ಗುರುಗಳಲ್ಲಿ ಭಗವಂತನನ್ನು ಕಾಣುತ್ತೇವೆ, ಅವರು ಸೇವಿಸಿದ ಆಹಾರ ನಮಗೆ ಪ್ರಸಾದ – ರಘು ಆಚಾರ್‌ಗೆ ಶರವಣ ಟಾಂಗ್

Public TV
2 Min Read
SARAVANA

ಬೆಂಗಳೂರು: ಗುರುಗಳಲ್ಲಿ ನಾವು ಭಗವಂತನನ್ನು ಕಾಣುವುದರಿಂದ ಅವರು ಸೇವಿಸಿದ ಆಹಾರ ಪ್ರಸಾದವೆಂದು ಭಾವಿಸುತ್ತೇವೆ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಅವರು ಅವಧೂತ ವಿನಯ್ ಗುರೂಜಿ ವಿರುದ್ಧ ಆರೋಪಿಸಿದ್ದ ರಘು ಆಚಾರ್‌ಗೆ  ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಪ್ರಸಾದವೆಂದು ಬಲವಂತವಾಗಿ ಎಂಜಲು ತಿನ್ನಿಸಿದರು: ವಿನಯ್ ಗುರೂಜಿ ಮೇಲೆ ಕೈ ನಾಯಕ ಗರಂ

ಅವಧೂತ ವಿನಯ್ ಗುರೂಜಿ ಪ್ರಸಾದ ಎಂದು ವಿತರಿಸಿ ಬಲವಂತವಾಗಿ ಎಂಜಲು ತಿನ್ನುವಂತೆ ಮಾಡಿದರು ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಆರೋಪಿಸಿದ್ದರು. ಈ ಬಗ್ಗೆ ಮಾಜಿ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ರಘು ಆಚಾರ್‌ಗೆ ಟಾಂಗ್ ನೀಡಿದ್ದಾರೆ.

Vinay Guruji Raghu Achar medium

ಪೋಸ್ಟ್‌ನಲ್ಲಿ ಏನಿದೆ?
ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರಾದ ಶ್ರೀ ರಘು ಆಚಾರ್ ಅವರ ಹೇಳಿಕೆ ನನ್ನ ಗಮನಕ್ಕೆ ಬಂದಿದೆ. ಅವಧೂತ ವಿನಯ್ ಗುರೂಜಿಯವರ ಅಪಾರ ಶಿಷ್ಯವೃಂದದಲ್ಲಿ ನಾನು ಒಬ್ಬ ಭಕ್ತ. ಮೊದಲನೆಯದಾಗಿ ಧಾರ್ಮಿಕ ನಂಬಿಕೆಗಳು ಜನರ ವೈಯಕ್ತಿಕ ವಿಚಾರಕ್ಕೆ ಮತ್ತು ಅವರವರ ಭಾವನೆಗೆ ಒಳಪಟ್ಟಿರುತ್ತದೆ. ಗುರುಗಳಲ್ಲಿ ನಾವು ಭಗವಂತನನ್ನು ಕಾಣುವುದರಿಂದ ಅವರು ಸೇವಿಸಿದ ಆಹಾರ ಪ್ರಸಾದವೆಂದು ಭಾವಿಸುತ್ತೇವೆ. ಗುರುಗಳು ಯಾರಿಗೂ ಕೂಡ ಸೇವಿಸಲು ಒತ್ತಾಯ ಮಾಡಿಲ್ಲ ಹಾಗೂ ನಿಮಗೂ ಕೂಡ ಬಲವಂತವಾಗಿ ತಿಳಿಸಿಲ್ಲ.

saravana 2 medium

ನಂಬಿಕೆ ಇರುವವರು ಅದನ್ನು ಪ್ರಸಾದವೆಂದು ಸ್ವೀಕರಿಸುತ್ತಾರೆ. ನೀವು ಕೇವಲ ಪ್ರಚಾರಕ್ಕಾಗಿ ವ್ಯಕ್ತಿಯ ನಂಬಿಕೆಯ ವಿಚಾರವನ್ನು ಬಹಿರಂಗವಾಗಿ ಚರ್ಚಿಸುವುದು ಸರಿಯಲ್ಲ. ಇನ್ನು ನಮ್ಮ ಆರೋಗ್ಯದ ಬಗ್ಗೆ ಖಂಡಿತವಾಗಿ ಕಾಳಜಿ ಬೇಡ, ಗುರುಗಳು ಆರೋಗ್ಯದಿಂದ ಇದ್ದಾರೆ. ಹಾಗಾಗಿ ನಮಗೇನೂ ತೊಂದರೆ ಇಲ್ಲ. ನಮ್ಮ ಆಚಾರ-ವಿಚಾರಗಳ ಬಗ್ಗೆ, ನಂಬಿಕೆಗಳ ಬಗ್ಗೆ, ಕೆಲವರು ಓಲೈಕೆಗಾಗಿ ಕೆಟ್ಟದಾಗಿ ದೊಡ್ಡದಾಗಿ ಬಿಂಬಿಸಲಾಗುತ್ತಿದೆ. ಹಾಗಾಗಿ ಇಂತಹ ವಿಚಾರಗಳನ್ನು ಪ್ರಚಾರಕ್ಕಾಗಿ ಈ ತರಹದ ಮಾತುಗಳನ್ನು ನಿಲ್ಲಿಸಿ.

tasharavana 1566541479 medium

ನಿಮಗೇನಾದರೂ ವಿನಯ್ ಗುರೂಜಿ ರವರ ಬಗ್ಗೆ ಮಾಹಿತಿ ಗೊತ್ತಿಲ್ಲ ಎಂದರೆ ನಿಮ್ಮ ಪಕ್ಷದ ಅಧ್ಯಕ್ಷರು ಮತ್ತು ಹಿರಿಯ ನಾಯಕರನ್ನು ಕೇಳಿ ತಿಳಿದು ಮಾತನಾಡಿ. ನೀವು ಗುರುಗಳ ಬಗ್ಗೆ ಇತರ ಹಗುರವಾಗಿ ಮಾತನಾಡಿರುವುದು ನನ್ನ ಮನಸ್ಸಿಗೆ ನೋವಾಗಿದೆ. ಇದು ನಿಮ್ಮ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಅವರು ರಘು ಆಚಾರ್ ಖಾರವಾದ ಪದಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

hsn vinay guruji 4 medium

Share This Article
Leave a Comment

Leave a Reply

Your email address will not be published. Required fields are marked *