ಬಿಗ್ ಬಾಸ್ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್ ಎಷ್ಟು ನೇರವಾಗಿ ಮಾತನಾಡುತ್ತಾರೋ ಅಷ್ಟೇ ನಿಷ್ಠೂರವಾದಿ, ಹಾಗೇ ಅಷ್ಟೇ ಬೇಗ ಭಾವುಕರಾಗುತ್ತಾರೆ. ಟಾಸ್ಕ್ನಲ್ಲಿ ಗೆದ್ದ ಸ್ಪರ್ಧಿಗಳಿಗೆ ಮನೆಯಿಂದ ಪತ್ರಗಳು ಬರುತ್ತವೆ. ಆದರೆ ಮಗಳಿಂದ ಬಂದಿರುವ ಪತ್ರವನ್ನು ಓದಿದ ಚಕ್ರವರ್ತಿ ಕಣ್ಣೀರು ಹಾಕಿ ಕಿರುಚಾಡಿದ್ದಾರೆ.
ಬಿಗ್ ಬಾಸ್ನಲ್ಲಿ ನೀಡಿದ್ದ ಟಾಸ್ಕ್ ಗೆದ್ದು ಚಕ್ರವರ್ತಿ ಚಂದ್ರಚೂಡ್ ಅವರಿಗೆ ಮಗಳು ಚುಕ್ಕಿ ಬರೆದಿರುವ ಪತ್ರ ಓದುವ ಅವಕಾಶ ಸಿಕ್ಕಿದೆ. ಮಗಳ ಪತ್ರವನ್ನು ಓದಿ ಚಕ್ರವರ್ತಿ ಅವರು ಭಾವುಕರಾಗಿ ಕಿರುಚಾಡಿದ್ದಾರೆ. ಮನೆಯವರೆಲ್ಲರೂ ಚಕ್ರವರ್ತಿಗೆ ಸಮಾಧಾನ ಹೇಳಿದ್ದಾರೆ. ಕೆಲವರು ಅವರ ಮನೆಯಮಂದಿಯನ್ನು ನೆನೆದು ಕಣ್ಣಿರು ಹಾಕಿದ್ದಾರೆ.
ಹಾಯ್ ಅಪ್ಪಾ, ನಾನು ನಿನ್ನ ಪ್ರತಿನಿತ್ಯ ಟಿವಿಯಲ್ಲಿ ನೋಡುತ್ತಿದ್ದೇನೆ. ನಿನ್ನ ಮಾತಿನ ಕಿಚ್ಚು ಆ ಮನೆಯಲ್ಲಿ ಮೌನದ ಪತಾಕೆಯನ್ನು ಹಾರಿಸಿದೆ. ಪ್ರತಿ ಪಾತ್ರದ ನಾಟಕ ಬೇರೆ. ಆ ಪಾತ್ರದ ಕಥೆಯನ್ನು ಬದಲಾಯಿಸುವ ಶಕ್ತಿ ನಿನಗೆ ಇದೆ. ನಾನು ನೀನು ಕಳೆದಿರುವ ಸಮಯ ತುಂಬ ಕಡಿಮೆ. ನಾನು ನಿನ್ನ ತುಂಬ ಮಿಸ್ ಮಾಡಿಕೊಳ್ತಿದ್ದೀನಿ. ಹೀಗೆ ಅಪ್ಪನ ಜೊತೆಗೆ ಕಳೆದಿರುವ ಕೆಲವು ಕ್ಷಣಗಳನ್ನು ನೆನೆಪಿಸಿಕೊಂಡು ಬರೆದು ನಿನ್ನ ಮುದ್ದಿನ ಮಗಳು ಚುಕ್ಕಿ ಎಂದು ಚಕ್ರವರ್ತಿ ಚಂದ್ರಚೂಡ್ ಮಗಳು ಬರೆದಿದ್ದಾರೆ. ಚಕ್ರವರ್ತಿಗೆ ಮಗಳಿಂದ ಪತ್ರಬಂದಿರುವುದ ಅತ್ಯಂತ ಸಂತೋಷವನ್ನು ತಂದಿದೆ.
ಚಕ್ರವರ್ತಿ ಅವರು ಆಗಾಗ ನಾನು ಜೀವನದಲ್ಲಿ ಸೋತಿದ್ದೇನೆ ಎಂದು ತಮ್ಮ ವೈಯಕ್ತಿಕ ವಿಚಾರಗಳ ಕುರಿತಾಗಿ ಹೇಳುತ್ತಿರುತ್ತಾರೆ. ಪ್ರತಿಯೊಬ್ಬರ ಜೀವನದಲ್ಲಿ ಸುಖ, ದುಖಃ ನೋವುಗಳಿರುತ್ತವೆ. ಬಿಗ್ಬಾಸ್ ಸಮಯಕ್ಕೆ ತಕ್ಕಂತೆ ಒಂದೊಂದಾಗಿ ಹೊರಗೆ ತೆಗೆದು ಮನಸ್ಸಿನ ಭಾರವನ್ನು ಹಗುರ ಮಾಡುತ್ತಿರುವುದಂತೂ ಖಂಡಿತಾ ಹೌದು.