ನನಗೆ ನೋಟಿಸ್ ನೀಡಿದ್ದು ಆಶ್ಚರ್ಯ ತಂದಿದೆ: ಲೂಸ್ ಮಾದ ಯೋಗಿ

Public TV
3 Min Read
Loose Mada Yogi

– 2013ರ ಬಳಿಕ ರಾಗಿಣಿ ಸಂಪರ್ಕವಿಲ್ಲ
– ಸಿಗರೇಟ್, ಕುಡಿತದ ಚಟ ಇದ್ದಿದ್ದು ನಿಜ

ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನನಗೆ ಐಎಸ್‍ಡಿ ಶನಿವಾರ ನೋಟಿಸ್ ನೀಡಿತ್ತು. ಇದರ ಅನ್ವಯ ನೋಟಿಸ್ ವಿಚಾರಣೆಗೆ ಹಾಜರಾಗಿ ಪೊಲೀಸರ ಪ್ರಶ್ನೆಗೆ ಉತ್ತರಿಸಿದ್ದೇನೆ ಎಂದು ನಟ ಲೂಸ್ ಮಾದ ಯೋಗಿ ಹೇಳಿದ್ದಾರೆ.

yogi

ಮಾಧ್ಯಮಗಳಿಗೆ ಈ ಕುರಿತು ಮಾಹಿತಿ ನೀಡಿದ ಯೋಗಿ, ನನಗೆ ನೋಟಿಸ್ ನೀಡಿದ್ದು, ಆಶ್ಚರ್ಯ ತಂದಿದೆ. ಶನಿವಾರ ನೋಟಿಸ್ ನೀಡಿದ ಬಳಿಕ ತಂದೆಯವರಿಗೆ ಕರೆ ಮಾಡಿ ಮಾಹಿತಿ ನೀಡಿದೆ. ಅವರು ಹೋಗು ಎಂದು ಹೇಳಿದರು. ವಿಚಾರಣೆ ಸಂದರ್ಭದಲ್ಲಿ ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಸರಿಯಾಗಿ ಉತ್ತರಿಸಿದ್ದೇನೆ. ಸುಮಾರು ಎರಡೂವರೆ ಗಂಟೆ ವಿಚಾರಣೆ ನಡೆಸಿದರು ಎಂದರು. ಇದನ್ನೂ ಓದಿ: ಮೊಬೈಲ್ ವಶಕ್ಕೆ ಪಡೆದಿಲ್ಲ, ಯಾವುದೇ ತಪ್ಪು ಮಾಡಿಲ್ಲ: ನಟಿ ರಶ್ಮಿತಾ ಚೆಂಗಪ್ಪ

yogi duniya 15180828097

ಸಂದರ್ಶನವೊಂದರಲ್ಲಿ ನಾನು ಹೇಳಿದ ಒಂದೇ ಒಂದು ಮಾತಿನಿಂದ ನನಗೆ ನೋಟಿಸ್ ನೀಡಿದ್ದಾರೆ ಎನಿಸುತ್ತದೆ. ಮಾಡಬಾರದ ಚಟ ಕಲಿತೆ ಎಂದು ಸಂದರ್ಶನದಲ್ಲಿ ಹೇಳಿದ್ದೆ. ಆ ಮಾತಿನ ಅರ್ಥ ಹೆಚ್ಚು ಕುಡಿತ, ಸಿಗರೇಟ್ ಸೇದುವುದನ್ನು ಮಾಡಿದ್ದೆ ಅಷ್ಟೇ. ಆದರೆ ಈಗ ಎಲ್ಲದರಿಂದ ನಾನು ಮುಕ್ತನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಮಾಲ್ ಇದೆಯಾ? ಡ್ರಗ್ಸ್ ಜಾಲದಲ್ಲಿ ಬಿಟೌನ್ ಪದ್ಮಾವತಿ ದೀಪಿಕಾ

bangari ragini yogi

2011-12ರ ಮುನ್ನ ಪಾರ್ಟಿಗೆ ಹೋಗುತ್ತಿದ್ದೆ. ಆದಾದ ಬಳಿಕ ಯಾವುದೇ ಪಾರ್ಟಿಗೆ ಹೋಗಿಲ್ಲ. ಈ ಬಗ್ಗೆ ಮಾಧ್ಯಮದವರಿಗೆ ನನಗಿಂತೂ ಹೆಚ್ಚು ಸ್ಪಷ್ಟ ಮಾಹಿತಿ ಇದೆ. ವಿಚಾರಣೆ ವೇಳೆ ನನ್ನ ಸಿನಿಮಾ ಹಾಗೂ ನಿತ್ಯ ಚಟುವಟಿಕೆಗಳ ಬಗ್ಗೆ ಪ್ರಶ್ನೆ ಮಾಡಿದ್ದರು. ನಟಿ ರಾಗಿಣಿ ವಿಚಾರದಲ್ಲೂ ನನಗೆ ಯಾವುದೇ ಪ್ರಶ್ನೆ ಕೇಳಿಲ್ಲ. 2013ರ ಸಿನಿಮಾ ಬಳಿಕ ರಾಗಿಣಿ ಅವರೊಂದಿಗೆ ಯಾವುದೇ ಫೋನ್, ಸಂದೇಶ ಬಂದಿಲ್ಲ. ನನಗೂ ಫ್ಯಾಮಿಲಿ ಇದೆ ಎಂದರು. ಇದನ್ನೂ ಓದಿ: ಕಪ್ಪಾಗಿ ಹುಟ್ಟಿದ್ದು ಕರ್ಮನಾ?- ದುನಿಯಾ ವಿಜಿ ಪ್ರಶ್ನೆಗೆ ಜಗ್ಗೇಶ್ ಉತ್ತರ

bangari ragini yogi 2

ನನ್ನ ವಿಚಾರಣೆ ಸಂದರ್ಭದಲ್ಲಿ ದಿಗಂತ್, ರಾಗಿಣಿ ಸೇರಿದಂತೆ ಬೇರೆ ಯಾರ ಬಗ್ಗೆಯೂ ಪ್ರಶ್ನೆ ಕೇಳಿಲ್ಲ. ನನಗೆ ಮಾತ್ರ ಅಲ್ಲದೇ ಸುಮಾರು 15 ರಿಂದ 20 ಜನರಿಗೆ ನೋಟಿಸ್ ನೀಡಲಾಗಿದೆ ಎಂಬ ಮಾಹಿತಿ ಇದೆ. ಆದರೆ ನಾನು ಯಾವುದೇ ಪಾರ್ಟಿಯಲ್ಲಿ ಭಾಗಿಯಾಗಿಲ್ಲ ಎಂಬುದನ್ನು ಅವರಿಗೆ ತಿಳಿಸಿದ್ದೇನೆ. ನಾನು ಎರಡು ಮೊಬೈಲ್ ಫೋನ್ ಬಳಕೆ ಮಾಡುತ್ತೇನೆ. ಎರಡು ನನ್ನ ಬಳಿಕಯೇ ಇದೆ. ಪೊಲೀಸರು ನನ್ನ ಫೋನ್ ವಶಕ್ಕೆ ಪಡೆದಿಲ್ಲ. ಡ್ರಗ್ಸ್ ವಿಚಾರದಲ್ಲಿ ನನ್ನ ಕಣ್ಣೇದುರು ಇದುವರೆಗೂ ಅಂತಹ ಘಟನೆ ನಡೆದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ‘ಬ್ರಹ್ಮಗಂಟು’ ಗೀತಾ, ‘ಗಟ್ಟಿಮೇಳ’ ವಿಕ್ರಾಂತ್ ವಿಚಾರಣೆಗೆ ಹಾಜರ್

loose mada yogesh mother

ಐಪಿಎಲ್ ಆರಂಭದಲ್ಲಿ ಎಲ್ಲರೂ ಕುಳಿತು ಪಂದ್ಯ ವೀಕ್ಷಣೆ ಮಾಡುತ್ತಿದ್ದೆವೂ. ಆ ವೇಳೆ ಸೌಂಡ್ ಜಾಸ್ತಿ ಇದೆ ಎಂದು ನೆರೆಹೊರೆಯವರು ದೂರು ನೀಡಿದ್ದರು. ಆ ವೇಳೆ ಪೊಲೀಸರು ಸೂಚನೆ ನೀಡಿದ್ದರಿಂದ ತಪ್ಪಾಯ್ತು ಅಂತಾ ಹೇಳಿದ್ದೇವು. ಎಲ್ಲವೂ ಅಲ್ಲಿಗೆ ಮುಕ್ತವಾಯ್ತು. ಆದರೆ ಯಾವುದೇ ಪಾರ್ಟಿ ಮಾಡಿ ಸೌಂಡ್ ಮಾಡಿಲ್ಲ ಎಂದರು.

ನನಗೆ ಸಿನಿಮಾ ರಂಗದಲ್ಲಿ ಹೆಚ್ಚು ಸ್ನೇಹಿತರು ಇಲ್ಲ. ಆದ್ದರಿಂದ 2011-12ರ ಬಳಿಕ ಹೊರ ಹೋಗುವುದನ್ನು ಬಿಟ್ಟಿದೆ. ಸದ್ಯ ವಿಚಾರಣೆ ಬಗ್ಗೆ ಯಾವುದೇ ಎದುರಿಸಲು ನನಗೆ ಭಯವಿಲ್ಲ. ಧೈರ್ಯವಾಗಿ ನಾನು ಎಲ್ಲವನ್ನೂ ಎದುರಿಸುತ್ತೇನೆ. ನನ್ನ ಪಾಸ್‍ಪೋರ್ಟ್ 2018ರಲ್ಲೇ ಎಕ್ಸ್ ಪೈರ್ ಆಗಿದೆ. ನಾನು ಶ್ರೀಲಂಕಾದಲ್ಲಿ ರಾಜ್ ಕಪ್ ಆಡಲು ಹೋಗಿದ್ದೆ ಅಷ್ಟೇ. ಆದಾದ ಬಳಿಕ ಎಲ್ಲೂ ಹೋಗಿಲ್ಲ. ಮುಂದಿನ ತಿಂಗಳು 09 ರಿಂದ ನನ್ನ ಹೊಸ ಸಿನಿಮಾ ಶೂಟಿಂಗ್ ಆರಂಭವಾಗುತ್ತಿದೆ. ಚಿತ್ರತಂಡಕ್ಕೂ ಯಾವುದೇ ಸಮಸ್ಯೆ ಇಲ್ಲ ಶೂಟಿಂಗ್ ಆರಂಭ ಮಾಡಬಹುದು ಎಂದು ಹೇಳಿದ್ದೇನೆ. ಮತ್ತೆ ಸಿನಿಮಾ ರಂಗಕ್ಕೆ ಹಿಂದಿರುತ್ತೇನೆ. ಉತ್ತಮ ಸಿನಿಮಾದೊಂದಿಗೆ ಪ್ರೇಕ್ಷಕರ ಎದುರು ಬರುತ್ತೇನೆ. ಕನ್ನಡ ಸಿನಿಮಾ ರಂಗದಲ್ಲಿ ಇಂತಹ ಘಟನೆ ನಡೆಯಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *