– ಹೈದರಾಬಾದ್ ಕೋಟೆಯಲ್ಲಿ ಅರಳಿದ ಕಮಲ
– ಟಿಆರ್ಎಸ್ 55, ಎಐಎಂಎಂಗೆ 44 ಸ್ಥಾನ
ಹೈದರಾಬಾದ್: ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್ಎಂಸಿ) ಚುನಾವಣೆಯಲ್ಲಿ ಬಿಜೆಪಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಮೂಲಕ ಮುಂದಿನ ವಿಧಾನಸಭಾ ಚುನಾವಣೆಗೆ ಈಗಲೇ ತನ್ನ ಅಡಿಪಾಯವನ್ನು ಗಟ್ಟಿ ಮಾಡಿದೆ.
150 ವಾರ್ಡ್ಗಳ ಪೈಕಿ 49ರಲ್ಲಿ ಬಿಜೆಪಿ ಜಯ ಸಾಧಿಸಿದೆ. ಸಿಎಂ ಚಂದ್ರಶೇಖರ್ ರಾವ್ ಅವರ ಟಿಆರ್ಎಸ್ 55, ಅಸಾದುದ್ದೀನ್ ಒವೈಸಿಯ ಎಐಎಂಎಂ 44 ವಾರ್ಡ್ಗಳನ್ನು ಗೆದ್ದುಕೊಂಡರೆ ಕಾಂಗ್ರೆಸ್ 2 ಸ್ಥಾನಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಸಾಧನೆಯೊಂದಿಗೆ ದಕ್ಷಿಣ ಭಾರತದಲ್ಲಿ ಕರ್ನಾಟಕ ಬಳಿಕ ತೆಲಂಗಾಣದಲ್ಲಿ ಅಧಿಕಾರ ಹಿಡಿಯಲು ಮಾಡಿದ ಮೊದಲ ದೊಡ್ಡ ಪ್ರಯತ್ನ ಫಲ ನೀಡಿದೆ. ಅಷ್ಟೇ ಅಲ್ಲದೇ ಚಂದ್ರಶೇಖರ್ ರಾವ್ ಮತ್ತು ಓವೈಸಿ ಕಪಿಮುಷ್ಠಿಯಲ್ಲಿದ್ದ ಮುತ್ತಿನಗರಿಗೆ ಬಿಜೆಪಿ ಮುತ್ತಿಗೆ ಹಾಕಿದಂತಾಗಿದೆ.
- Advertisement 2
The people of Hyderabad have made it clear what will be the results of the Telangana assembly elections (2023). I can say with confidence that people of Telangana have decided to say goodbye to the corrupt KCR government: BJP President JP Nadda https://t.co/eznwwhbN8E
— ANI (@ANI) December 4, 2020
- Advertisement 3
ವಿಶೇಷ ಏನೆಂದರೆ 2016ರ ಚುನಾವಣೆಯಲ್ಲಿ ಟಿಆರ್ಎಸ್ 99, ಎಐಎಂಎಂ 44, ಕಾಂಗ್ರೆಸ್ 3 ವಾರ್ಡ್ಗಳನ್ನು ಗೆದ್ದುಕೊಂಡಿದ್ದರೆ ಬಿಜೆಪಿ ಕೇವಲ 4 ವಾರ್ಡ್ಗಳನ್ನು ಮಾತ್ರ ಗೆದ್ದುಕೊಂಡಿತ್ತು. ಆದರೆ ಈ ಬಾರಿ ಬಿಜೆಪಿ ಈ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿತ್ತು. ಪರಿಣಾಮ ಗೃಹ ಸಚಿವ ಅಮಿತ್ ಶಾ ಆದಿಯಾಗಿ ಕೇಂದ್ರದ ಬಿಜೆಪಿ ನಾಯಕರು ವ್ಯಾಪಕ ಪ್ರಚಾರ ಕೈಗೊಂಡಿದ್ದರು.
- Advertisement 4
ಹೈದರಾಬಾದ್ನಲ್ಲಿ ಬಿಜೆಪಿ ಅಧಿಕಾರಕ್ಕೆ ಏರುವಷ್ಟು ವಾರ್ಡ್ ಗೆಲ್ಲದಿದ್ದರೂ ಪಕ್ಷ ಸಂಘಟನೆ ಬಲವಾಗಿದೆ.
I'd like to thank people of Hyderabad for having chosen BJP based on good governance model. It's a moral loss for TRS. As far as question of the mayor is concerned, we're committed to work for the welfare for the state & the people: Bhupender Yadav, BJP leader, on GHMC elections pic.twitter.com/PAhCiTfSLB
— ANI (@ANI) December 4, 2020
ಬಿಜೆಪಿ ಗೆದ್ದಿದ್ದು ಹೇಗೆ?
* ತೆಲಂಗಾಣದಲ್ಲಿ ಬೂತ್ ಮಟ್ಟದಲ್ಲಿ ಪಕ್ಷ ಬಲವರ್ಧನೆ
* ಬಿಜೆಪಿ ಅಗ್ರನಾಯಕರಾದ ಅಮಿತ್ಶಾ, ಜೆಪಿ ನಡ್ಡಾ, ಯೋಗಿ ಆದಿತ್ಯನಾಥ್, ತೇಜಸ್ವಿ ಸೂರ್ಯ, ಸಿಟಿ ರವಿ, ಸುಧಾಕರ್, ಸತೀಶ್ರೆಡ್ಡಿ ಪ್ರಚಾರ
* ಹೈದರಬಾದನ್ನು `ಮಿನಿ ಇಂಡಿಯಾ-ಐಟಿ ಹಬ್’ ಮಾಡ್ತೇವೆ ಎಂದಿದ್ದ ಅಮಿತ್ ಶಾ
* ಹೈದರಾಬಾದ್ ಹೆಸರನ್ನು `ಭಾಗ್ಯ ನಗರ’ ಮಾಡುತ್ತೇವೆ ಎಂದು ಘೋಷಣೆ
* ನಿಜಾಮರ ಸಂಸ್ಕೃತಿ ಬದಲಿಸ್ತೇವೆ ಎಂದಿದ್ದ ಯೋಗಿ ಆದಿತ್ಯನಾಥ್
* ಕೊರೊನಾ ಲಸಿಕೆ ಉಚಿತ ಮತ್ತು ಟೆಸ್ಟಿಂಗ್
* ಮುಸಿ ನದಿ ನವೀಕರಣ, ಉಚಿತ ನೀರು, 100 ಯುನಿಟ್ ಒಳಗೆ ಬಳಸಿದರೆ ಉಚಿತ ವಿದ್ಯುತ್
* ಮೆಟ್ರೋ, ಸಿಟಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ