ಲಕ್ನೋ: ತಾನು ನಿರೀಕ್ಷೆ ಮಾಡಿದ್ದಕ್ಕಿಂತಲೂ ಹೆಚ್ಚಿನ ಹಣ ಕಳ್ಳತನ ಮಾಡಿದ್ದನ್ನು ಕಂಡು ಕಳ್ಳನೊಬ್ಬ ಹೃದಯಾಘಾತಕ್ಕೆ ಒಳಾಗಾಗಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ನಡೆದಿದೆ.
ಕಳ್ಳನು ಅಪಾರವಾದ ಹಣವನ್ನು ಒಂದೇ ಬಾರಿಗೆ ನೋಡಿ ಸಂತೋಷಗೊಂಡಿದ್ದನು. ಇದರಿಂದ ಹೃದಯಾಘಾತಗೊಂಡಿದ್ದು, ಇದೀಗ ಕದ್ದ ಹಣದ ಅಪಾರ ಭಾಗಗವನ್ನು ತನ್ನ ಹೃದಯದ ಚಿಕಿತ್ಸೆಗೆ ಖರ್ಚುಮಾಡಿದ್ದಾನೆ.
ಈ ವಿಚಾರ ಕಳ್ಳನೊಂದಿಗೆ ಸಂಬಂಧಹೊಂದಿದ್ದ ಮತ್ತಿಬ್ಬರು ಕಳ್ಳರು ಕಳೆದ ತಿಂಗಳು ಕೊಟ್ವಾಲಿ ದೇಹತ್ ಪ್ರದೇಶದಲ್ಲಿ ಕಳ್ಳತನ ಮಾಡಿದ್ದು, ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದ ವೇಳೆ ವಿಷಯವನ್ನು ಬಹಿರಂಗಪಡಿಸಿದಾಗ ಈ ವಿಚಾರ ಬಯಲಾಗಿದೆ.
ಈ ಕುರಿತಂತೆ ಬಿಜ್ನೋರ್ ಪೊಲೀಸ್ ವರಿಷ್ಠಾಧಿಕಾರಿ ಧರಮ್ ವೀರ್ ಸಿಂಗ್, ಫೆಬ್ರವರಿ 16 ಮತ್ತು 17ರ ಮಧ್ಯರಾತ್ರಿ ನವಾಬ್ ಹೈದರ್ ಅವರ ಒಡೆತನದ ಸಾರ್ವಜನಿಕ ಸೇವಾ ಕೇಂದ್ರಕ್ಕೆ ಇಬ್ಬರು ಕಳ್ಳರು ನುಸುಳಿ, ಅಲ್ಲಿಂದ 7 ಲಕ್ಷ ರೂ.ವನ್ನು ಕಳ್ಳತನವಾಗಿರುವ ಬಗ್ಗೆ ಹೈದರ್ ದೂರು ದಾಖಲಿಸಿದ್ದರು. ಈ ಪ್ರಕರಣವನ್ನು ಬೇಧಿಸಿದಾಗ ಈ ವಿಚಾರ ಬೆಳಕಕಿಗೆ ಬಂದಿದೆ ಎಂದು ತಿಳಿಸಿದರು.