ಸೂಪರ್ ಸಂಡೆ ವಿಥ್ ಸುದೀಪ್ದಲ್ಲಿ ಈ ವಾರ ಹೆಚ್ಚು ಹೈಲೆಟ್ ಆಗಿದ್ದು ನಿಧಿ ಸುಬ್ಬಯ್ಯ. ನಿಧಿ ಅವರ ಒಂದೊಂದು ಸಮಸ್ಯೆಗಳನ್ನು ಹೇಳುತ್ತಿರುವುದನ್ನು ಕೇಳಿದ ಸುದೀಪ್, ಸಖತ್ ಎಂಜಾಯ್ ಮಾಡುತ್ತಿದ್ದರು. ಬಿಗ್ಬಾಸ್ ಮನೆಯಲ್ಲಿ ನಿಧಿ ಸುಬ್ಬಯ್ಯ ಅವರಿಗೆ ಕೋಪ ಬಂದಾಗ ಅಳು ಬರುತ್ತಾ ಅಥವಾ ಅಳು ಬಂದಾಗ ಕೋಪ ಬರುತ್ತಾ ಎಂದು ಸುದೀಪ್ ಕೇಳಿದ್ದಾರೆ. ಈ ವೇಳೆ ನಿಧಿ ಸುಬ್ಬಯ್ಯ ಅವರು ಹೇಳಿದ ಮಾತನ್ನು ಕೇಳಿ ಸುದೀಪ್ ಒಂದು ಕ್ಷಣ ಸುಮ್ಮನೆ ನಿಂತಿದ್ದಾರೆ.
ಮನೆಗೆ ಬಂದು ಇಷ್ಟು ದಿನದಲ್ಲಿ ಎಷ್ಟು ಬಾರಿ ಕೋಪ ಬಂದಿದೆ ಎಂದು ಸುದೀಪ್ ಅವರು ಕೇಳಿದ್ದಾರೆ. ಆಗ ನಿಧಿ ಅವರು ಎರಡರಿಂದ ಮೂರು ಸಲ ಎಂದು ಹೇಳಿದ್ದಾರೆ. ಈ ವೇಳೆ ಪಕ್ಕದಲ್ಲೇ ಇದ್ದ ಶುಭಾ ಇಲ್ಲ ಸರ್ ಪ್ರತಿ ಸಲ ಕೋಪ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಆಗ ನಿಧಿ ತೊದಲುತ್ತಾ 2, 3 ಯಾವಾಗಲೂ ಕೋಪ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಈ ವೇಳೆ ಮನೆ ಮಂದಿ ಜೋರಾಗಿ ನಕ್ಕಿದ್ದಾರೆ.
ನಾನು ಅಡುಗೆಯನ್ನು ಮಾಡುತ್ತೇನೆ ಕೆಲವರು ಚೆನ್ನಾಗಿ ಮಾಡುತ್ತೀಯಾ ಎಂದು ಹೇಳಿದ್ದಾರೆ. ಆದರೆ ರಾಜೀವ್ ಮಾತ್ರ ನೀನು ತರಕಾರಿ ಕಟ್ ಮಾಡೋದು ಒಗ್ಗರಣೆ ಹಾಕುವುದು ಮಾಡುತ್ತೀಯಾ ಎಂದು ಹೇಳುತ್ತಾರೆ ನನಗೆ ಬೇರಸವಾಯಿತ್ತು ಎಂದಿದ್ದಾರೆ.
ನಿಧಿ ಅವರ ಫನ್ನಿ ಆಪಾದನೆಯನ್ನು ಕೇಳಿದ ಸುದೀಪ್, ಇನ್ನು ಮುಂದೆ ನಿಧಿ ಅವರನ್ನು ಹೊಗಳಬೇಕು ಎಂದರೆ ಅವರಿಗೆ ವಾರ ಪೂರ್ತಿ ಜೋರಾಗಿ ಹೊಗಳಬೇಕು. ಅದೇ ಅವರಿಗೆ ಏನಾದರೂ ಬೈಯಬೇಕು ಎಂದರೆ ಸಣ್ಣದಾಗಿ ಹೇಳಬೇಕು. ನೀವು ನಿಧಿ ಅವರನ್ನು ಹೊಗಳುತ್ತಿರುವುದು ಎಲ್ಲರಿಗೂ ಗೊತ್ತಾಗಬೇಕು ಹಾಗೇ ನೀವು ಹೊಗಳಬೇಕು ಇದು ನಾನು ನಿಮಗೆ ಕೊಡುತ್ತಿರುವ ಟಾಸ್ಕ್ ಎಂದು ಸುದೀಪ್ ಹೇಳಿದ್ದಾರೆ.
ನಿಧಿ ಸಖತ್ ಆಗಿ ರೆಡಿ ಆಗಿದ್ದಾರೆ ಹೊಡಿರೋ ಚಪ್ಪಾಳೆ ಎಂದು ರಘು ಹೇಳಿದ್ದಾರೆ. ನಿಧಿ ಆಯಮ್ಮ ಸಖತ್ ಆಗಿ ಮಾಡುತ್ತಾರೆ, ಟಾಸ್ಕ್ , ಅಡುಗೆ ಎಲ್ಲಾ ಎಂದು ಮಂಜು ಹೇಳಿದ್ದಾರೆ. ನಿಧಿ ಸಖತ್ ಆಗಿ ಕಾಮಿಡಿ ಮಾಡುತ್ತಾರೆ, ಎಷ್ಟು ಚಂದವಾಗಿ ನಗುತ್ತಾರೆ ಎಂದು ಪ್ರಶಾಂತ್ ಹೇಳಿದ್ದಾರೆ. ಸುದೀಪ್ ಮನೆಯವರೆಲ್ಲ ನಿಧಿ ಅವರನ್ನು ಹೊಗಳಿದ್ದು ಕೇಳಿ ಸಖತ್ ಎಂಜಾಯ್ ಮಾಡಿದ್ದಾರೆ. ಮುಂದಿನ ವಾರದವರೆಗೂ ನಿಧಿ ಅವರನ್ನು ಹೊಗಳುತ್ತಾ ಇರಿ. ಅದು ಜೋರಾಗಿ ಎಲ್ಲರಿಗೂ ಕೇಳುವಂತೆ ಹೊಗಳಬೇಕು ಎಂದು ಹೇಳಿದ್ದಾರೆ.