ಬಿಗ್ ಮನೆಯಲ್ಲಿ ನಡೀತು ಜಡೆ ಜಗಳ..!

Public TV
1 Min Read
CHANDRAKALA MOHAN

ಬೆಂಗಳೂರು: ಬಿಗ್ ಮನೆಯಲ್ಲಿರುವ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಮುಖವಾಡಗಳಿವೆ. ಕೆಲವು ವಿಚಾರಗಳಲ್ಲಿ ಅವರ ಮುಖವಾಡ ಕಳಚಿ ಬೀಳುತ್ತದೆ. ಬಣ್ಣ ಬಣ್ಣದ ಮುಖವಾಡವನ್ನು ಕಳಚುವ ಕೆಲಸವನ್ನು ಬಿಗ್‍ಬಾಸ್ ಮಾಡುತ್ತಾರೆ. ಚಂದ್ರಕಲಾ ಮೋಹನ್, ನಿರ್ಮಲ ಚೆನ್ನಪ್ಪ ಅಡುಗೆ ಮನೆ ವಿಚಾರವಾಗಿ ಕಿತ್ತಾಡಿಕೊಂಡು ಸುದ್ದಿಯಾಗಿದ್ದಾರೆ.

CHANDRAKALA MOHAN 2

ರೂಲ್ಸ್ ಬ್ರೇಕ್ ಮಾಡಿದ ಚಂದ್ರಕಲಾ ಮೋಹನ್..!

ಬಿಗ್‍ಬಾಸ್ ಮನೆಯಲ್ಲಿ ಕೆಲವು ರೂಲ್ಸ್ ಇರುತ್ತದೆ. ಅವುಗಳನ್ನು ಬ್ರೇಕ್ ಮಾಡಿದರೆ ತಪ್ಪಿಗೆ ತಕ್ಕ ಶಿಕ್ಷೆಯನ್ನು ಬಿಗ್‍ಬಾಸ್ ನೀಡುತ್ತಾರೆ. ಧನುಶ್ರೀ ಬಿಗ್‍ಬಾಸ್ ಮನೆಯ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಅವರಿಂದಲೆ ಅಡುಗಗೆ ಬೇಕಾದ ತರಕಾರಿಗಳನ್ನು ಕಟ್ ಮಾಡಿಕೊಳ್ಳಬೇಕು ಎಂದು ಹೇಳಿದ್ದರು. ಆದರೆ ಚಂದ್ರಕಲಾ ತಾವೇ ತರಕಾರಿ ಕಟ್ ಮಾಡಿ ರೂಲ್ಸ್ ಬ್ರೇಕ್ ಮಾಡಿದ್ದರು. ಈ ತಪ್ಪಿಗೆ ಮನೆಯಲ್ಲಿರುವ ಕೆಲವು ತರಕಾರಿಗಳನ್ನು ಬಿಗ್ ಬಾಸ್ ವಾಪಸ್ ಪಡೆದಿದ್ದರು.

Manju Pavagada1

ಈ ವಿಚಾರವಾಗಿ ಮನೆಯವರ ಮನಸ್ಸಲ್ಲಿ ಕೊಂಚ ಬೇಸರವಿತ್ತು. ಆದರೆ ಯಾರು ಕೂಡ ಆ ಬೇಸರವನ್ನು ತೋರಿಸಿಕೊಳ್ಳದೆ ಸಮಾಧಾನ ಮಾಡಿಕೊಂಡಿದ್ದರು. ಆದರೆ ಚಂದ್ರಕಲಾ ಮೋಹನ್ ತಮ್ಮ ತಪ್ಪನ್ನು ನಿರ್ಮಲ ಚೆನ್ನಪ್ಪ ಮೇಲೆ ಎತ್ತಿ ಹಾಕುವ ಪ್ರಯತ್ನವನ್ನು ಮಾಡಿದ್ದಾರೆ. ನಿರ್ಮಲಾ ನೀನು ಅಡುಗೆಗೆ ಬರುವುದಿಲ್ಲ. ಹೀಗಾಗಿ ನಾನೊಬ್ಬಳೇ ಅಡುಗೆ ಮಾಡುವ ಗಡಿಬಿಡಿಯಲ್ಲಿ ಹೀಗೆ ಆಯಿತು ಎಂದು ಅವರನ್ನು ಬಚಾವ್ ಮಾಡಿಕೊಳ್ಳುವ ಕೆಲಸವನ್ನು ಮಾಡಿದ್ದಾರೆ.

ತನ್ನದಲ್ಲದ ತಪ್ಪಿಗೆ ಕ್ಷಮೆ ಕೇಳಿದ ನಿರ್ಮಲಾ..!

ನಿರ್ಮಲ ಅವರು ಕ್ಷಮೆ ಕೇಳಿದ್ದಾರೆ. ಆದರೂ ಕೂಡಾ ಚಂದ್ರಕಲಾ ಮೋಹನ್ ಏರು ಧ್ವನಿಯಲ್ಲಿ ಮಾತನಾಡಿದ್ದರು. ಈ ವಿಚಾರವನ್ನು ವಾರದ ಕಟ್ಟೆ ಪಂಚಾಯ್ತಿಯಲ್ಲಿ ಸುದೀಪ್ ಮಾತನಾಡಿದ್ದಾರೆ. ನಮ್ಮ ಮಾತುಗಳು ನಮ್ಮ ಸಣ್ಣತನವನ್ನು ಪ್ರದರ್ಶಿಸುತ್ತದೆ ಎಂದು ಕೆಲವು ಬುದ್ಧಿ ಮಾತುಗಳನ್ನು ಹೇಳಿ ಸಮಾಧಾನ ಮಾಡಿದ್ದಾರೆ.

nirmala chennappaಬಿಗ್‍ಬಾಸ್ ಮನೆ ಎಂದರೆ ಜಗಳ ಕಾಮನ್. ಒಬ್ಬರು ತಪ್ಪನ್ನು ಇನ್ನೊಬ್ಬರ ಮೇಲೆ ಬೆರಳು ಮಾಡಿ ತೋರಿಸುತ್ತಿರುವುದು ಹೊಸದೇನಲ್ಲ. ಆದರೆ ಯಾರು ತಪ್ಪು ಮಾಡಿದರೂ ಗುರುತಿಸಿ ಶಿಕ್ಷೆ ನೀಡುವವರು ಬಿಗ್‍ಬಾಸ್.

Share This Article
Leave a Comment

Leave a Reply

Your email address will not be published. Required fields are marked *