ಮುಂಬೈ: ದೆಹಲಿಯ ಗಡಿಭಾಗದಲ್ಲಿ ರೈತರು ನಡೆಸುತ್ತಿರುವ ಅಂದೋಲನ ದೇಶದ ಪ್ರತಿಭಾಗಕ್ಕೂ ವಿಸ್ತರಣೆ ಆಗಬೇಕು. ಹಾಗಾದ್ರೆ ಮಾತ್ರ ಸರ್ಕಾರದ ಮೇಲೆ ಒತ್ತಡ ಬೀಳುತ್ತೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ. ರೈತರ ಹೋರಾಟಕ್ಕೆ ಬೆಂಬಲ ನೀಡಿರುವ ಅಣ್ಣಾ ಹಜಾರೆ ಒಂದು ದಿನದ ಉಪವಾಸ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
- Advertisement 2
ಕಳೆದ 10 ದಿನಗಳಿಂದ ದೆಹಲಿ ಗಡಿಭಾಗದಲ್ಲಿ ಚಳಿಯನ್ನ ಲೆಕ್ಕಿಸದೇ ರೈತರು ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಆಂದೋಲನ ದೇಶವ್ಯಾಪಿ ವಿಸ್ತರಣೆ ಆಗಬೇಕು. ಸರ್ಕಾರದ ಒತ್ತಡ ಹೇರಲು ದೇಶದ ಎಲ್ಲ ರೈತರು ರಸ್ತೆಗಿಳಿದಾಗ ಮಾತ್ರ ಗುರಿ ತಲುಪಲು ಸಾಧ್ಯವಾಗುತ್ತೆ. ಹಾಗಾಗಿ ಈ ಆಂದೋಲನದಲ್ಲಿ ದೇಶದ ಜನತೆ ಭಾಗಿಯಾಗಬೇಕು ಎಂದು ಅಣ್ಣಾ ಹಜಾರೆ ಮನವಿ ಮಾಡಿಕೊಂಡಿದ್ದಾರೆ.
- Advertisement 3
- Advertisement 4
ಈ ಹೋರಾಟದಲ್ಲಿ ಯಾರು ಅಹಿಂಸ ಮಾರ್ಗದತ್ತ ಹೆಜ್ಜೆ ಹಾಕಬಾರದು ಎಂಬುವುದು ನನ್ನ ಮನವಿ. ಕೃಷಿ ವಲಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇದುವೇ ಸೂಕ್ತ ಸಮಯ. ಈ ಮೊದಲು ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದು, ಮುಂದಿನ ದಿನಗಳಲ್ಲಿಯೂ ಅವರ ಜೊತೆಯಲ್ಲಿರುತ್ತೇನೆ. ಕೇಂದ್ರ ಸರ್ಕಾರ ರೈತರಿಗೆ ಆಶ್ವಾಸನೆ ನೀಡುವ ಬದಲು ಸಮಸ್ಯೆಗಳ ಪರಿಹರಿಸಲು ಮುಂದಾಗಬೇಕೆಂದು ಅಣ್ಣಾ ಹಜಾರೆ ಆಗ್ರಹಿಸಿದ್ದಾರೆ.