ದಂಪತಿಯನ್ನು ಕಾಪಾಡಲು ಬಂದು ಪ್ರಾಣ ಬಿಟ್ಟ ನೆರೆಮನೆಯವ

Public TV
1 Min Read
POWER

ತಿರುವನಂತಪುರಂ: ವಿದ್ಯುತ್ ಅವಘಡದಿಂದ ದಂಪತಿಯನ್ನು ಪಾರು ಮಾಡಲು ಬಂದ ಪಕ್ಕದ ಮನೆಯಾತನನ್ನು ಸೇರಿಸಿ ಮೂವರೂ ಸಾವನ್ನಪ್ಪಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯ ಪ್ರಕ್ಕುಲಂನಲ್ಲಿ ನಡೆದಿದೆ.

MNG POWER

ಸಂತೋಷ್ (45), ಪತ್ನಿ ರಾಮ್‍ಲತಾ (42) ಮತ್ತು ಇವರ ನೆರಮನೆಯ ಶ್ಯಾಮ್ ಕುಮಾರ್(35) ಮೃತರಗಿದ್ದಾರೆ. ನಿನ್ನೆ ರಾತ್ರಿ ಈ ದಂಪತಿಯ ಮನೆಯಲ್ಲಿ ವಿದ್ಯುತ್ ಅವಘಡ ಸಂಭವಿಸಿದೆ ಈ ಧ್ವನಿಯನ್ನು ಕೇಳಿ ಕಾಪಾಡಲು ಬಂದ ನೆರೆ ಮನೆಯವನನ್ನು ಸೇರಿಸಿ ಮೂವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ನಾವಿಬ್ಬರೂ ಬ್ಯಾಡ್ಮಿಂಟನ್ ಆಡ್ತಾ ಇದ್ವಿ, ತುಂಬಾ ದುಃಖವಾಗ್ತಿದೆ- ಪ್ರಜ್ವಲ್ ಸಂತಾಪ

POWER

ಬಾತ್‍ರೂಂನಿಂದ ಹೊರಬರಬೇಕಿದ್ದರೆ ರಾಮಲತಾ ಆಯತಪ್ಪಿ ಕೆಳಗೆ ಬಿದ್ದಿದ್ದರು. ನಂತರ ಎದ್ದುನಿಲ್ಲಲು ಪ್ರಯತ್ನಿಸಿದ ಅವರು, ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ಹಿಡಿದಿದ್ದಾರೆ. ಕೂಡಲೇ ಪತ್ನಿಯನ್ನು ಕಾಪಾಡಲು ಹೋದ ಸಂತೋಷ್‍ಗೆ ಕೂಡ ವಿದ್ಯುತ್ ತಗುಲಿದೆ. ಈ ದಂಪತಿಯ ಚೀರಾಟ ಕೇಳಿ ಓಡಿ ಬಂದ ಶ್ಯಾಮ್‍ಕುಮಾರ್ ದಂಪತಿಯನ್ನು ಕಾಪಾಡಲು ಮುಂದಾದರು. ಆದರೆ ದುರದೃಷ್ಟಕ್ಕೆ ಅವರೂ ಸಹ ಶಾಕ್‍ಗೆ ಒಳಗಾಗಿದ್ದಾರೆ. ಈ ವೇಳೆ ಮೂವರೂ ಮೃತಪಟ್ಟಿದ್ದಾರೆ.

Police Jeep

ಈ ದಂಪತಿಗೆ ಪುಟ್ಟ ಮಕ್ಕಳಿದ್ದು, ನೆರೆಮನೆಯ ಶ್ಯಾಮ್​ಕುಮಾರ್​ಗೆ ಪತ್ನಿ, ಮಕ್ಕಳಿದ್ದಾರೆ. ಈ ಮೂವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಂಚಲುಮಮ್ಮೂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *