊನೆಗೆ ಅವರ ಕಣ್ಣಂಚಲ್ಲಿ ನೀರು ತುಂಬಿತ್ತು. ಆದರೆ ಮಾತನಾಡುವ ಶಕ್ತಿ ಇರಲಿಲ್ಲ. ಇನ್ನು ಅಮ್ಮ ಬರೀ ನೆನಪಾಗಿ ಮಾತ್ರ ಉಳಿಯಲಿದ್ದಾರೆ. ಅವರೊಂದಿಗೆ ಕಳೆದ ಕ್ಷಣ, ಅವರು ತೋರುತ್ತಿದ್ದ ಪ್ರೀತಿ, ಹಾಡು ಕೇಳುತ್ತಿದ್ದ ಪರಿ. ನೆನಪುಗಳಾಗಿ ಉಳಿದು ಹೋಗಲಿವೆ. ಮಿಸ್ ಯು ಅಮ್ಮ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

Duniya Vijay medium

ಅನಾರೋಗ್ಯದ ಹಿನ್ನೆಲೆ ನಟ ದುನಿಯ ವಿಜಯ್‍ರವರ ತಾಯಿ ನಾರಾಯಣಮ್ಮನವರು ಗುರುವಾರ ಕೊನೆಯುಸಿರೆಳೆದಿದ್ದು, ಸ್ಯಾಂಡಲ್‍ವುಡ್‍ನ ಹಲವಾರು ನಟ-ನಟಿಯರು ಸಂತಾಪ ಸೂಚಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *