ಮೈಸೂರು: ಜಂಬೂ ಸವಾರಿ ವೇಳೆ ವಿಜಯಾ ಆನೆ ಭಯಗೊಂಡ ಘಟನೆ ನಡೆದಿದೆ.
ಜಂಬೂಸವಾರಿ ಸಾಗುತ್ತಿದ್ದ ವೇಳೆ ಪೊಲೀಸ್ ಕುದುರೆಗಳ ನೋಡಿ ವಿಜಯಾ ಆನೆ ಭಯಗೊಂಡು ಗಲಿಬಿಲಿಯಾಗಿತ್ತು. ಕೂಡಲೇ ಮಾವುತ ವಿಜಯಾ ಆನೆಯನ್ನು ನಿಯಂತ್ರಿಸಿದರು.
ಸಂಪುಟ ಸಹೋದ್ಯೋಗಿಗಳ ಜತೆ ವೋಲ್ವೋ ಬಸ್ನಲ್ಲಿ ಬಂದ ಸಿಎಂ ಸಿದ್ದರಾಮಯ್ಯ, ಅರಮನೆಯ ಬಲರಾಮ ದ್ವಾರದ ಬಳಿ ನಂದಿಧ್ವಜ ಪೂಜೆ ಸಲ್ಲಿಸಿದರು. ನಂದಿಧ್ವಜ ಪೂಜೆಯ ಮೂಲಕ ವೈಭವದ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಚಾಲನೆ ಸಿಕ್ಕಿತು.
ಪೂಜೆ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಮುಂದಿನ ವರ್ಷವೂ ನಾನೇ ದಸರಾ ಪೂಜೆ ಮಾಡ್ತೇನೆ. ನನ್ನ ನಾಯಕತ್ವದಲ್ಲೇ ಚುನಾವಣೆ ನಡೆಯುತ್ತೆ. ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದರು.
https://youtu.be/I05j3rIJEqk