ಕಡಲಾಮೆ, ಸಾಗರ ಪಕ್ಷಿಗೆ ಮರುಜೀವ ನೀಡಿದ ಅರಣ್ಯ ಇಲಾಖೆ

Public TV
1 Min Read
forest department

ಉಡುಪಿ: ಕಡಲ ಆಮೆ ಮತ್ತು ಸೀಬರ್ಡ್ ಗೆ ಜಿಲ್ಲೆಯ ಅರಣ್ಯ ಇಲಾಖೆ ಸಿಬ್ಬಂದಿ ಮರುಜೀವ ನೀಡಿದ್ದಾರೆ.

ಒಂದು ತಿಂಗಳ ಹಿಂದೆ ಬೀಜಾಡಿ ಕಡಲತೀರದಲ್ಲಿ ಗಾಯಗೊಂಡ ಸುಮಾರು 20 ಕೆ.ಜಿ.ಯ ಕಡಲಾಮೆ ಮೀನುಗಾರರಿಗೆ ಸಿಕ್ಕಿತ್ತು. ಹರಿತವಾದ ಬಲೆ ಕಡಲ ಆಮೆಯ ಕಾಲಿಗೆ ಗಾಸಿ ಮಾಡಿತ್ತು. ಮೀನುಗಾರರು ಕಡಲಾಮೆಯ ರಕ್ಷಣೆ ಮಾಡಿ ಅರಣ್ಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದರು. ಸುಮಾರು ಒಂದು ತಿಂಗಳ ಕಾಲ ಪಾಲನೆ-ಪೋಷಣೆ ಮಾಡಿದ ಅರಣ್ಯ ಇಲಾಖೆ, ಕಾಲಿನ ಗಾಯವನ್ನು ಗುಣಪಡಿಸಿದೆ. ಸಾಗರ ಜೀವಿಗಳ ತಜ್ಞ ಬೆಂಗಳೂರಿನ ಡಾ. ಶಂತನು ವಿಶೇಷ ಮುತುವರ್ಜಿಯಲ್ಲಿ ಚಿಕಿತ್ಸೆ ಕೊಟ್ಟಿದ್ದರು.

WhatsApp Image 2020 08 27 at 6.25.48 PM 1

ಈ ಮೂಲಕ ಸುಮಾರು 250 ವರ್ಷ ಆಯಸ್ಸು ಇರುವ ಆಮೆಗೆ ಮರುಜೀವ ಸಿಕ್ಕಿದೆ. ಗುಣಪಡಿಸಲಾದ ಆಮೆಯನ್ನು ಇದೀಗ ಮರಳಿ ಸಮುದ್ರಕ್ಕೆ ಬಿಡಲಾಗಿದೆ.

ಇದಾದ ಬಳಿಕ 15 ದಿನಗಳ ಹಿಂದೆ ಹಾರಲಾಗದೆ ಒದ್ದಾಡುತ್ತಿದ್ದ ಸಮುದ್ರ ಪಕ್ಷಿ ಮೀನುಗಾರರಿಗೆ ಸಿಕ್ಕಿತ್ತು. ಪಕ್ಷಿಯನ್ನು ಮೀನುಗಾರರು ಅರಣ್ಯ ಇಲಾಖೆಗೆ ನೀಡಿದ್ದರು. ಸಮುದ್ರ ಪಕ್ಷಿಗೆ ಶುಶ್ರೂಷೆ ಮಾಡಿದ ಅರಣ್ಯ ಇಲಾಖೆ ಕೆಲ ದಿನಗಳ ಹಿಂದೆ ಸಮುದ್ರ ತೀರದಲ್ಲಿ ಸ್ವಚ್ಛಂದವಾಗಿ ಹಾರಲು ಬಿಟ್ಟಿದ್ದರು. ಆದರೆ ಹಕ್ಕಿ ಹಾರದೆ ಹಿಂದೆ ಬಂದಿತ್ತು. ಇದೀಗ ಅರಣ್ಯ ಇಲಾಖೆ ಕಡಲತಡಿಯಿಂದ ಒಂದು ಕಿಲೋಮೀಟರ್ ದೂರ ಹೋಗಿ ಬಿಟ್ಟು ಬಂದಿದ್ದಾರೆ.

WhatsApp Image 2020 08 27 at 6.25.49 PM

ಕಡಲ ಆಮೆ ಮತ್ತು ಸಾಗರ ಪಕ್ಷಿ ವನ್ಯಜೀವಿ ವ್ಯಾಪ್ತಿಗೆ ಬರುತ್ತದೆ. ಈ ವರ್ಷ ಎಂಟು ಆಮೆ ರಕ್ಷಣೆ ಮಾಡಿದ್ದೇವೆ. ಮಳೆಗಾಲದಲದಲ್ಲಿ ಕಡಲಬ್ಬರಕ್ಕೆ ಸಿಕ್ಕಿ ಪ್ರತಿ ವರ್ಷ ಕಡಲಾಮೆ, ಪಕ್ಷಿಗಳನ್ನು ಮೀನುಗಾರರು ರಕ್ಷಣೆ ಮಾಡುತ್ತಾರೆ. ನಾವು ಶುಶ್ರೂಷೆ ಮಾಡುತ್ತೇವೆ ಎಂದು ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *