ನವದೆಹಲಿ: ದೇಶದ ಜನರು ಎಚ್ಚೆತ್ತುಕೊಳ್ಳದಿದ್ರೆ 2024ಕ್ಕೆ ಭಾರತದಲ್ಲಿ ನಡೆಯುವ ಕೊನೆ ಚುನಾವಣೆ ಆಗಬಹುದು ಎಂದು ಹೇಳುವ ಮೂಲಕ ಇವಿಎಂ ಮೇಲೆ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಪತ್ರಕರ್ತರೊಬ್ಬರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ದಿಗ್ವಿಜಯ್ ಸಿಂಗ್, ಮೇಡಂ ನಿಮ್ಮ ಮಾತು ಸತ್ಯ. ಇವಿಎಂ ತಂತ್ರಜ್ಞಾನ ಭಾರತದ ಸಂಸದೀಯ ಚುನಾವಣೆಯನ್ನ ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದು, ಭಾರತದ ಪ್ರಜಾಪ್ರಭುತ್ವ ಅವನತಿಯ ಸ್ಥಿತಿಯಲ್ಲಿದೆ. ಒಂದು ವೇಳೆ ಬ್ಯಾಲೆಟ್ ಪೇಪರ್ ಮರಳದಿದ್ರೆ 2024ಕ್ಕೆ ಕೊನೆ ದೇಶದದಲ್ಲಿ ಕೊನೆಯ ಚುನಾವಣೆ ಆಗಬಹುದು ಎಂದು ಟ್ವೀಟ್ ಮಾಡಿದ್ದಾರೆ.
ಕಮಲ್ನಾಥ್ ಸರ್ಕಾರ ಗೋಶಾಲೆಗಳಿಗಾಗಿ 132 ಕೋಟಿ ರೂ. ಅನುದಾನ ಮೀಸಲು ಇರಿಸಿತ್ತು. ಆದ್ರೆ ಬಿಜೆಪಿ ಸರ್ಕಾರ ಮೊತ್ತವನ್ನ ಕಡಿತಗೊಳಿಸಿ 11 ಕೋಟಿಗೆ ತಂದಿದೆ. ಗೋ ಮಾತೆಯ ಅಸಲಿ ಭಕ್ತರು ಯಾರು ಎಂದು ಜನರು ತೀರ್ಮಾನಿಸಬೇಕಿದೆ ಎಂದು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Extremely sad that an eminent Lawyer honoured by Harvard Law School, invited in India to become a Judge in the High Court is in Jail since last 2 years without trial and evidence. Her bail application has been rejected from Lower Court to the Supreme Court. Sad. https://t.co/ZOGFsf4q4A
— digvijaya singh (@digvijaya_28) August 31, 2020