ಬೆಂಗಳೂರು: ಸಂಪುಟ ವಿಸ್ತರಣೆ ಸಂಬಂಧ ಸಿಎಂ ಯಡಿಯೂರಪ್ಪ ಇಂದು ದೆಹಲಿಗೆ ತೆರಳುವ ಮೊದಲು ಕ್ಯಾಬಿನೆಟ್ ಸಭೆ ನಡೆಸಿದರು.
ಕೇವಲ 15 ನಿಮಿಷದಲ್ಲೇ ಮುಗಿದ ಸಭೆಯಲ್ಲಿ ಸಚಿವರ ಜೊತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಸಂಪುಟ ವಿಸ್ತರಣೆ ಬದಲು ಪುನಾರಚನೆ ಆಗಬಹುದು. 8 ರಿಂದ 9 ಮಂದಿ ಹೊಸಬರು ಸಂಪುಟ ಸೇರಬಹುದು ಎಂಬುದಾಗಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಸಿಎಂ ಹೇಳಿದ್ದೇನು?
ಕೆಲ ಸಚಿವರ ಪಾಲಿಗೆ ಇದೇ ಕೊನೆ ಕ್ಯಾಬಿನೆಟ್ ಆಗಬಹುದು. ಯಾರಿಗೆ ಕೊಕ್ ಎನ್ನುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಹೈಕಮಾಂಡ್ ನಿರ್ಧಾರದಂತೆ ನಾನು ಸಂಪುಟ ಸರ್ಜರಿ ಮಾಡುತ್ತೇನೆ. ಸಂಪುಟದಿಂದ ಯಾರನ್ನಾದ್ರೂ ಕೈಬಿಟ್ಟರೆ ಬೇಸರ ಮಾಡಿಕೊಳ್ಳಬೇಡಿ. ಇದನ್ನೂ ಓದಿ: ಹೈಕಮಾಂಡ್ ಒಪ್ಪಿದ್ರೆ 6+3 ಫಾರ್ಮುಲಾ ಫೈನಲ್ – ಗೇಟ್ಪಾಸ್ ಯಾರಿಗೆ?
ಇಷ್ಟು ದಿನ ಸಚಿವರಾಗಿ ಸಹಕಾರ ನೀಡಿದ್ದಕ್ಕೆ ಧನ್ಯವಾದ. ಹೈಕಮಾಂಡ್ ಒಪ್ಪಿದ್ರೆ ಶುಕ್ರವಾರ/ಸೋಮವಾರ ಪ್ರತಿಜ್ಞಾವಿಧಿ ನಡೆಯಬಹುದು.