– ಥಳಿತದಿಂದ ಕುಸಿದ ಮಹಿಳೆಯ ಕೂದಲನ್ನೇ ಹಿಡಿದು ಎಳೆದಾಡಿದ್ರು
ಬೆಳಗಾವಿ: ಆಸ್ತಿ ವಿಚಾರವಾಗಿ ಮಹಿಳೆಯ ಮೇಲೆ ಸಂಬಂಧಿಕರು ಚಿಕ್ಕೋಡಿ ಪಟ್ಟಣದ ಬಸವೇಶ್ವರ ಸರ್ಕಲ್ ನಲ್ಲಿ ಮಾರಾಮಾರಿ ನಡೆಸಿದ ಘಟನೆ ಇಂದು ನಡೆದಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ನಗರ ಮಂಗಳ ನಾಯಕ್ ಎಂಬವರೇ ಸಂಬಂಧಿಕರಿಂದ ಥಳಿತಕ್ಕೊಳಕ್ಕಾದ ಮಹಿಳೆ.
ಏನಿದು ಪ್ರಕರಣ?: ಮಂಗಳ ನಾಯಕ್ ತಮ್ಮ ಅಕ್ಕನ ಮಗ ಭರತ್ ಜೊತೆ ಚಿಕ್ಕೋಡಿ ಪಟ್ಟಣದ ತಹಶೀಲ್ದಾರ್ ಕೋರ್ಟ್ ನಲ್ಲಿ ಪ್ರಕರಣವೊಂದರ ವಿಚಾರಣೆಗೆ ಬಂದಿದ್ದು, ವಾಪಾಸ್ಸು ಮನೆಗೆ ಹೋಗುತ್ತಿದ್ದರು. ಈ ವೇಳೆ 10ಕ್ಕೂ ಹೆಚ್ಚು ಜನರ ತಂಡದಿಂದ ಮಂಗಳ ಮತ್ತು ಭರತ ಮೇಲೆ ಚಿಕ್ಕೋಡಿ ಪಟ್ಟಣದ ಬಸವೇಶ್ವರ ಸರ್ಕಲ್ ನಲ್ಲಿ ಹಲ್ಲೆ ನಡೆದಿದೆ. ಅಲ್ಲದೇ ಸಂಬಂಧಿಕರು ಮಂಗಳ ನಾಯಕ ಅವರ ಕೂದಲನ್ನು ಹಿಡಿದು ಎಳೆದಾಡಿದ್ದಾರೆ. ಬಳಿಕ ಚಪ್ಪಲಿಯಿಂದ ಹೊಡೆದಾಡಿದ್ದಾರೆ.
ಮಾಹಿತಿ ಪಡೆದ ಪೊಲಿಸರು ಸ್ಥಳಕ್ಕೆ ದೌಡಾಯಿಸುತ್ತಿದ್ದಂತೆಯೇ ಹಲ್ಲೆ ಮಾಡಿದ ತಂಡ ಸ್ಥಳದಿಂದ ಕಾಲ್ಕಿತ್ತಿದೆ. ಹಲ್ಲೆ ನಡೆಸಿದವರು ಕೂಡ ನಿಪ್ಪಾಣಿ ನಗರದವರು ಎಂದು ಹೇಳಲಾಗುತ್ತಿದೆ. ಹೊಡೆದಾಟದ ವೇಳೆ ಮೂರ್ಛೆ ಹೋಗಿದ್ದ ಮಂಗಳಗೆ ಸ್ಥಳೀಯರು ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.youtube.com/watch?v=vJSPrfa-Lyk