ಮಂಡ್ಯ: ನಾಯಿಗಳು ಮೂಳೆಗಳನ್ನು ಎಳೆದಾಡುವುದನ್ನು ನೋಡಿದ ಜನ ಇದೇನಿದು ಎಂದು ನೋಡಿದ್ದಾರೆ. ಕೊಳೆತ ಸ್ಥಿತಿಯಲ್ಲಿ ಇದ್ದ ಮನುಷ್ಯನ ಶವ ಪತ್ತೆಯಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಜಿಲ್ಲೆಯ ಬಸರಾಳು ಗ್ರಾಮದ ಚಿಕ್ಕಕೆರೆಯ ಬಳಿ ನಾಯಿಗಳು ಮೂಳೆಗಳು ಎಳೆದಾಡುತ್ತಿದ್ದವು. ಇದನ್ನು ಕಂಡ ಗ್ರಾಮಸ್ಥರು ಇಷ್ಟು ದೊಡ್ಡದ ಮೂಳೆಗಳು ನಾಯಿಗಳಿಗೆ ಎಲ್ಲಿ ಸಿಕ್ಕಿತು ಎಂದು ಹುಡುಕಿದ ವೇಳೆ ಅಲ್ಲೇ ಪಕ್ಕದಲ್ಲಿ ಇದ್ದ ಪೊದೆಯಲ್ಲಿ ಕೊಳೆದ ಸ್ಥಿತಿಯಲ್ಲಿ ಇದ್ದ ಮನುಷ್ಯನ ಶವ ಪತ್ತೆಯಾಗಿದೆ. ಇದನ್ನು ಕಂಡ ಗ್ರಾಮಸ್ಥರು ಗಾಬರಿಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಶಿಖರ್ ಧವನ್ ಕೊಳಲು ನಾದ- ಪೃಥ್ವಿ ಶಾ ಗಾಯನ
ಗ್ರಾಮಸ್ಥರ ಮಾಹಿತಿಯನ್ನು ಆಧಾರಿಸಿ ಸ್ಥಳಕ್ಕೆ ಬಂದ ಪೊಲೀಸರು ಕೊಳೆತ ಶವವನ್ನು ಪರಿಶೀಲನೆ ನಡೆಸಿದಾಗ ಕೂದಲು ಬಟ್ಟೆಯನ್ನು ಕಂಡು ಇದು ಯುವತಿಯ ಶವ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಇಲ್ಲಿ ದೊರೆತಿರುವ ಕಳೆಬರಹಳನ್ನು ಡಿಎನ್ಎ ಪರೀಕ್ಷೆಗೆ ಲ್ಯಾಬ್ಗೆ ಕಳುಹಿಸಲಾಗಿದೆ. ಸದ್ಯ ಈ ಕುರಿತು ಬಸರಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.