ಭುವನೇಶ್ವರ: ಅಂತ್ಯಸಂಸ್ಕಾರ ಮುಗಿಸಿ ವಾಪಸ್ ಬುರುತ್ತಿದ್ದ ಪಿಕಪ್ ವಾಹನ ಪಲ್ಟಿಯಾದ ಪರಿಣಾಮ 12 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಒಡಿಶಾದ ಕೊರಪುತ್ ಜಿಲ್ಲೆಯ ಮುರ್ತಾಹಂಡಿಯಲ್ಲಿ ನಡದಿದೆ.
ಸಿಂಧಿಗುಡ ಗ್ರಾಮದ ಸಂಬಂಧಿಕರೊಬ್ಬರು ಮೃತರಾಗಿದ್ದರು. ಅಂತ್ಯಸಂಸ್ಕಾರಕ್ಕಾಗಿ ಪಿಕಪ್ ವಾಹನದಲ್ಲಿ ಹೋಗಿದ್ದರು. ಅಂತ್ಯಸಂಸ್ಕಾರವನ್ನು ಮುಗಿಸಿ 35 ಮಂದಿ ವಾಪಸ್ ಮನೆಗೆ ಪಿಕಪ್ ವಾಹನದಲ್ಲಿ ಬರುತ್ತಿದ್ದರು. ಈ ವೇಳೆ ಚಲಿಸುತ್ತಿದ್ದ ವಾಹನ ಪಲ್ಟಿಯಾಗಿದೆ. ವಾಹನ ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಆದರೆ ವಾಹನದಲ್ಲಿ ಇದ್ದ 35 ಮಂದಿಗಳ ಪೈಕಿ 12 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಹಲವರು ಗಂಭಿರವಾಗಿ ಗಾಯಗೊಂಡಿದ್ದಾರೆ. ಇವರು ಸಿಂಧಿಗುಡ ಗ್ರಾಮದ ನಿವಾಸಿಗಳಾಗಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ.
ವಾಹನ ಹೇಗೆ ಪಲ್ಟಿಯಾಯಿತ್ತು. ಅಪಘಾತಕ್ಕೆ ಕಾರಣವೇನು ಎಂದು ಪತ್ತೆಯಾಗಿಲ್ಲ. ವಾಹನದಲ್ಲಿದ್ದವರು ಚಂಡೀಗಢ ಮೂಲದವರಾಗಿದ್ದಾರೆ ಎಂದು ತಿಳಿದು ಬಂದಿದೆ. ಪಿಕಪ್ ವಾಹನ ಛತ್ತೀಸ್ಘಡ ನೋಂದಣಿಯನ್ನು ಹೊಂದಿದೆ. ಸಾವನ್ನಪ್ಪಿದವರ ಗುರುತು ಪತ್ತೆಯಾಗಬೇಕಿದೆ.