ದೊಡ್ಮನೆಯ ಭಯಾನಕ ಸತ್ಯ ಬಿಚ್ಚಿಟ್ಟ ರಾಜೀವ್..!

Public TV
1 Min Read
RAJEEV 1 2

ಬಿಗ್ ಬಾಸ್ ಮನೆಯಲ್ಲಿ ನಡೆದ ಭಯಾನಕ ಸತ್ಯವೊಂದನ್ನು ಸ್ಪರ್ಧಿಗಳ ಮುಂದೆ ರಾಜೀವ್ ಬಿಚ್ಚಿಟ್ಟು ಅಚ್ಚರಿಗೊಳಪಡಿಸಿದ್ದಾರೆ. ಇದ್ದಕ್ಕಿದ್ದಂತೆಯೇ ಕರೆಂಟ್ ಹೋದಾಗ ನಡೆದ ಘಟನೆ ವಿವರಿಸಿರುವ ರಾಜೀವ್, ಕೊನೆಗೆ ನಿಜಾಂಶವನ್ನು ಹೇಳುವ ಮೂಲಕ ಸ್ಪರ್ಧಿಗಳು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

RAJEEV 4 medium

ಹೌದು. ಮನೆಯವರೆಲ್ಲರೂ ಗಾರ್ಡನ್ ಏರಿಯಾದಲ್ಲಿ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ಶುಭಾ ಪೂಂಜಾ ಅವರು ಕನಸಿನ ಬಗ್ಗೆ ಮಾತನಾಡುತ್ತಾ, ನಮ್ಮ ಕನಸಲ್ಲಿ ನಾವೇ ಬರುತ್ತಿದ್ದೇವೆ ಅಂತ ಮಾತಿಗಿಳಿದ್ರು. ಶುಭಾ ಮಾತು ಕೇಳಿಸಿಕೊಂಡ ರಾಜೀವ್ ಮನೆಯಲ್ಲಿ ನಡೆದ ನೈಜ ಘಟನೆಯನ್ನು ವಿವರಿಸಲು ಮುಂದಾದ್ರು.

RAJEEV 5 medium

ನಾನು ದಿವ್ಯ, ವಿಶ್ವ ಕೂತ್ಕೊಂಡಿದ್ದೀವಿ. ಆಗ ಏಕಾಏಕಿಯಾಗಿ ಲೈಟ್ ಆಫ್ ಆಯ್ತು. ಟಕ್ ಅಂತ ಶಬ್ದ ಬಂತು. ಇತ್ತ ವಿಶ್ವ ಅಣ್ಣಾ.. ಅಂದ. ನೋಡಿದಾಗ ಕುಕ್ಕರ್ ಮುಚ್ಚಳ ನಿಂತಿತ್ತು. ಲೈಟ್ ಆಫ್ ಆಗ್ತಿದ್ದಂತೆ ಅದು ಮಲಕ್ಕೊಂತು ಅಂತ ರಾಜೀವ್ ತನ್ನದೇ ಶೈಲಿಯಲ್ಲಿ ವಿವರಿಸಿದರು.

RAJEEV 3 medium

ರಾಜೀವ್ ವಿವರಣೆ ನೀಡುತ್ತಿದ್ದಂತೆಯೇ ಮೊದಲು ಇವರೇನೋ ಜೋಕ್ ಮಾಡ್ತಿದ್ದಾರೆ ಅಂತ ಅಂದುಕೊಂಡ ಮನೆ ಮಂದಿ, ಪೂರ್ತಿ ಸ್ಟೋರಿ ಕೇಳಿದ ಬಳಿಕ ಒಂದು ಬಾರಿ ದಂಗಾದ್ರು. ಅಲ್ಲದೆ ಆತಂಕಗೊಂಡು ಭಯಭೀತರಾದರು. ಈ ವೇಳೆ ವಿಶ್ವ ಅಣ್ಣಾ ಎಲ್ಲೋ ನೀರು ಜಾರಿಕೊಂಡರಬೇಕು ಅಂತ ಹೇಳಿದ. ಆಗ ನಾನು ಇರಬಹುದು ಕಣೋ ಆದರೆ ನಿಂತಿರೋ ಕುಕ್ಕರ್ ಹಿಂಗೆ ಮಲಕ್ಕೊಂಡಿರೋಕೆ ಸಾಧ್ಯ ಇಲ್ಲ ಅಂದೆ.

RAJEEV 2 medium

ರಾಜೀವ್ ಕಥೆ ಕೇಳಿಸಿಕೊಂಡ ಬಳಿಕ ಶುಭಾ, ಏನಿದೆ ಈ ಮನೆಯಲ್ಲಿ ಅಂತ ಕೇಳಿದರು. ಅಲ್ಲದೆ ಮನೆಯಲ್ಲಿ ದೆವ್ವದ ಕಾಟ ಇದೆಯೋ ಅಂತ ಭಾವಿಸಿದರು. ಈ ವೇಳೆ ನಿಧಿ ಪ್ರಶ್ನೆಯೊಂದನ್ನು ಕೇಳಿದರು. ಆಗ ರಾಜೀವ್, ಕುಕ್ಕರ್ ತೊಳೆದುಬಿಟ್ಟು ಒರೆಸಿ ಇಟ್ಟಿರ್ತಿ ಅಲ್ವ ಅಂತ ಮತ್ತೆ ವಿವರಣೆ ನೀಡಲು ಮುಂದಾದ್ರು. ಆಗ ಶುಭಾ ಹಂಗಂದ್ರೆ ಅದು ಜಾರಿ ಬಿದ್ದಿರತ್ತೆ ಅಷ್ಟೆ ಅಂದ್ರು. ಆಗ ರಾಜೀವ್ ಹೌದು ಜಾರಿನೇ ಬಿದ್ದಿರೋದು ಅಂದ್ರೆ, ಇತ್ತ ಅರವಿಂದ್ ನೀವು ಹೇಳಿದ್ದು ಸರಿ ಅಂತ ಹೇಳಿದ್ರು. ಸತ್ಯ ಗೊತ್ತಾದಾಗ ಎಲ್ಲರೂ ನಿಟ್ಟುಸಿರು ಬಿಟ್ಟು ನಕ್ಕರು.

Share This Article
Leave a Comment

Leave a Reply

Your email address will not be published. Required fields are marked *