ಪಣಜಿ: ಕಾಡುಹಂದಿ ಕ್ರಿಮಿಕೀಟವೆಂದು ಘೋಷಿಸುವ ಪ್ರಕ್ರಿಯೆ ಪ್ರಾರಭವಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
Held a comprehensive review meeting of the Forest Department today at the Secretariat, Porvorim. Discussed about various reforms to be initiated including e-governance initiatives, recruitments, forest rights cases and other issues. pic.twitter.com/yTPtjTviIM
— Dr. Pramod Sawant (@DrPramodPSawant) July 5, 2021
ಪಣಜಿಯಲ್ಲಿ ಕೃಷಿ ಮತ್ತು ಅರಣು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಕಾಡುಹಂದಿಯನ್ನು ಕ್ರಿಮಿಕೀಟವೆಂದು ಘೋಷಿಸುವ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಿದೆ ಎಂದಿದ್ದಾರೆ. ಇದನ್ನೂ ಓದಿ: ಚಿದಾನಂದ ಸವದಿ ಕಾರು ಚಾಲನೆ ಮಾಡ್ತಿರಲಿಲ್ಲ: ಎಸ್ಪಿ ಲೋಕೇಶ್ ಜಗಲಾಸರ್
ಕಾಡುಹಂದಿಗಳು ರಾಜ್ಯದಲ್ಲಿ ಕೃಷಿ ಕ್ಷೇತ್ರಗಳಿಗೆ ಹಾನಿಯುಂಟು ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಗೋವಾ ರಾಜ್ಯ ಸರ್ಕಾರ 2016ರಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ (ಎನ್ಡಬ್ಲ್ಯೂಬಿ) ಶಿಫಾರಸ್ಸು ಮಾಡಿತ್ತು. ಆದ್ದರಿಂದ ಕಾಡುಹಂದಿಯನ್ನು ಕ್ರಿಮಿಕೀಟವೆಂದು ಘೋಷಿಸುವ ಪ್ರಸ್ತಾವ ಬಾಕಿ ಉಳಿದಿದೆ ಎಂದು ಸಿಎಂ ಸಾವಂತ್ ಮಾಹಿತಿ ನೀಡಿದ್ದಾರೆ.
ಪ್ರಸ್ತುತ, ಕಾಡುಹಂದಿಯನ್ನು ವನ್ಯಜೀವಿ ಕಾಯ್ದೆಯಡಿ ರಕ್ಷಿಸಲಾಗಿದೆ, ಅದರ ಹತ್ಯೆಯನ್ನು ಕಾನೂನುಬಾಹಿರಗೊಳಿಸಿದೆ. ಕಳೆದ ಕೆಲವು ವರ್ಷಗಳಿಂದ ಮನುಷ್ಯ-ಪ್ರಾಣಿಗಳ ಸಂಘರ್ಷ ಮತ್ತು ಬೆಳೆಗಳ ನಾಶದಿಂದಾಗಿ, ರೈತರು ಕೆಲವು ಕಾಡು ಪ್ರಾಣಿಗಳ ಕ್ರಿಮಿಕೀಟಗಳನ್ನು ಘೋಷಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದರು, ಅವುಗಳಲ್ಲಿ ಒಂದು ಕಾಡುಹಂದಿಯಾಗಿದೆ.