ಕಾಂಗ್ರೆಸ್ ಅಪಪ್ರಚಾರದಿಂದ ಜನ ಲಸಿಕೆ ಪಡೆಯಲಿಲ್ಲ- ಎಚ್‍ಡಿಕೆ ಕಿಡಿ

Public TV
1 Min Read
HDK 2

ಬೆಂಗಳೂರು: ದೇಶದಲ್ಲಿ ಲಸಿಕೆ ಅಭಿಯಾನ ಸರಿಯಾಗಿ ಆಗದೇ ಇರೋದಕ್ಕೆ ಕಾಂಗ್ರೆಸ್ ಕಾರಣ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಸಿಕೆ ನೀಡಲು 100 ಕೋಟಿ ರೂ. ಕೊಡುವುದಾಗಿ ಹೇಳುತ್ತಿರೋ ಕಾಂಗ್ರೆಸ್ ವರ್ತನೆಗೆ ಕಿಡಿಕಾರಿದರು. ಕಾಂಗ್ರೆಸ್ ಶಾಸಕರು ಅ ಹಣವನ್ನು ಕೈಯಿಂದ ಕೊಡುತ್ತಿಲ್ಲ. ಶಾಸಕರ ಕ್ಷೇತ್ರ ಅಭಿವೃದ್ಧಿ ಹಣ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ಮಾಡಿದರು. ಆದರೆ ಲಸಿಕೆ ಬಂದಾಗ ಅಪಪ್ರಚಾರ ಮಾಡಿದ್ದೇ ಕಾಂಗ್ರೆಸ್. ಜನರಿಗೆ ಭಯ ಹುಟ್ಟಿಸಿದ್ದು ಕಾಂಗ್ರೆಸ್, ಜನರು ಲಸಿಕೆ ಪಡೆಯದಂತೆ ಕಾಂಗ್ರೆಸ್ ಅಪ ಪ್ರಚಾರ ಮಾಡಿತು ಎಂದು ಕಿಡಿಕಾರಿದರು.

Vaccine

ಅಂದು ಕಾಂಗ್ರೆಸ್ ಮಾಡಿದ ತಪ್ಪಿನಿಂದ ಜನ ಲಸಿಕೆ ಪಡೆಯಲಿಲ್ಲ. ಲಸಿಕೆ ಅಭಿಯಾನ ಸರಿಯಾಗಿ ಆಗದೇ ಇರುವುದಕ್ಕೆ ಕಾಂಗ್ರೆಸ್ ಕಾರಣ. ಈಗ ಲಸಿಕೆಗೆ 100 ಕೋಟಿ ರೂ. ಕೊಡುತ್ತೇವೆ ಎಂದು ನಾಟಕ ಮಾಡುತ್ತಿದ್ದಾರೆ, ಇದು ಕಾಂಗ್ರೆಸ್ ನ ಡ್ರಾಮಾ. ಏಪ್ರಿಲ್ ನಲ್ಲಿ ನಾನು ಲಸಿಕೆಯನ್ನು ಪೋಲಿಯೋ ಲಸಿಕೆ ರೀತಿ ಕೊಡಿ ಎಂದು ಹೇಳಿದ್ದೆ. ಎಲ್ಲರಿಗೂ ಲಸಿಕೆ ಕೊಡಿ ಎಂದು ಎಚ್ಚರಿಸಿದ್ದೆ. ಸರ್ಕಾರ ಇದನ್ನು ಮಾಡಡಿಲ್ಲ, ಸಲಹೆ ಪಡೆಯಲಿಲ್ಲ. ಈಗಲಾದರೂ ಜನರ ಜೀವದ ಜೊತೆ ಸರ್ಕಾರ ಚೆಲ್ಲಾಟ ಆಡಬಾರದು ಲಸಿಕೆ ಎಲ್ಲರಿಗೂ ಕೊಡುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

Share This Article
Leave a Comment

Leave a Reply

Your email address will not be published. Required fields are marked *