Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ದುಬೈ ಅನಿವಾಸಿ ಕನ್ನಡಿಗರ ಪರಿಶ್ರಮ – ಉತ್ತರ ಪ್ರದೇಶದ ಪ್ರಸಾದ್ ತಾಯ್ನಾಡಿಗೆ

Public TV
Last updated: April 8, 2021 3:55 pm
Public TV
Share
2 Min Read
dubai kannadigas nri 1
SHARE

ದುಬೈ: ಯುಎಇಯಲ್ಲಿ ಸಂಕಷ್ಟದಲ್ಲಿದ್ದ ಉತ್ತರ ಪ್ರದೇಶದ ಗೋರಕ್ ಪುರದ ನಿವಾಸಿ ಚಂಗೂರ್ ಪ್ರಸಾದ್ ನನ್ನು ಭಾರತೀಯ ರಾಯಭಾರಿ ಕಚೇರಿ ಸಹಕಾರದಿಂದ ಸುರಕ್ಷಿತವಾಗಿ ತಾಯ್ನಾಡಿಗೆ ತಲುಪಿಸುವಲ್ಲಿ ಕನ್ನಡಿಗಾಸ್ ಫೆಡರೇಷನ್ ಮತ್ತು ಏಮ್ ಇಂಡಿಯಾ ಫೌಂಡೇಶನ್ ಯಶಸ್ವಿಯಾಗಿದೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅಂತಾರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ಸಂಚಾಲಕ ಹಿದಾಯತ್ ಅಡ್ಡೂರ್, ‘ದುಬೈನಲ್ಲಿ ಉದ್ಯೋಗ ಸಿಗುವುದಾಗಿ ಏಜೆಂಟ್ ನನ್ನು ನಂಬಿಕೊಂಡು ಬಂದು ಮೋಸ ಹೋದ ಬಡ ಕಾರ್ಮಿಕ, ಅನಕ್ಷರಸ್ಥ ಚಂಗೂರ್ ಪ್ರಸಾದ್ ತಿನ್ನಲು ಆಹಾರವಿಲ್ಲದೆ ದಿಕ್ಕು ತೋಚದೇ ತಿರುಗಾಡುತ್ತಿದ್ದಾಗ ಹಠಾತ್ತಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಿಸಲ್ಪಟ್ಟನು. ಅಲ್ಲಿ ಪರೀಕ್ಷಿಸಿದಾಗ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದಾನೆಂದು ತಿಳಿದು ಬಂತು.

ಆಸ್ಪತ್ರೆಯಲ್ಲಿ ದಾಖಲಾಗಿರುವ ವಿಷಯ ತಿಳಿದು ಭೇಟಿ ನೀಡಿದ ಏಮ್ ಇಂಡಿಯಾ ಫೌಂಡೇಶನ್ ನ ಶೇಕ್ ಮುಝಫ್ಫರ್, ಚಂಗೂರ್ ಪ್ರಸಾದ್ ಗೆ ಧೈರ್ಯ ತುಂಬಿ, ನನ್ನನ್ನು ಸಂಪರ್ಕಿಸಿದರು. ನಾವು ಚಂಗೂರ್ ಪ್ರಸಾದ್ ನಿಗೆ ಪ್ರಥಮ ಹಂತದಲ್ಲಿ ಬೇಕಾದ ಚಿಕಿತ್ಸೆಯನ್ನು ಶಾರ್ಜಾ ಖಾಸ್ಮಿಯಾ ಆಸ್ಪತ್ರೆಯಲ್ಲಿ ನೀಡಿ, ವೈದ್ಯರ ಸಲಹೆಯಂತೆ ಡಿಸ್ಚಾರ್ಜ್ ಮಾಡಿದೆವು. ಆಸ್ಪತ್ರೆಯಲ್ಲಿ ಇನ್ಶುರೆನ್ಸ್ ಮೂಲಕ ಸ್ವಲ್ಪ ರಿಯಾಯಿತಿ ಸಿಕ್ಕಿದರೂ 1ಲಕ್ಷ? ನಾವು ಪಾವತಿಸಿದೆವು. ಚಂಗೂರ್ ಪ್ರಸಾದನನ್ನು ಸುರಕ್ಷಿತವಾಗಿ ಊರಿಗೆ ಕಳುಹಿಸಲು ಸಹಪ್ರಯಾಣಿಕ ಬೇಕಾದ ಕಾರಣ ಆತನ ಮನೆಯವರನ್ನು ಸಂಪರ್ಕಿಸಿ, ಆತನ ಅಳಿಯನನ್ನು ದುಬೈಗೆ ಕರೆಸಿಕೊಂಡೆವು.

dubai kannadigas nri 2

ಚಂಗೂರ್ ಪ್ರಸಾದ್ ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಪಾಸ್ಪೋರ್ಟ್ ಕಳೆದುಕೊಂಡಿದ್ದ ಕಾರಣ, ಭಾರತಕ್ಕೆ ಕಳುಹಿಸಲು ಹೊಸದಾಗಿ ‘ವೈಟ್ ಪಾಸ್ಪೋರ್ಟ್’ ಎಮರ್ಜೆನ್ಸಿ ಸರ್ಟಿಫಿಕೇಟ್ ತಯಾರಾಗುವ ವರೆಗೂ ತಂಗಲು ಉತ್ತಮ ವಾತಾವರಣದ ಆವಶ್ಯಕತೆ ಇದ್ದ ಕಾರಣ, ಫಾರ್ಚೂನ್ ಗ್ರೂಪ್ ಆಫ್ ಹೋಟೇಲ್ಸ್ ನ ಛೇರ್ಮನ್ ಹಾಗೂ ಕೆಎನ್‍ಆರೈ ಯುಎಇ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ತಕ್ಷಣವೇ ಸ್ಪಂದಿಸಿ, ‘ಎಲ್ಲಾ ಪೇಪರ್ ವರ್ಕ್ ಆಗುವ ವರೆಗೆ ನಮ್ಮ ಹೋಟೆಲ್ ನಲ್ಲಿಯೇ ತಂಗಲು ವ್ಯವಸ್ಥೆ, ಊಟ ತಿಂಡಿಯ ವ್ಯವಸ್ಥೆ ನಾನು ಮಾಡುವೆ’ ಎಂದು ಜವಾಬ್ದಾರಿ ಹೊತ್ತು 12 ದಿನ ನೆರವಾದರು.

ಎಮರ್ಜೆನ್ಸಿ ಸರ್ಟಿಫಿಕೇಟ್ ಮಾಡಲು ಹಲವು ಅಡಚಣೆಗಳು ಬಂದಾಗ ನೆರವಿಗೆ ಬಂದ ದುಬೈನ ಭಾರತೀಯ ರಾಯಭಾರಿ ಕಚೇರಿಯ ಕೌನ್ಸಲ್ ಜಿತೇಂದ್ರ ಸಿಂಗ್ ನೇಗಿ ಎಲ್ಲವನ್ನೂ ಸುಸೂತ್ರವಾಗಿ ನಿವಾರಿಸಿದರು ಮತ್ತು ಸಾಮಾಜಿಕ ಕಾರ್ಯಕರ್ತ ಗಿರೀಶ್ ಪಂಥ್ ಸಹಕರಿಸಿದರು. ಪೊಲೀಸ್ ರಿಪೋರ್ಟ್, ಇಮಿಗ್ರೇಷನ್ ಕೆಲಸವನ್ನು ಮುಝಫ್ಫರ್ ಮತ್ತು ಇಮ್ರಾನ್ ಎರ್ಮಾಳ್ ಪೂರ್ಣಗೊಳಿಸಿದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದಿನದಿಂದ ಭಾರತದಲ್ಲಿ ಹೆಚ್ಚಿನ ಶಸ್ತ್ರಚಿಕಿತ್ಸೆ ಪಡೆಯುವ ವರೆಗೂ ದೈನಂದಿನವಾಗಿ ಬೇಕಾದ ದುಬಾರಿ ಔಷಧ ಹಾಗೂ ತಾಯ್ನಾಡಿಗೆ ತಲುಪಿಸಲು ಬೇಕಾದ ಎಲ್ಲಾ ವ್ಯವಸ್ಥೆಗೆ ಸುಮಾರು 2.5 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ ನಮ್ಮ ತಂಡ ಕೊನೆಗೂ ದುಬೈನಿಂದ ಉತ್ತರ ಪ್ರದೇಶದ ಲಕ್ನೋಗೆ ತಲುಪಿ ಅಲ್ಲಿಂದ ಗೋರಕ್’ಪುರದ ಆತನ ಕುಟುಂಬದ ಮನೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.

ಪಾಸ್ಪೋರ್ಟ್ ಕಳೆದುಕೊಂಡು, ಹಣವೂ ಇಲ್ಲದೇ, ಭಾರತಕ್ಕೆ ಮರಳುವ ಆಸೆಯನ್ನೇ ಕೈಬಿಟ್ಟು ಆಸ್ಪತ್ರೆಯಲ್ಲಿ ಏಕಾಂಗಿಯಾಗಿ ಮಲಗಿದ್ದ ಚಂಗೂರ್ ಪ್ರಸಾದ್ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡು ತಾಯ್ನಾಡಿಗೆ ತಲುಪಿ ತನ್ನ ಪತ್ನಿ ಮಕ್ಕಳೊಂದಿಗೆ ನಗುತ್ತಾ ಸಂತಸದಿಂದಿರುವ ಪೋಟೋ ಕಳುಹಿಸಿದ್ದಾನೆ. ಅವನ ಮುಂದಿನ ಚಿಕಿತ್ಸೆ ಕುರಿತು ಉತ್ತರ ಪ್ರದೇಶದ ಆಸ್ಪತ್ರೆಯಲ್ಲೂ ನಾವು ಮಾತುಕತೆ ನಡೆಸುತ್ತಿದ್ದೇವೆ.’ ಎಂದು ಹಿದಾಯತ್ ಅಡ್ಡೂರ್ ಮಾಹಿತಿ ನೀಡಿದರು.

TAGGED:dubaikannadauaeuttar pradeshಅನಿವಾಸಿ ಕನ್ನಡಿಗರುಉತ್ತರ ಪ್ರದೇಶದುಬೈಭಾರತಲಕ್ನೋ
Share This Article
Facebook Whatsapp Whatsapp Telegram

You Might Also Like

Saroja devi
Cinema

ಕೋವಿಡ್ ವೇಳೆ 2 ಲಕ್ಷ ಕೊಟ್ಟು ಯಾರಿಗಾದ್ರೂ ಸಹಾಯ ಮಾಡು ಅಂತ ಹೇಳಿದ್ರು – ಸಾಧು ಕೋಕಿಲಾ

Public TV
By Public TV
33 seconds ago
Kalaburagi Theft
Crime

ಕಲಬುರಗಿ ಚಿನ್ನದಂಗಡಿ ದರೋಡೆ ಕೇಸ್; ಖದೀಮರ ಸುಳಿವು ಪತ್ತೆ – ಇಬ್ಬರು ಅಂದರ್

Public TV
By Public TV
3 minutes ago
Lingaraj Kanni Priyank Kharge 1
Districts

ಪ್ರಿಯಾಂಕ್‌ ಖರ್ಗೆ ಆಪ್ತನ ಮೇಲೆ ಮಾದಕದ್ರವ್ಯ ಮಾರಾಟ ಆರೋಪ – ಬಂಧನದ ಬೆನ್ನಲ್ಲೇ ಪಕ್ಷದಿಂದ ಉಚ್ಛಾಟನೆ

Public TV
By Public TV
6 minutes ago
PM Modi 1
Cinema

ಸರೋಜಾದೇವಿಯವ್ರು ತಲೆಮಾರುಗಳಲ್ಲಿ ಅಳಿಸಲಾಗದ ಗುರುತು ಬಿಟ್ಟು ಹೋಗಿದ್ದಾರೆ: ಮೋದಿ ಸಂತಾಪ

Public TV
By Public TV
7 minutes ago
supreme Court 1
Court

ಡಿವೋರ್ಸ್‌ ಕೇಸ್‌| ಸಂಗಾತಿ ರೆಕಾರ್ಡ್ ಮಾಡಿದ ಕರೆಯನ್ನು ಸಾಕ್ಷಿಯಾಗಿ ಪರಿಗಣಿಸಬಹುದು – ಸುಪ್ರೀಂ

Public TV
By Public TV
9 minutes ago
Rajanikanth
Cinema

ಸಿನಿಮಾದ ಸುವರ್ಣ ಯುಗವೊಂದು ಅಂತ್ಯವಾಗಿದೆ – ಸರೋಜಾದೇವಿ ನಿಧನಕ್ಕೆ ಕಂಬನಿ ಮಿಡಿದ ರಜನಿಕಾಂತ್‌, ಖುಷ್ಬು

Public TV
By Public TV
21 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?