‘ಪತ್ರವಳ್ಳಿ’ ಪದಕ್ಕೆ ನಮಗೆ ಅರ್ಥವೇ ಸಿಗಲಿಲ್ಲ- ಚಕ್ರವರ್ತಿಗೆ ಸುದೀಪ್ ಕ್ಲಾಸ್

Public TV
2 Min Read
chakravarthy2

ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‍ನ 2ನೇ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಸುದೀಪ್ ಪ್ರಶಾಂತ್ ಸಂಬರಗಿ ಮತ್ತು ಚಕ್ರವರ್ತಿ ಚಂದ್ರಚೂಡ್‍ಗೆ ಖಡಕ್ ಆಗಿ ವಾರ್ನಿಂಗ್ ಮಾಡಿ ಕಿವಿ ಮಾತು ಹೇಳಿದ್ದಾರೆ.

bigg bosss aravind plan 2 medium

ಹಿಂದಿನ ವಾರ ಪ್ರಶಾಂತ್ ಸಂಬರಗಿ ಅನ್‍ವಿಶಲ್ ಅಗಿರುವ ಕುರಿತಾಗಿ ಮಾತು ಆರಂಭಿಸಿದ್ದರು. ಸ್ವಲ್ವ ತಮಾಷೆಯಾಗಿ ಮಾತನ್ನು ಸುದೀಪ್ ಆರಂಭಿಸಿದ್ದರು. ನಂತರ ಹಿಂದಿನ ವಾರ ಚಕ್ರವರ್ತಿ ಮಂಜು, ದಿವ್ಯಾ ಸುರೇಶ್ ಕುರಿತಾಗಿ ಪ್ರವಳ್ಳಿ ಎನ್ನುವ ಶಬ್ದವನ್ನು ಬಳಸಿ ಮನಸ್ಸಿಗೆ ಬಂದತಂತೆ ಮಾತನಾಡಿದ್ದರು ಎಂದು ಹೇಳಿದರೆ ತಪ್ಪಾಗಲಾರದು. ಹಿಂದಿನ ವಾರ ಸುಮ್ಮನೆ ಹೀಗಿದ್ದ ಕಿಚ್ಚ ಈ ವಾರ ಸಖತ್ ಖಡಕ್ ಆಗಿ ಮಾತನಾಡಿದ್ದಾರೆ.

ಚಕ್ರವರ್ತಿಯವರೇ ನೀವು ಹೆಚ್ಚು ಮಕ್ಕಳಿಗೆ ಗೌರವ ಕೊಡುತ್ತೇನೆ ಎಂದು ತುಂಬಾ ಸಲ ಹೇಳಿಕೊಂಡಿದ್ದೀರಾ? ಎಂದು ಕೇಳಿದಾಗ ಚಕ್ರವರ್ತಿ ಅವರದ್ದೇ ಕೆಲವು ವಿಚಾರಗಳನ್ನು ಹೇಳಿದ್ದಾರೆ. ಕರ್ನಾಟಕದ ಡಿಕ್ಷನರಿಯಲ್ಲಿ 6 ಬೇರೆ ಬೇರೆ ಉಪಭಾಷೆಗಳಲ್ಲಿ ‘ಪತ್ರವಳ್ಳಿ’ ಎನ್ನುವ ಪದಕ್ಕೆ ಅರ್ಥ ಹೀಗೆ ಇದೆ ಎಂದು ನಿಮ್ಮದೇ ರೀತಿಯಲ್ಲಿ ಕಳೆದ ವಾರ ಹೇಳಿದ್ದೀರಾ. ಮೈಸೂರು ವಿಶ್ವ ವಿದ್ಯಾಲಯದವರು ಮಾಡಿರುವ ಪದಕೋಶ, ಕನ್ನಡ ಸಾಹಿತ್ಯಪರಿಷತ್ ಮಾಡಿರುವ ಪದಕೋಶವನ್ನು ನೋಡಿದೆವು ಆದರೆ ಕನ್ನಡದ ಯಾವ ಡಿಕ್ಷನರಿಯಲ್ಲೂ ಕೂಡಾ ಆ ಪದದ ಅರ್ಥದಲ್ಲಿ ಸಿಗಲಿಲ್ಲ ಎಂದು ಹೇಳಿದ್ದಾರೆ. ಬೇಲಿ ಪಕ್ಕದಲ್ಲಿ ನಡೆಯುವ ವಿಚಾರ ಎಂದು ಹೇಳಿದ್ದೀರಾ ನೀವು. ಆದರೆ ನಿಮಗೆ ಸ್ಪಷ್ಟತೆ ಇಲ್ಲದೇ ಈ ವಿಚಾರವನ್ನು ನೀವು ಮಾತನಾಡಿದ್ದ ಕುರಿತು ದೊಡ್ಡ ಚರ್ಚೆಯೇ ನಡೆಯುತ್ತಿದೆ. ಕನ್ನಡದ ವೈವಿದ್ಯಮಯ ಜಿಲ್ಲೆಯಲ್ಲಿ ಬಳಸುವ ಹಲವಾರು ಪದಗಳಿಗೆ ಅರ್ಥ ಇಲ್ಲ ಸರ್ 16ಕ್ಕೂ ಹೆಚ್ಚು ನಿಘಂಟುಗಳಿವೆ ಎಲ್ಲಾ ಶಬ್ದಕೋಶದಲ್ಲಿ ಎಲ್ಲಾ ಪದಗಳಿಗೆ ಅರ್ಥ ಸಿಗುವುದಿಲ್ಲ. ಹಳ್ಳಿ ಕಡೆ ಬಳಸುವ ಪದಗಳಿಗೆ ಅರ್ಥ ಸಿಗಲ್ಲ ಅದು ಒಂದು ಸಮನಾರ್ಥಕವಾಗಿದೆ. ಆಡು ಭಾಷೆಯಲ್ಲಿ ಇದೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ನೀವು ಹೆಣ್ಣುಮಕ್ಕಳಿಗೆ ಗೌರವ ಕೋಡುತ್ತವೆ ಎಂದು ಹೇಳುತ್ತಾರ ಎಂದಾದರೆ ಹೆಣ್ಣುಮಕ್ಕಳಿಗೆ ಗೌರವ ಕೊಡ್ತೀನಿ ಅಂತ ನೀವು ಹೇಳ್ತೀರಾ ಹಗಾದ್ರೆ ಇಂತಹ ಪದವನ್ನು ಹೇಗೆ ಬಳಸಿದ್ದೀರಾ? ಏನದು ಚಕ್ರವರ್ತಿ ಅಂತ ಸುದೀಪ್ ಹೇಳಿದ್ದಾರೆ. ದಿವ್ಯಾ ನಿಮಗೆ ಅನ್ನಿಸಿದ್ದನ್ನೂ ನೀವು ಮಾತನಾಡಿ, ನಿಮ್ಮನ್ನು ನೀವು ಸೇವ್ ಮಾಡಿಕೊಳ್ಳಿ ಎಂದು ದಿವ್ಯಾ ಅವರಿಗೆ ಕಿವಿ ಮಾತು ಹೇಳಿದ್ದಾರೆ. ಮಂಜು ನೀವು ಚಕ್ರವರ್ತಿ ಅವರ ವೈಯಕ್ತಿಕ ವಿಚಾರವಾಗಿ ಮಾತನಾಡಿದ್ದೂ ತಪ್ಪು. ಸ್ವಾರಿ ಹೇಳುವುದು ತಪ್ಪಲ್ಲ ಎಂದು ಕೇಳುತ್ತಾ ಕಿವಿ ಮಾತು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *