ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ರಾಜೀನಾಮೆ

Public TV
1 Min Read
Harsimrat Kaur Badal a

– ಎನ್‍ಡಿಎ ಮೈತ್ರಿಕೂಟಕ್ಕೆ ಶಿರೋಮಣಿ ಅಕಾಲಿದಳ ಬಿಗ್ ಶಾಕ್

ನವದೆಹಲಿ: ಎನ್‍ಡಿಎ ಮೈತ್ರಿಕೂಟಕ್ಕೆ ಅಂಗ ಪಕ್ಷ ಶಿರೋಮಣಿ ಅಕಾಲಿದಳ ಬಿಗ್ ಶಾಕ್ ನೀಡಿದೆ. ಬಿಜೆಪಿ ರೈತ ವಿರೋಧಿ ರಾಜಕೀಯದಲ್ಲಿ ತೊಡಗಿದೆ ಎಂದು ಆರೋಪಿಸಿ ಕೇಂದ್ರ ಸಚಿವ ಸ್ಥಾನಕ್ಕೆ ಹರ್ಸಿಮ್ರತ್ ಕೌರ್ ಬಾದಲ್ ರಾಜೀನಾಮೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿರುವ ಕೌರ್, ರೈತ ವಿರೋಧಿ ಸುಗ್ರೀವಾಜ್ಞೆ ಮತ್ತು ಬಿಲ್ಲನ್ನು ವಿರೋಧಿಸಿ ನಾನು ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಿದ್ದೇನೆ. ರೈತರೊಂದಿಗೆ ಅವರ ಮಗಳಗಾಗಿ, ಸಹೋದರಿಯಾಗಿ ನಿಲ್ಲುವುದಕ್ಕೆ ಹೆಮ್ಮೆ ಇದೆ ಎಂದಿದ್ದಾರೆ.

ರೈತರು ಮತ್ತು ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿದ ಅಗತ್ಯ ವಸ್ತುಗಳ ತಿದ್ದುಪಡಿ ಬಿಲ್ಲನ್ನು ಲೋಕಸಭೆಯಲ್ಲಿ ಮಂಡಿಸಿದ ಬೆನ್ನಲ್ಲೇ ಕೌರ್ ರಾಜೀನಾಮೆ ನೀಡಿದ್ದು, ವೋಟಿಂಗ್‍ಗೆ ಮುಂಚೆ ಕೇಂದ್ರ ಸರ್ಕಾರ ಮುಜುಗರ ಅನುಭವಿಸಿತು. ಈ ಬಿಲ್‍ಗೆ ವಿರುದ್ಧವಾಗಿ ಅಕಾಲಿದಳ ಮತ ಹಾಕಿತ್ತು.

ಸಂಸತ್‍ನಲ್ಲಿ ಮಾತನಾಡಿದ ಕೌರ್ ಪತಿ ಸುಖ್‍ಬೀರ್ ಸಿಂಗ್ ಬಾದಲ್, ಈ ಮಸೂದೆ ನಮ್ಮ ವಿರೋಧವಿದೆ. ರೈತ ವಿರೋಧಿ ರಾಜಕೀಯಕ್ಕೆ ನಮ್ಮ ವಿರೋಧವಿದೆ. ಆದರೆ ಬಿಜೆಪಿ ಸರ್ಕಾರಕ್ಕೆ ತಮ್ಮ ಬೆಂಬಲ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು. ಕೇಂದ್ರ ಸರ್ಕಾರ ತರುತ್ತಿರುವ ಕಾಯ್ದೆಗಳನ್ನು ವಿರೋಧಿಸಿ ಉತ್ತರ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ರೈತ ಪ್ರತಿಭಟನೆಗಳು ನಡೆಯುತ್ತಿವೆ.

Harsimrat Kaur Badal

Share This Article
Leave a Comment

Leave a Reply

Your email address will not be published. Required fields are marked *