ಬೆಂಗಳೂರು: ಮಳೆಗಾಗಿ ಎರಡನೇ ದಿನವಾದ ಇಂದು ಮೋಡ ಬಿತ್ತನೆ ಮಾಡುತ್ತಿರುವ ವಿಶೇಷ ವಿಮಾನ ಬೆಂಗಳೂರು ಹೊರವಲಯ ನೆಲಮಂಗಲ ಸುತ್ತಮುತ್ತ ಹಾರಾಟ ನಡೆಸಿದೆ.
ಇಂದು ನೆಲಮಂಗಲ ಸುತ್ತಮುತ್ತ ದಟ್ಟವಾದ ಮೋಡಗಳಿದ್ದ ಕಾರಣ ಮೋಡ ಬಿತ್ತನೆಯ ವಿಶೇಷ ವಿಮಾನ ಹಾರಟ ನಡೆಸುತ್ತಿದೆ. ನೆಲಮಂಗಲ ತಾಲೂಕಿನಾದ್ಯಂತ ಇಂದುಮ ಮೋಡಗಳು ಆವರಿಸಿಕೊಂಡಿದ್ದು, ಮೋಡ ಬಿತ್ತನೆ ಯಶಸ್ವಿಯಾಗುವ ಸಾಧ್ಯತೆಗಳಿವೆ.
ಸೋಮವಾರ ರಾಮನಗರದ ಮಾಗಡಿ ಹಾಗೂ ಇನ್ನಿತರ ಭಾಗದಲ್ಲಿ ವಿಮಾನ ಹಾರಾಟ ನಡೆಸಿದ್ದು, ದಟ್ಟವಾದ ಮೋಡಗಳಿಲ್ಲದ ಕಾರಣ ಮೊದಲ ದಿನದ ಮೋಡ ಬಿತ್ತನೆ ಪ್ರಯತ್ನ ವಿಫಲವಾಗಿತ್ತು.
ಇದನ್ನೂ ಓದಿ: ಮೋಡ ಬಿತ್ತನೆಗೆ ಆರಂಭದಲ್ಲೇ ವಿಘ್ನ! ಮೊದಲ ದಿನ ಏನಾಯ್ತು?
ಇದನ್ನೂ ಓದಿ: ಮಳೆಯಾಗ್ತಿರೋ ಹೊತ್ತಲ್ಲೇ ರಾಜ್ಯದಲ್ಲಿ ಮೋಡ ಬಿತ್ತನೆ- ಇಂದಿನಿಂದ 2 ತಿಂಗಳು ಬಿತ್ತನೆ ಕಾರ್ಯ