ಕುರ್ಚಿ ಪಾಲಿಟಿಕ್ಸ್ ಗೇಮ್ ನಂಗೆ ಕಷ್ಟ – ರಿವೀಲ್ ಆಯ್ತು ಅರವಿಂದ್ ಕಥೆ

Public TV
1 Min Read
ARAVINDH

ಬಿಗ್‍ಬಾಸ್ ಕೊಟ್ಟ ಕುರ್ಚಿ ಪಾಲಿಟಿಕ್ಸ್ ಗೇಮ್‍ನಿಂದ ಬೈಕ್ ರೈಡರ್ ಅರವಿಂದ್ ಹಿಂದೆ ಸರಿದಿದ್ದರು. ಇದೀಗ ಈ ಗೇಮ್‍ನಿಂದ ಅರವಿಂದ್ ಹಿಂದೆ ಸರಿಯಲು ಏನು ಕಾರಣ ಎಂಬುದನ್ನು ‘ವಾರದ ಕಥೆ ಕಿಚ್ಚನ ಜೊತೆ’ಕಾರ್ಯಕ್ರಮದಲ್ಲಿ ರೀವಿಲ್ ಮಾಡಿದ್ದಾರೆ.

SUDEEP 1 medium

ಸುದೀಪ್ ಅವರು ಒಂದೊಂದು ಟಾಸ್ಕ್ ಗೆ ಒಂದೊಂದು ಸ್ಕಿಲ್ ಬೇಕು. ಹಾಗೆ ಇಂತಹ ಒಂದು ಟಾಸ್ಕ್ ಕಷ್ಟ ಎಂದು ನೀವು ಹೇಳಲು ಕಾರಣ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಅರವಿಂದ್ ನನಗೆ ಅಷ್ಟೊತ್ತು ಕೂತುಕೊಳ್ಳಲು ಆಗುವುದಿಲ್ಲ. ನನಗೆ ಮೊದಲೇ ಕಾಲಿನಲ್ಲಿ ಗಾಯ ಇರುವ ಕಾರಣ ಈ ಗೇಮ್‍ನಿಂದ ಹಿಂದಕ್ಕೆ ಸರಿಯುವ ನಿರ್ಧಾರ ಮಾಡಿದೆ ಎಂದು ಉತ್ತರಿಸಿದ್ದಾರೆ.

ARAVINDH 4 medium

ನೀವು ರೇಸಿಂಗ್ ಹೋದಾಗ ಎಷ್ಟೊತ್ತು ಕೂರುತ್ತೀರಿ ಎಂದು ಕಿಚ್ಚ ಮರು ಪ್ರಶ್ನೆ ಹಾಕಿದ್ದಾರೆ. ಇದಕ್ಕೆ ಉತ್ತರಿಸಿದ ಅರವಿಂದ್, ಬೆಳಿಗ್ಗೆ 4 ಗಂಟೆಗೆ ಪ್ರಾರಂಭ ಮಾಡಿದರೆ ಸ್ವಲ್ಪ ಕಿಲೋಮೀಟರ್ ಲಿಯೊಸಾನ್ ಇರುತ್ತದೆ. ಆದಾದ ಬಳಿಕ 400 ರಿಂದ 500 ಕಿಲೋಮೀಟರ್ ಸ್ಟೇಜಸ್ ಇರುತ್ತದೆ, ಮತ್ತೆ ವಾಪಸ್ 100ರಿಂದ 200 ಕಿಲೋಮೀಟರ್ ಲಿಯೊಸಾನ್ ಇರುತ್ತದೆ. ಮತ್ತೆ ಬಿ ವಾಕ್ ಇರುತ್ತದೆ. ಈ ಸಂದರ್ಭ ನಮಗೆ ಲಿಯೊಸಾನ್ ಸುತ್ತಿನಲ್ಲಿ ಮಾತ್ರ ಕೂತುಕೊಂಡು ಬೈಕ್ ರೈಡ್ ಮಾಡಲು ಅವಕಾಶ ಅದು ಕೂಡ ಒಂದೇ ರೀತಿ ಕೂತು ಇರಲ್ಲ ಬೇರೆ ಬೇರೆ ಸ್ಟೆಪ್‍ಗಳನ್ನು ತೆಗೆದುಕೊಂಡಿರುತ್ತೇವೆ. ಇದನ್ನೂ ಓದಿ: ಬಿಗ್‍ಬಾಸ್ ಮನೆಗೆ ಬಟ್ಟೆ ಒಗೆಯೊಕೆ ಬಟ್ಟೆ ತಂದವರ್ಯಾರು ಗೊತ್ತಾ?

ARAVINDH 3 medium

ಬೈಕ್ ರೈಡಿಂಗ್ ವೇಳೆ ಕೂತಂತೆ ಕಾಣಿಸುತ್ತದೆ. ಆದರೆ ಕೂತಿರಲ್ಲ ನಾವು ಜಾಕಿ ತರ ಸ್ಕಾಟ್ ಮಾಡುತ್ತಾ ಇರುತ್ತೇವೆ. ಹಾಗಾಗಿ ಏನು ತೊಂದರೆ ಆಗುವುದಿಲ್ಲ. ಆದರೆ ತುಂಬಾ ಹೊತ್ತು ಒಂದೇ ರೀತಿ ಕೂತಿದ್ದರೆ ಮಾಂಸಖಂಡಗಳು ಸೆಳೆತಕ್ಕೆ ಒಳಗಾಗುವ ಸಾಧ್ಯತೆ ಇರುವ ಕಾರಣ ಈ ಟಾಸ್ಕ್ ನಿಂದ ಹಿಂದೆ ಸರಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *