ಗದಗ: ನವಜಾತ ಶಿಶುವೊಂದನ್ನ ಕೊಂದು ಪೋದೆ ಪಕ್ಕದಲ್ಲಿ ಬಿಸಾಕಿ ಹೋಗಿರುವ ಮನಕುಲಕುವ ಘಟನೆ ಜಿಲ್ಲೆ ಗಜೇಂದ್ರಗಡ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಪಟ್ಟಣದ ಉಣಚಗೇರಿ ರಸ್ತೆಯಲ್ಲಿ ಈ ಅಮಾನುಷ ಘಟನೆ ನಡೆದಿದೆ. ಮೃತ ಮಗುವಿನ ಮುಖದ ಸುತ್ತ ಕೆಂಪು ಗಾಯಗಳಾಗಿವೆ. ಅಲ್ಲದೇ ಸ್ಥಳದಲ್ಲಿ ಕುಡುಗೋಲು, ಬ್ಲೇಡ್ ಹಾಗೂ ಬಾಸ್ಕೆಟ್ ಬ್ಯಾಗ್ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ.
ಹೆಣ್ಣು ಹಸುಗೂಸಿನ ಶವ ನೋಡಲು ಸ್ಥಳೀಯರು ಮುಗಿಬಿದ್ದಿದ್ದಾರೆ. ಮಗು ಯಾರದ್ದು ಎಂದು ತಿಳಿದು ಬಂದಿಲ್ಲ. ಕೃತ್ಯ ಎಸಗಿದ ಪಾಪಿ ಕಿರಾತಕರ ವಿರುದ್ಧ ಸ್ಥಳೀಯರು ಹಿಡಿಶಾಪ ಹಾಕಿದ್ದಾರೆ. ಕರಳು ಬಳ್ಳಿಯನ್ನು ಕತ್ತರಿಸಿ ಕೊಂದು ಬಿಸಾಕಿದ್ದು, ನೋಡುಗರ ಕರಳು ಹಿಂಡುವಂತಿತ್ತು. ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದು, ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.