ನೆಲಮಂಗಲ: ನಾನು ಸತ್ತರೆ ಅದಕ್ಕೆ ಜೆಡಿಎಸ್ ಶಾಸಕನೇ ಕಾರಣವೆಂದು ಬರೆದು ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿರೋ ಮಾಜಿ ಶಿಕ್ಷಕಿ ಆತ್ಮಹತ್ಯೆ ಯತ್ನಿಸಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲದ ಶಿವಕುಮಾರಿ ನಿದ್ರೆ ಮಾತ್ರೆ ಸೇವಿಸಿದ್ದು, ಸದ್ಯ ಮ್ಯಾಗ್ನಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಲಿ ಶಾಸಕ ಶ್ರೀನಿವಾಸ್ ಮೂರ್ತಿ ವಿರುದ್ಧ ಫೇಸ್ ಬುಕ್ನಲ್ಲಿ ಹಿಗ್ಗಾಮುಗ್ಗಾ ಆಪಾದನೆಗಳನ್ನು ಮಾಡಿದ್ದಾರೆ.
ಹೆಣ್ಣು ಮಕ್ಕಳ ಬದುಕನ್ನೇ ನಾಶ ಮಾಡಿದ ನೀಚ ಶಾಸಕ. ಹೆಣ್ಣು ಮಕ್ಕಳಿಗೆ ನ್ಯಾಯ ಸಿಗಬೇಕಾದರೆ ಕೊಲೆ ಆಗಬೇಕು ಅಥವಾ ಅತ್ಯಾಚಾರವಾಗಬೇಕು. ಆಗಷ್ಟೇ ಸರ್ಕಾರ ಹಾಗೂ ಸಮಾಜ ನೊಂದವರ ಪರ ನಿಲ್ಲುವುದು. ನನ್ನ ಶಕ್ತಿ ಮೀರಿ ಹೋರಾಡಿದ್ದೇನೆ. ನನ್ನ ಸಾವಿಗೆ ಶಾಸಕ ಶ್ರೀನಿವಾಸ ಮೂರ್ತಿ ಕಾರಣ ಎಂದು ಡೆತ್ ನೋಟ್ನಲ್ಲಿ ಆರೋಪಿಸಿದ್ದಾರೆ.