ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷಾ ತಯಾರಿಯ ಜೊತೆಗೆ ಹೂವು ಮಾರುವ ಯುವತಿ ಬನಶಂಕರಿಗೆ ಇಂದು ಲ್ಯಾಪ್ ಟಾಪ್ ಹಸ್ತಾಂತರ ಮಾಡಲಾಯಿತು. ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದ ಆದಿಶಕ್ತಿ ದೇವಾಲಯದಲ್ಲಿ ಹೂವು ಮಾರುವ ಯುವತಿ ಬನಶಂಕರಿ ಓದಿಗೆ ಹಲವು ಕೈಗಳು ನೆರವು ಮುಂದುವರಿಸಿದೆ.
- Advertisement 2
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಬನಶಂಕರಿ ಓದಿಗೆ ಸಹಾಯ ಆಗಲೀ ಎಂದು ಲ್ಯಾಪ್ ಟಾಪ್ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಮೀಷನರ್, ವಿದ್ಯೆ ಬಡತನ ದೂರ ಮಾಡುತ್ತದೆ. ಆಕೆಯ ಆಸಕ್ತಿ ಕಂಡು ನಾನು ಲ್ಯಾಪ್ ಟ್ಯಾಪ್ ವಿತರಣೆ ಮಾಡಿರುವೆ. ಇದನ್ನ ಯುವತಿ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲಿ ಎಂದರು.
- Advertisement 3
- Advertisement 4
ಇದೇ ವೇಳೆ ಯುವತಿ ಬನಶಂಕರಿ ಮಾತನಾಡಿ, ತುಂಬಾ ಖುಷಿ ಆಯಿತು. ಓದುವಾಗ ಈ ನೆರವು ಸಿಕ್ಕಿದು ನನ್ನ ಭಾಗ್ಯ ಎಂದರು. ನೆನ್ನೆಯಷ್ಟೇ ಪಬ್ಲಿಕ್ ಟಿವಿ ವತಿಯಿಂದ ಯುವತಿ ಓದಿಗಾಗಿ ಟ್ಯಾಬ್ ವಿತರಣೆ ಸಹ ಮಾಡಲಾಗಿದೆ. ಇದನ್ನೂ ಓದಿ: ಹೂ ಮಾರುವ ಹುಡ್ಗಿ ಮತ್ತು ಪಬ್ಲಿಕ್ ಟಿವಿ ಬಿಗ್ ಬುಲೆಟಿನ್ನ ಆ ಬ್ರೇಕ್..!