Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕೃಷಿಯಲ್ಲಿ ಯಶಸ್ಸು ಕಂಡ ಕಾನೂನು ಪದವೀಧರೆ – ದಿನಕ್ಕೆ 30 ಸಾವಿರ ರೂ. ವ್ಯಾಪಾರ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಕೃಷಿಯಲ್ಲಿ ಯಶಸ್ಸು ಕಂಡ ಕಾನೂನು ಪದವೀಧರೆ – ದಿನಕ್ಕೆ 30 ಸಾವಿರ ರೂ. ವ್ಯಾಪಾರ

Latest

ಕೃಷಿಯಲ್ಲಿ ಯಶಸ್ಸು ಕಂಡ ಕಾನೂನು ಪದವೀಧರೆ – ದಿನಕ್ಕೆ 30 ಸಾವಿರ ರೂ. ವ್ಯಾಪಾರ

Public TV
Last updated: February 6, 2021 2:48 pm
Public TV
Share
3 Min Read
Strawberry Girl Gurlin Uttar Pradesh 1
SHARE

– ಬರಡು ಭೂಮಿಯಲ್ಲಿ ಸ್ಟ್ರಾಬೆರ್ರಿ ಬೆಳೆದ ಯುವತಿ
– ಪ್ರಧಾನಿ ಮೋದಿಯಿಂದ ಮೆಚ್ಚುಗೆ

ಉತ್ತರ ಪ್ರದೇಶದ ಕಾನೂನು ಪದವೀಧರೆ ಲಾಕ್‍ಡೌನ್ ಸಮಯವನ್ನ ಸದುಪಯೋಗ ಮಾಡಿಕೊಂಡಿದ್ದು, ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಈಗ ಬರಡು ಭೂಮಿಯಿಂದಲೇ ಲಕ್ಷ ಲಕ್ಷ ಹಣವನ್ನ ಯುವತಿ ಸಂಪಾದನೆ ಮಾಡುತ್ತಿದ್ದಾರೆ.

Strawberry Girl Gurlin Uttar Pradesh 2

ಝಾನ್ಸಿಯಲ್ಲಿ ಸ್ಟ್ರಾಬೆರ್ರಿ ಗರ್ಲ್: ಝಾನ್ಸಿ ನಿವಾಸಿ 23 ವರ್ಷದ ಗುರ್ಲಿನ್ ಚಾವ್ಲಾ ಕೃಷಿಯನ್ನ ಕಂಡ ಯುವತಿ. ಇದೀಗ ಝಾನ್ಸಿಯಲ್ಲಿ ಸ್ಟ್ರಾಬೆರ್ರಿ ಗರ್ಲ್ ಅಂತಾನೇ ಗುರುತಿಸಿಕೊಂಡಿದ್ದಾರೆ. ಕಳೆದ ಭಾನುವಾರ ಮನ್ ಕೀ ಬಾತ್ ನಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಸಹ ಗುರ್ಲಿನ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವರ್ಷ ಮಹಾರಾಷ್ಟ್ರದ ಪುಣೆಯಿಂದ ಕಾನೂನು ಪದವಿ ಪಡೆದುಕೊಂಡಿದ್ದಾರೆ. ನಾನು ಕೃಷಿಯಲ್ಲಿ ತೊಡಗಿಕೊಳ್ಳುತ್ತೇನೆಂದು ಕಲ್ಪನೆ ಸಹ ಮಾಡಿಕೊಂಡಿರಲಿಲ್ಲ. ಲಾಕ್‍ಡೌನ್ ವೇಳೆ ಊರಿಗೆ ಬಂದು ಮನೆಯಲ್ಲಿ ಖಾಲಿ ಕುಳಿತುಕೊಂಡಿದ್ದೆ. ಗಾಡರ್ನಿಂಗ್ ನಲ್ಲಿ ಈ ಸಮಯ ಬಳಸಿಕೊಳ್ಳಬೇಕೆಂದು ನಿರ್ಧರಿಸಿದೆ. ಹಾಗಾಗಿ ಮನೆಯಲ್ಲಿಯೆ ಕೆಲ ಸ್ಟ್ರಾಬೆರಿ ಪ್ಲಾಂಟಿಂಗ್ ಮಾಡಿದೆ. ಕೆಲವೇ ದಿನಗಳಲ್ಲಿ ಹಣ್ಣುಗಳ ಮೂಲಕ ಪ್ರತಿಫಲ ನನ್ನದಾಯ್ತು ಎಂದು ಗುರ್ಲಿನ್ ಹೇಳುತ್ತಾರೆ.

Strawberry Girl Gurlin Uttar Pradesh 7

ಆನ್‍ಲೈನ್ ನಲ್ಲಿ ಸ್ಟ್ರಾಬೆರ್ರಿ ಪ್ಲಾಂಟ್ ಹೇಗೆ ಬೆಳೆಯಬೇಕೆಂದು ಗುರ್ಲಿನ್ ಕಲಿತುಕೊಂಡಿದ್ದರು. ಇನ್ನು ಗುರ್ಲಿನ್ ಸಾಧನೆಗೆ ಅವರ ತಂದೆ ಬೆನ್ನಲುಬಾಗಿ ನಿಂತಿದ್ದರು. ಗುರ್ಲಿನ್ ಆಸೆಯಂತೆ ನಾಲ್ಕು ಎಕರೆ ಜಮೀನಿನ ಪೈಕಿ ಒಂದೂವರೆ ಎಕರೆ ಭೂಮಿಯಲ್ಲಿ 20 ಸಾವಿರ ಸ್ಟ್ರಾಬೆರ್ರಿ ಪ್ಲಾಂಟ್ ತಂದು ನೆಟ್ಟಿದ್ದರು. ಅಂದಿನಿಂದ ಗುರ್ಲಿನ್ ರೈತ ಮಹಿಳೆಯಾಗಿ ಪ್ಲಾಂಟ್ ಆರೈಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅದರೆಲ್ಲರ ಪರಿಣಾಮ ಡಿಸೆಂಬರ್ ವೇಳೆಗೆ ಸ್ಟ್ರಾಬೆರ್ರಿ ಹಣ್ಣುಗಳ ಗುರ್ಲಿನ್ ಕೈ ಸೇರಿದ್ದವು.

Strawberry Girl Gurlin Uttar Pradesh 1

ದಿನಕ್ಕೆ 250ಕ್ಕೂ ಹೆಚ್ಚು ಆರ್ಡರ್, 30 ಸಾವಿರ ವ್ಯಾಪಾರ:
ಹಣ್ಣುಗಳು ಬಿಡಲು ಆರಂಭಿಸುತ್ತಿದ್ದಂತೆ ಸ್ಟ್ರಾಬೆರ್ರಿ ಮಾರಾಟಕ್ಕಾಗಿ ಸ್ಥಳೀಯ ಮಾರುಕಟ್ಟೆಯ ಸಂಪರ್ಕ ಮಾಡಿದ್ದರು. ವ್ಯಾಪಾರಸ್ಥರು ಹಣ್ಣುಗಳ ಗುಣಮಟ್ಟಕ್ಕೆ ಮೆಚ್ಚುಗೆ ಸೂಚಿಸಿ ಆರ್ಡರ್ ನೀಡಲಾರಂಭಿಸಿದರು. ಇದೀಗ ಹಲವು ಸೂಪರ್ ಮಾರ್ಕೆಟ್ ಗಳು ಗುರ್ಲಿನ್ ಅವರಿಂದ ಹಣ್ಣುಗಳನ್ನ ಖರೀದಿಸುತ್ತಿವೆ. ಇದೀಗ ತಮ್ಮದೇ ವೆಬ್‍ಸೈಟ್ ಆರಂಭಿಸಿರುವ ಗುರ್ಲಿನ್ ಆನ್‍ಲೈನ್ ಮೂಲಕ ಸಹ ಆರ್ಡರ್ ಗಳನ್ನ ಪಡೆದುಕೊಳ್ಳುತ್ತಿದ್ದಾರೆ. ಪ್ರತಿದಿನ ಸುಮಾರು 70 ಕೆಜಿ ಸ್ಟ್ರಾಬೆರ್ರಿ ಸಿಗುತ್ತೆ. 250ಕ್ಕೂ ಹೆಚ್ಚು ಆರ್ಡರ್ ಪಡೆಯುವ ಗುರ್ಲಿನ್ ಪ್ರತಿನಿತ್ಯ 30 ಸಾವಿರ ರೂ.ನಷ್ಟು ವ್ಯಾಪಾರ ಮಾಡುತ್ತಾರೆ. ಮಿಶ್ರ ಬೇಸಾಯ ಪದ್ಧತಿಯನ್ನ ಅಳವಡಿಸಿಕೊಂಡಿರುವ ಗುರ್ಲಿನ್ ತರಕಾರಿಯನ್ನ ಸಹ ಬೆಳೆಯುತ್ತಾರೆ.

Strawberry Girl Gurlin Uttar Pradesh 4

ಕುಣಿದು ಕುಪ್ಪಳಿಸಿದ ಗುರ್ಲಿನ್ ತಂದೆ:
ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ಐದು ತಿಂಗಳು ಕಳೆಯುವಷ್ಟರಲ್ಲಿಯೇ ಝಾನ್ಸಿಯಲ್ಲಿ ಆಯೋಜಿಸಿದ ಸ್ಟ್ರಾಬೆರ್ರಿ ಫೆಸ್ಟಿವಲ್ ಗೆ ರಾಯಭಾರಿಯನ್ನಾಗಿ ಸಿಎಂ ಯೋಗಿ ಆದಿತ್ಯನಾಥ್ ನೇಮಕ ಮಾಡಿದ್ರು. ಗುರ್ಲಿನ್ ತಂದೆ ಹರ್ಜಿತ್ ಸಿಂಗ್ ಸಾರಿಗೆ ಉದ್ಯಮಿಯಾಗಿದ್ದಾರೆ. ಪ್ರಧಾನಿಗಳು ಮಗಳ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಕ್ಕೆ ಕುಣಿದು ಕುಪ್ಪಳಿಸಿದ್ದಾರೆ. ಇನ್ನು ಸಿಎಂ ಯೋಗಿ ಆದಿತ್ಯನಾಥ್ ತಮ್ಮ ಕಚೇರಿಗೆ ಗುರ್ಲಿನ್ ಹಾಗೂ ಅವರ ಕುಟುಂಬವನ್ನ ಕರೆಸಿಕೊಂಡಿದ್ದರು. ಈ ವೇಳೆ ಗುರ್ಲಿನ್ ತಾವು ಬೆಳೆದ ಸ್ಟ್ರಾಬೆರ್ರಿಗಳನ್ನ ಉಡುಗೊರೆಯಾಗಿ ಮುಖ್ಯಮಂತ್ರಿಗಳಿಗೆ ನೀಡಿದ್ದಾರೆ.

Strawberry Girl Gurlin Uttar Pradesh 6

ಸ್ಟ್ರಾಬೆರ್ರಿ ಬೆಳೆಯೋದು ಹೇಗೆ?:
ಸ್ಟ್ರಾಬೆರ್ರಿಯನ್ನು ಲೋಮಿ ಮಣ್ಣಿನಲ್ಲಿ ಬೆಳೆಯೋದು ಸೂಕ್ತ. ಈ ಮಣ್ಣು ಸರಿಯಾದ ಆಮ್ಲಿಯತೆ ಕಾಪಾಡುವ ಖನಿಜ ಅಂಶಗಳನ್ನ ಹೊಂದಿರುತ್ತೆ. ಈ ಮಣ್ಣಿನ ಸ್ಥಿತಿಯನ್ನ ಕಾಪಾಡಿಕೊಳ್ಳಲು ಸಾವಯವ ಗೊಬ್ಬರಗಳನ್ನ ವಾರ್ಷಿಕವಾಗಿ ಬಳಕೆ ಮಾಡಿಕೊಂಡಿರಬೇಕು. ಆಗಸ್ಟ್-ಸೆಪ್ಟೆಂಬರ್ ನಲ್ಲಿ ಸ್ಟ್ರಾಬೆರ್ರಿಗಳನ್ನ ಪ್ಲಾಂಟ್ ಮಾಡಬೇಕು. ಸಸಿಗಳ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಶಾಖ ಹೆಚ್ಚಾದ್ರೆ ಪ್ಲಾಂಟ್ ಒಣಗಿ, ಹಣ್ಣುಗಳ ಕೆಡುತ್ತವೆ. ಆದ್ರೆ ಬುಂದೇಲಖಂಡ್ ನಲ್ಲಿ ಸಾಮಾನ್ಯ ವಾಗಿ 35 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುತ್ತೆ. ಅದ್ರೂ ಛಲ ಬಿಡದ ಗುರ್ಲಿನ್ ವೈಜ್ಞಾನಿಕ ನಿಯಮಗಳನ್ನು ಪಾಲಿಸಿ ಸ್ಟ್ರಾಬೆರ್ರಿ ಬೆಳೆದಿದ್ದಾರೆ.

TAGGED:agricultureGurlin ChawlajhansiPublic TVStrawberryStrawberry FarmingstudentSuccess storyuttar pradeshಉತ್ತರ ಪ್ರದೇಶಕೃಷಿಗುರ್ಲಿನ್ ಚಾವ್ಲಾಝಾನ್ಸಿಪಬ್ಲಿಕ್ ಟಿವಿವಿದ್ಯಾರ್ಥಿನಿಸಕ್ಸಸ್ ಸ್ಟೋರಿಸ್ಟ್ರಾಬೆರ್ರಿಸ್ಟ್ರಾಬೆರ್ರಿ ಕೃಷಿ
Share This Article
Facebook Whatsapp Whatsapp Telegram

Cinema news

Rashmika Mandanna Vijay Devarakonda 1
ರಶ್ಮಿಕಾ, ವಿಜಯ್ ಮದುವೆಗೆ ಫೋನ್ ಬ್ಯಾನ್ – ವಿಡಿಯೋ ಚಿತ್ರೀಕರಣ ತಂಡದಿಂದಲೂ NDAಗೆ ಸಹಿ
Bollywood Cinema Latest Main Post
Rajanivasa
ʻರಾಜನಿವಾಸʼದಲ್ಲಿ ʻಕಾಂತಾರʼದ ಝಲಕ್‌ – ಕುತೂಹಲ ಹೆಚ್ಚಿಸಿದ ಟ್ರೇಲರ್‌!
Cinema Latest Sandalwood
salman khan salim khan
ಸಲ್ಮಾನ್‌ ಖಾನ್‌ ತಂದೆ ಸಲೀಂ ಖಾನ್‌ ಆಸ್ಪತ್ರೆಗೆ ದಾಖಲು
Bollywood Cinema Latest Main Post
Mobile video recording
ಬೆಂಗಳೂರು | ನಟಿಯ ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್‌ – ಸ್ನೇಹಿತೆಗೆ ಕಳಿಸಿ ಹಣಕ್ಕೆ ಡಿಮ್ಯಾಂಡ್‌
Cinema Crime Karnataka Latest Sandalwood Top Stories

You Might Also Like

vidhana soudha
Bengaluru City

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ – ಸರ್ಕಾರದ ಹೇಡಿತನಕ್ಕೆ ಸಾಕ್ಷಿ: ಜೆಡಿಎಸ್

Public TV
By Public TV
9 minutes ago
Chaluvarayaswamy
Bengaluru City

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಸಿಎಂ ಜೊತೆ ಚರ್ಚೆ: ಚಲುವರಾಯಸ್ವಾಮಿ

Public TV
By Public TV
29 minutes ago
Nikhil Kumaraswamy
Bengaluru City

ವಿಧಾನಸೌಧಕ್ಕೆ ಮಾಧ್ಯಮಗಳಿಗೆ ನಿರ್ಬಂಧ: ರಾಹುಲ್ ಗಾಂಧಿ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ

Public TV
By Public TV
51 minutes ago
Mandya Police
Crime

ಆ್ಯಸಿಡ್ ಅಟ್ಯಾಕ್ ಕಮ್ ದರೋಡೆ ನಾಟಕ – ಚಿನ್ನದಂಗಡಿ ಮಾಲೀಕನೀಗ ಪೊಲೀಸರ ಅತಿಥಿ

Public TV
By Public TV
1 hour ago
Vidhana Soudha
Bengaluru City

ಮಾಧ್ಯಮಗಳನ್ನ ಹತ್ತಿಕ್ಕಲು ಹೊರಟ ಸರ್ಕಾರ – ಶಕ್ತಿಸೌಧದಲ್ಲಿ ಭದ್ರತಾ ಲೋಪ ಬಯಲಿಗೆಳೆದಿದ್ದೇ ತಪ್ಪಾ..?

Public TV
By Public TV
2 hours ago
Byrati Basavaraj a
Bengaluru City

ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಬೈರತಿ ಫುಲ್ ಸೈಲೆಂಟ್ – ಕೊಲೆ ಆರೋಪಿಗಳ ಹೇಳಿಕೆಗಳೇ ಶಾಸಕರಿಗೆ ಕಂಟಕವಾಗುತ್ತಾ?

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?