ದರ್ಶನ್ ಬರೋದನ್ನ ನಾನು ಕಾತುರದಿಂದ ಕಾಯುತ್ತಿದ್ದೇನೆ: ಮುನಿರತ್ನ

Public TV
1 Min Read
Munirathna

ಬೆಂಗಳೂರು: ಆರ್.ಆರ್.ನಗರದಲ್ಲಿ ಇಂದು ನಟ ದರ್ಶನ್ ಅವರೊಂದಿಗೆ ಇಡೀ ದಿನ ಪ್ರಚಾರ ಮಾಡುತ್ತೇವೆ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ತಿಳಿಸಿದ್ದಾರೆ.

ಇಂದಿನ ಪ್ರಚಾರದ ಕುರಿತು ಮಾತನಾಡಿದ ಮುನಿರತ್ನ ಅವರು, ಮೊದಲು ರಾಜರಾಜೇಶ್ವರಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸುತ್ತೇನೆ. ಬಳಿಕ ನಾನು ದರ್ಶನ್ ಮನೆಗೆ ತೆರಳಿ ಒಟ್ಟಿಗೆ ಪ್ರಚಾರಕ್ಕೆ ಹೊರಡುತ್ತೇವೆ. ದರ್ಶನ್ ಕ್ರೇಜ್ ಎಷ್ಟಿದೆ ಅಂತ ಎಲ್ಲರಿಗೂ ಗೊತ್ತು. ಹಿಂದೆ ದರ್ಶನ್, ಯಶ್, ಸುದೀಪ್, ರಮ್ಯಾ ಎಲ್ಲರೂ ನನ್ನ ಪರ ಪ್ರಚಾರ ಮಾಡಿದ್ದರು. ನಾನು ಸಿನಿಮಾದವನು ಆಗಿರುವುದರಿಂದ ಅವ್ರೆಲ್ಲ ಬಂದು ಪ್ರಚಾರ ಮಾಡಿದ್ದರು ಎಂದರು.

darshan

ಇದೇ ವೇಳೆ ಪ್ರಚಾರದಲ್ಲಿ ಸಚಿವ ಬಿಸಿ ಪಾಟೀಲ್, ಅಮೂಲ್ಯ ಪ್ರಚಾರಕ್ಕೆ ಬರುತ್ತಾರೆ ಎಂದು ತಿಳಿಸಿದ ಮುನಿರತ್ನ ಅವರು, ದರ್ಶನ್ ಬರೋದನ್ನ ನಾನು ಕಾತುರದಿಂದ ಕಾಯುತ್ತಿದ್ದೇನೆ ಎಂದರು. ಬೆಳಗ್ಗೆ 10.30 ರಿಂದ ಸಂಜೆಯ ವರೆಗೂ ದರ್ಶನ್ ನಮ್ಮೊಂದಿಗೆ ಇರುತ್ತಾರೆ. ಈ ಬಗ್ಗೆ ನಾನು ಹೇಳುವುದಕ್ಕಿಂತ ನೀವೇ ನೋಡುತ್ತೀರಿ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *