ಪಲ್ಟಿಯಾದ 60 ಪ್ರಯಾಣಿಕರಿದ್ದ ಬಸ್

Public TV
1 Min Read
Bus Overturnig

– ಸ್ಥಳೀಯರಿಂದ ರಕ್ಷಣಾ ಕಾರ್ಯ

ಚಂಡೀಗಢ: ಹರಿಯಾಣದ ಯಮುನಾನಗರ ಜಿಲ್ಲೆಯ ಔರಂಗಾಬಾದ್ ಸೇತುವೆ ಬಳಿ 60 ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಬಸ್ ಪಲ್ಟಿಯಾಗಿ ಎಂಟು ಜನ ಗಾಯಗೊಂಡಿದ್ದಾರೆ. ದೊಡ್ಡ ದುರಂತವೊಂದು ತಪ್ಪಿದ್ದು, ಕೂದಲೆಳೆ ಅಂತರದಲ್ಲಿ ಎಲ್ಲರೂ ಬಚಾವ್ ಆಗಿದ್ದಾರೆ.

ambulance 1

ಬಸ್ ಉತ್ತರ ಪ್ರದೇಶದ ಮುರದಾಬಾದ್ ನಿಂದ ಹೊರಟಿತ್ತು. ಚಾಲಕ ನಿರ್ಲಕ್ಷ್ಯದಿಂದ ಬಸ್ ಪಲ್ಟಿಯಾಗಿದೆ. ಪ್ರಯಾಣಿಕರೆಲ್ಲರೂ ಸಹಾಯಕ್ಕೆ ಕೂಗಿ ಕೊಳ್ಳುತ್ತಿದ್ದಂತೆ ಎಚ್ಚೆತ್ತ ಸ್ಥಳೀಯರು ರಕ್ಷಣಾ ಕಾರ್ಯಕ್ಕೆ ಮುಂದಾಗಿ ಪೊಲೀಸರು ಮತ್ತು ಅಂಬುಲೆನ್ಸ್ ಗೆ ಮಾಹಿತಿ ನೀಡಿದ್ದಾರೆ.

Ambulance A

ಅಪಘಾತದಲ್ಲಿ ಎಂಟು ಜನರಿಗೆ ಗಂಭೀರ ಪ್ರಮಾಣದ ಗಾಯಗಳಾಗಿದ್ದು, ಎಲ್ಲರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಜನರ ಕಿರುಚಾಟ ಕೇಳಿದ ಕೂಡಲೇ ಸ್ಥಳೀಯ ನಿವಾಸಿಗಳು ರಕ್ಷಿಸಿದ್ದಾರೆ. ಬಸ್ ಪಲ್ಟಿಯಾಗಿ ಇಂಧನ ಟ್ಯಾಂಕ್ ಲೀಕ್ ಆದ್ರೂ ಬೆಂಕಿ ಹತ್ತಿಕೊಂಡಿಲ್ಲ. ದೊಡ್ಡ ಅಪಾಯದಿಂದ 60 ಜನರು ಪಾರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ಸುಭಾಷ್ ಚಂದ್ರ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *